ರಾಜಕೀಯ

ಸಹೋದರರ ನಡುವೆ ಮತ್ತೆ ಪೈಪೋಟಿ: ಸೊರಬದಲ್ಲಿ ಮಾಜಿ ಸಿಎಂ ಎಸ್ ಬಂಗಾರಪ್ಪ ಪುತ್ರರ ಸೆಣಸಾಟ

Ramyashree GN

ಶಿವಮೊಗ್ಗ: ಪ್ರತಿಸ್ಪರ್ಧಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರರು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನು ಪಡೆದುಕೊಳ್ಳುವ ಹೋರಾಟದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. 

1967 ರಿಂದ 1994 ರವರೆಗೆ ಲೋಕಸಭೆಗೆ ಆಯ್ಕೆಯಾಗುವವರೆಗೆ ಅವರ ತಂದೆ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಟಿಕೆಟ್ ಪಡೆದು ಪರಸ್ಪರ ಕಣಕ್ಕಿಳಿದಿದ್ದಾರೆ.
ಬಿಜೆಪಿ ಪ್ರತಿನಿಧಿಸುತ್ತಿರುವ ಕುಮಾರ್ ಬಂಗಾರಪ್ಪ ಅವರು ಸೊರಬದಿಂದ ಪುನರಾಯ್ಕೆ ಬಯಸಿದ್ದರೆ, ಅವರ ಕಿರಿಯ ಸಹೋದರ ಮಧು ಬಂಗಾರಪ್ಪ ಅವರು ಈ ಬಾರಿ ಗೆದ್ದೇ ತೀರುವ ಹುಮ್ಮಸ್ಸಿನಲ್ಲಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರು ಮಧು ಬಂಗಾರಪ್ಪ ಅವರನ್ನು 3,286 ಮತಗಳಿಂದ ಸೋಲಿಸಿದ್ದರು.

2018ರ ಚುನಾವಣೆಗೆ ಮುಂಚಿತವಾಗಿ ಕುಮಾರ್ ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಆದರೆ, ಸೊರಬದಿಂದ ಹಾಲಿ ಶಾಸಕ ಮಧು ಜೆಡಿಎಸ್‌ನಿಂದ ಮರು ಆಯ್ಕೆ ಬಯಸಿದ್ದರು. ಮಧು ಬಂಗಾರಪ್ಪ ಅವರು 2021ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

ಬಂಗಾರಪ್ಪ ಅವರು ಬದುಕಿದ್ದಾಗಲೇ 2004ರಿಂದಲೂ ಈ ಸಹೋದರರು ಚುನಾವಣೆಯಲ್ಲಿ ಎದುರಾಳಿಗಳಾಗಿದ್ದಾರೆ.

1996 (ಉಪಚುನಾವಣೆ), 1999, 2004 ಮತ್ತು 2018ರಲ್ಲಿ ನಾಲ್ಕು ಬಾರಿ ಸೊರಬವನ್ನು ಪ್ರತಿನಿಧಿಸಿರುವ ಕುಮಾರ್ ಬಂಗಾರಪ್ಪ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದರು.

ಈ ಇಬ್ಬರು ಕನ್ನಡ ಚಿತ್ರರಂಗದಲ್ಲಿಯೂ ನಂಟನ್ನು ಹೊಂದಿದ್ದು, ಕುಮಾರ್ ಬಂಗಾರಪ್ಪ ನಟರಾಗಿ ಮತ್ತು ಮಧು ಬಂಗಾರಪ್ಪ ನಟ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ಕುಮಾರ್ ಅವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಮಧು ಅವರು ಬಿಜೆಪಿ, ಜೆಡಿಎಸ್ ಮತ್ತು ಸಮಾಜವಾದಿ ಪಕ್ಷದೊಂದಿಗೆ ತಮ್ಮ ಒಡನಾಟವನ್ನು ಹೊಂದಿದ್ದರು.

SCROLL FOR NEXT