ರಾಜಕೀಯ

ರಾಜಕೀಯ ತೆವಲು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಿ: ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಟಾಂಗ್

Shilpa D

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನಡುವೆ ಟಾಕ್ ವಾರ್ ನಿಲ್ಲುವ ಲಕ್ಷಣವೇ ಕಾಣ್ತಿಲ್ಲ. ಮೊನ್ನೆಯಷ್ಟೇ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ವಿಚಾರದಲ್ಲಿ ಡಿಕೆ ಶಿವಕುಮಾಪ್ ಅವರನ್ನ ಕುಟುಕಿದ್ದ ಕುಮಾರಸ್ವಾಮಿಗೆ ನಿನ್ನೆ ಸಚಿವ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೇ ಕಾಂಗ್ರೆಸ್​ನವರ ಪಾಪದಿಂದ ಮಳೆ ಬರ್ತಿಲ್ಲ ಎನ್ನುವ ವಿಚಾರಕ್ಕೆ ಸಿಡಿಮಿಡಿಗೊಂಡ ಚಲುವರಾಯಸ್ವಾಮಿ.  ಕುಮಾರಸ್ವಾಮಿಯವರನ್ನಾದ್ರು ನೋಡಿ ಮಳೆ ಬರಬೇಕಲ್ವ? ಅವರು ಬಂದು ಪೂಜೆ ಮಾಡಲಿ, ಹಾಗಾದರೂ ಮಳೆ ಬರಲಿ. ರಾಜ್ಯದಲ್ಲಿ ಕುಮಾರಸ್ವಾಮಿ ಒಬ್ಬರೇ ಸತ್ಯ ಹರಿಶ್ಚಂದ್ರರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರ ಕಾಲದಲ್ಲಿಯು ಮಳೆ, ಬರ ಎರಡು ಬಂದಿದೆ. ಮಳೆ ಅಧಿಕಾರದಲ್ಲಿ ಕೂತವರನ್ನು ನೋಡಿ ಬರಲ್ಲ, ರಾಜಕೀಯ ತೀಟೆ ಬಿಟ್ಟು, ವಾಸ್ತವವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಕಿಡಿಕಾರಿದ್ದಾರೆ.

SCROLL FOR NEXT