ರಾಜಕೀಯ

ಬೆಳಗಾವಿ: ನಾನೊಬ್ಬ ಹಿಂದೂ ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುವ  ವ್ಯಕ್ತಿಯ ಅಗತ್ಯವಿದೆ- ಅಸ್ಸಾಂ ಸಿಎಂ ಹಿಮಂತಾ ಬಿಸ್ವಾ ಶರ್ಮಾ

Nagaraja AB

ಬೆಳಗಾವಿ: ನಾನೊಬ್ಬ ಹಿಂದೂ ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುವ  ವ್ಯಕ್ತಿಯ ಅಗತ್ಯವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಎಂದು ಹೆಮ್ಮೆಯಿಂದ ಹೇಳುವ ಅನೇಕ ಜನರಿದ್ದಾರೆ. ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ ಆದರೆ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳುವ ವ್ಯಕ್ತಿ ನಮಗೆ ಬೇಕು. ಭಾರತಕ್ಕೆ ಇಂದು ಅಂತಹ ವ್ಯಕ್ತಿಯ ಅಗತ್ಯವಿದೆ ಎಂದರು. 

ಕಾಂಗ್ರೆಸ್ ಮತ್ತೆ ಭಾರತವನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಹಿಂದಿನ ಮೊಘಲರು ದೇಶವನ್ನು ದುರ್ಬಲಗೊಳಿಸಿದ್ದರು. ಕಾಂಗ್ರೆಸ್ ಇಂದಿನ ಹೊಸ ಮೊಘಲ್, ರಾಮಮಂದಿರ ನಿರ್ಮಾಣಕ್ಕೆ ಅವರು ಆಕ್ಷೇಪಿಸುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.

SCROLL FOR NEXT