ಸ್ಪೀಕರ್ ಯುಟಿ ಖಾದರ್ 
ರಾಜಕೀಯ

ಯುಟಿ ಖಾದರ್ 'ಧಾರ್ಮಿಕ ಮತಾಂಧ': ಸ್ಪೀಕರ್ ವಿರುದ್ಧ ಬಿಜೆಪಿ ಕೆರಳಿ ಕೆಂಡವಾಗಿದ್ದೇಕೆ?

ಯುಟಿ ಖಾದರ್ ಅವರ ಹೇಳಿಕೆಯಿಂದ ಅವರ ಜಿಹಾದಿ ಮನಸ್ಥಿತಿ ಬಹಿರಂಗಗೊಂಡಿದೆ ಎಂದು ಕುಂಪಾಲ ಅವರು ವಾಗ್ದಾಳಿ ನಡೆಸಿದರು.

ಮಂಗಳೂರು: ಹಿಂದುತ್ವ ಕಾರ್ಯಕರ್ತ ಮತ್ತು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ 2022 ರಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಜಿಲ್ ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ಶನಿವಾರ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಾದರ್ ಅವರು, ಫಾಜಿಲ್ ಅವರ ತಂದೆ ಮತ್ತು ಸಹೋದರರೊಂದಿಗೆ ಮಾತನಾಡಿದ್ದು, ಅವರು ಸುಹಾಸ್ ಶೆಟ್ಟಿ ಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಕೊಲೆ 'ವೈಯಕ್ತಿಕ ದ್ವೇಷ'ದಿಂದ ನಡೆದಿರಬಹುದು ಎಂದು ಖಾದರ್ ತಿಳಿಸಿದ್ದರು.

ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಫಾಜಿಲ್ ಸಹೋದರ ಆದಿಲ್, ಸುಹಾಸ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಜಿಲ್ಲೆಯ ಶಾಸಕರು ಸೇರಿದಂತೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಖಾದರ್ ಅವರನ್ನು 'ಧಾರ್ಮಿಕ ಮತಾಂಧ' ಎಂದು ಟೀಕಿಸಿದರು.

ಫಾಜಿಲ್ ಸಹೋದರ ಕೊಲೆಯಲ್ಲಿ ಭಾಗಿಯಾಗಿರುವ ಬಗ್ಗೆ ಖಾದರ್ ಈಗ ಏನು ಹೇಳುತ್ತಾರೆ? ಬಂಧನವಾಗುವ ಮೊದಲೇ ಸ್ಪೀಕರ್ ಅಂತಹ ಹೇಳಿಕೆ ನೀಡಿದರೆ ಪೊಲೀಸರು ನ್ಯಾಯಯುತ ತನಿಖೆ ನಡೆಸುವುದು ಹೇಗೆ? ಸ್ಪೀಕರ್ ಆಗಿ ಅವರು ಅಂತಹ ಹೇಳಿಕೆಯನ್ನು ಹೇಗೆ ನೀಡಬಹುದೇ? ಎಂದು ಕುಂಪಲ ಪ್ರಶ್ನಿಸಿದರು.

ಯುಟಿ ಖಾದರ್ ಅವರ ಹೇಳಿಕೆಯಿಂದ ಅವರ ಜಿಹಾದಿ ಮನಸ್ಥಿತಿ ಬಹಿರಂಗಗೊಂಡಿದೆ ಎಂದು ಕುಂಪಾಲ ಅವರು ವಾಗ್ದಾಳಿ ನಡೆಸಿದರು.

ಆರೋಪಿಗಳು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಮೂಲಕ ಸುಹಾಸ್ ಹತ್ಯೆಯನ್ನು ಘೋಷಿಸಿದ್ದರು ಎಂದು ಆರೋಪಿಸಿ ಕುಂಪಾಲ, ಪೊಲೀಸರು ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

"ಸರ್ಕಾರ, ಪೊಲೀಸರು ಮತ್ತು ಎಲ್ಲರೂ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಅವರು ತ್ವರಿತವಾಗಿ ಕಾರ್ಯನಿರ್ವಹಿಸಿದ್ದರೆ, ಸುಹಾಸ್ ಇಂದು ಜೀವಂತವಾಗಿರುತ್ತಿದ್ದರು. ಬಜ್ಪೆ ಪೊಲೀಸರ ಮೇಲೆ ಬಲವಾದ ಅನುಮಾನವಿದೆ ಮತ್ತು ಅವರ ಪಾತ್ರದ ಬಗ್ಗೆ ತನಿಖೆ ಮಾಡಬೇಕು" ಎಂದು ಅವರು ಒತ್ತಾಯಿಸಿದರು.

ಗೃಹ ಸಚಿವ ಜಿ ಪರಮೇಶ್ವರ ಅವರು ಕೋಮು ವಿರೋಧಿ ಪಡೆ ರಚಿಸುವ ಘೋಷಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಸುಹಾಸ್ ಹತ್ಯೆಯಲ್ಲಿ ನ್ಯಾಯ ಸಿಗುವ ಬಗ್ಗೆ ಸ್ವಲ್ಪವೂ ಭರವಸೆ ಇಲ್ಲ. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ