ಜಮೀರ್ ಆಹ್ಮದ್ ಖಾನ್ 
ರಾಜಕೀಯ

ಎಲ್ಲಾ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ: ಕುಮಾರಸ್ವಾಮಿನಾ ಯಾರು ಕೇಳ್ತಾರೆ; ಜಮೀರ್ ವ್ಯಂಗ್ಯ!

ಕಾಸರಗೂಡು, ಕೊಚ್ಚಿ ಎಲ್ಲೆಡೆ ಸಿದ್ದರಾಮಯ್ಯ ಅವರನ್ನು ಜನ ಕೇಳ್ತಾರೆ. ಈ ಕುಮಾರಸ್ವಾಮಿ ಅವರನ್ನು ಯಾರು ಎಲ್ಲಿ ಕೇಳ್ತಾರೆ?

ಬಾಗಲಕೋಟೆ: ಕಾಂಗ್ರೆಸ್​ ಅಭ್ಯರ್ಥಿ ಪರ ಕಣಕ್ಕಿಳಿದ ವಸತಿ​ ಸಚಿವ ಜಮೀರ್ ಅಹ್ಮದ್ ಖಾನ್​​, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜನಪ್ರಿಯತೆಯನ್ನು ಲೇವಡಿ ಮಾಡಿದ್ದಾರೆ. ​

ಬಾಗಲಕೋಟೆಯಲ್ಲಿ ಉಮೇಶ ಮೇಟಿ ಪರ ಬಿರುಸಿನ ಪ್ರಚಾರ ಕೈಗೊಂಡ ಜಮೀರ್​, ಈಗ ಎಲ್ಲ ಕಡೆಯೂ ಸಿದ್ದರಾಮಯ್ಯ ಬೇಕು ಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ರಾಜಕಾರಣದಲ್ಲಿ ಎಲ್ಲ ರಾಜಕಾರಣಿಗಳಿಗೆ ದಿನಗಳದಂತೆ ಜನಪ್ರಿಯತೆ ಕಡಿಮೆ ಆಗುತ್ತೆ. ಆದರೆ, ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಜಾಸ್ತಿಯೇ ಆಗ್ತಿದೆ, ದಟ್​ ಇಸ್​ ಸಿದ್ದರಾಮಯ್ಯ ಎಂದರು.

ಕಾಸರಗೂಡು, ಕೊಚ್ಚಿ ಎಲ್ಲೆಡೆ ಸಿದ್ದರಾಮಯ್ಯ ಅವರನ್ನು ಜನ ಕೇಳ್ತಾರೆ. ಈ ಕುಮಾರಸ್ವಾಮಿ ಅವರನ್ನು ಯಾರು ಎಲ್ಲಿ ಕೇಳ್ತಾರೆ? ಬರೀ ಕರ್ನಾಟಕದಲ್ಲಿ ಮಾತ್ರ. ಕುಮಾರಸ್ವಾಮಿಗೆ 2006ರಿಂದ 2008 ರವರೆಗೆ ಇದ್ದ ಜನಪ್ರಿಯತೆ ಈಗ ಇದೆಯಾ? ಅದು ಸಿದ್ದರಾಮಯ್ಯಗೆ ಇದೆ ಎಂದು ಹೇಳಿದರು.

ಎಲ್ಲ ಕಡೆಯೂ ಕಾಂಗ್ರೆಸ್ ಪಕ್ಷಕ್ಕೆ ಮತ ಎನ್ನುತ್ತಿದ್ದಾರೆ. ಎಚ್.ವೈ.ಮೇಟಿ ಮಾಡಿದ ಕೆಲಸವನ್ನು ನೆನೆಸಿಕೊಂಡು, ಅವರು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಜನ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಕಳೆದ ಸಲ ಕಡಿಮೆ ಅಂತರದಲ್ಲಿ ಗೆಲ್ಲಿಸಿದ್ದೇವೆ. ಈ ಸಲ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಇರಾನ್'ನಿಂದ ಡ್ರೋನ್-ಮಿಸೈಲ್ ದಾಳಿ; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರೀ ಅಗ್ನಿ ಅವಘಡ, ಹೆಚ್ಚಿದ ಭೀತಿ

ಗ್ರೀನ್‌ಲ್ಯಾಂಡ್'ಗೆ ಅಮೆರಿಕಾ ಪಟ್ಟು: ಇರಾನ್ ವಿಚಾರದಲ್ಲಿ ಸಹಕರಿಸದ್ದಕ್ಕೆ NATOನ್ನು ‘ಪೇಪರ್ ಟೈಗರ್’ ಎಂದು ಟೀಕಿಸಿದ ಟ್ರಂಪ್, ಮಿತ್ರರಾಷ್ಟ್ರಗಳ ನಡುವೆ ಭಾರೀ ಬಿರುಕು..!

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

IPL 2026: ಮಳೆಯಿಂದಾಗಿ KKR ಮತ್ತು PBKS ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ 1 ಅಂಕ!

‘ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳಿ’: ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ

SCROLL FOR NEXT