ವಿಪಕ್ಷ ನಾಯಕ ಆರ್. ಅಶೋಕ್ 
ರಾಜಕೀಯ

ಅಡ್ಡಮತದಾನ ಮಾಡಿದವರಿಗೆ ಈ ಜನ್ಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ: ಆರ್. ಅಶೋಕ್ ಆಕ್ರೋಶ

ವಿಧಾನ ಪರಿಷತ್​​​ ಚುನಾವಣೆಯಲ್ಲಿನ ಅಡ್ಡಮತದಾನ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದ್ದು ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕೆಂಡಕಾರಿದ್ದಾರೆ. ಇನ್ನು ಅಡ್ಡಮತದಾನ ಮಾಡಿದ ಶಾಸಕರು ಯಾರು ಎಂಬುದನ್ನು ಪತ್ತೆ ಹಚ್ಚಲು ಬಿಜೆಪಿ ಈಗಾಗಲೇ ಸತ್ಯಶೋಧಾನ ಸಮಿತಿ ರಚನೆ ಮಾಡಿದೆ.

ಬೆಂಗಳೂರು: ವಿಧಾನ ಪರಿಷತ್​​​ ಚುನಾವಣೆಯಲ್ಲಿನ ಅಡ್ಡಮತದಾನ ಬಿಜೆಪಿಗೆ ತೀವ್ರ ಮುಜುಗರ ತಂದೊಡ್ಡಿದ್ದು ಈ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕೆಂಡಕಾರಿದ್ದಾರೆ. ಇನ್ನು ಅಡ್ಡಮತದಾನ ಮಾಡಿದ ಶಾಸಕರು ಯಾರು ಎಂಬುದನ್ನು ಪತ್ತೆ ಹಚ್ಚಲು ಬಿಜೆಪಿ ಈಗಾಗಲೇ ಸತ್ಯಶೋಧಾನ ಸಮಿತಿ ರಚನೆ ಮಾಡಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಅಡ್ಡಮತದಾನ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅವರು ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಒಂದು ಸವಾಲಾಗಿದೆ ಎಂದರು. ಯಾರನ್ನೇ ಕೇಳಿದರೂ ಧರ್ಮಸ್ಥಳದಲ್ಲಿ ಬಂದು ನಾವು-ಆಣೆ- ಪ್ರಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದೇ ನಮಗೂ ಆಶ್ಚರ್ಯವೆನಿಸಿದೆ.

ಧರ್ಮಸ್ಥಳದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅಡ್ಡಮತದಾನ ಮಾಡಿದವರು ಯಾರೆಂಬುದನ್ನು ಪತ್ತೆ ಹಚ್ಚುತ್ತೇವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದರು. ಅಡ್ಡಮತದಾನ ಮಾಡಿದವರನ್ನು ಮೊದಲು ಪತ್ತಿ ಹಚ್ಚಿ ಈ ಬಗ್ಗೆ ಕೇಂದ್ರದ ನಾಯಕರೊಂದಿಗೆ ಚರ್ಚಿಸುತ್ತೇವೆ. ಮುಂದೆ ಯಾರೂ ಯಾವತ್ತೂ ಇಂತಹ ತಪ್ಪು ಮಾಡಬಾರದು. ಈ ಜನ್ಮದಲ್ಲಿ ಆ ಶಾಸಕರು ಚುನಾವನೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಗುಡುಗಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಲುದಾರಿಯಲ್ಲಿ ನಡೆಯುವ ಹಕ್ಕಿಗೆ ಮೂಲಭೂತ ಹಕ್ಕಿನ ಮಾನ್ಯತೆ ಸಿಗುವುದಾದರೆ, ಮತದಾನದ ಹಕ್ಕಿಗೆ ಯಾಕಿಲ್ಲ?; ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

'ಕೈ' ಪಡೆಗೆ ಹೊಸ ನಾಯಕತ್ವ; KPCC ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ..!

Cricket: ಇಂಗ್ಲೆಂಡ್ ಪ್ರವಾಸಕ್ಕೆ 'ಬಲಿಷ್ಟ ಭಾರತ'; ಏಕದಿನ ತಂಡ ಪ್ರಕಟ, ಕೊಹ್ಲಿ, ಬುಮ್ರಾ ವಾಪಸ್, ಬ್ರಾರ್ ಗೂ ಅವಕಾಶ

NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಆಕ್ರೋಶ: ಜಂತರ್ ಮಂತರ್‌ನಲ್ಲಿ ಮುಂದುವರೆದ Cockroach Janta Party ಪ್ರತಿಭಟನೆ; 'ನ್ಯಾಯ ಸಿಗುವವರೆಗೂ ಹಿಂದೆ ಸರಿಯಲ್ಲ'- ದೀಪ್ಕೆ ಘೋಷಣೆ

ರಕ್ಷಣಾ ಕ್ಷೇತ್ರದಲ್ಲಿ ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲ್ಲ: ಪ್ರಧಾನಿ ಮೋದಿ