ಸಂಗ್ರಹ ಚಿತ್ರ 
ಸುದ್ದಿ-ಸಮಾಚಾರ

ಬ್ಲೂಬಾಯ್ಸ್ ಗೆ ಕವಿಗೋಷ್ಠಿಯಲ್ಲಿ ತಿವಿತ

ಶ್ರವಣಬೆಳಗೊಳ: ಹಿಂದಿನ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧದಲ್ಲಿ ನೀಲಿ ಚಿತ್ರ ನೋಡಿದ ಪ್ರಸಂಗವನ್ನೇ ವಸ್ತುವಾಗಿಸಿಕೊಂಡು ರಾಜಕಾರಣಿಗಳ ವರ್ತನೆಯನ್ನು ಲೇಖನಿ ಮೂಲಕ ತಿವಿಯಲಾಯಿತು.

ಸುಬ್ಬು ಹೊಲೆಯಾರ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚು ಕವಿಗಳ ಲೇಖನಿಗೆ ರಾಜಕಾರಣಿಗಳು, ಮಠಾಧೀಶರು, ದೇವಮಾನವರು, ಕಾಮುಕರು ವಸ್ತುವಾಗಿ, ಕವಿಗಳು ಪ್ರೇಕ್ಷೇಕರ ಚಪ್ಪಾಳೆ ಗಿಟ್ಟಿಸಿದರು. 3 ಗಂಟೆಗೂ ಹೆಚ್ಚು ಕಾಲ ನಡೆದ ಕವಿಗೋಷ್ಠಿಯಲ್ಲಿ ಹುಸೇನ್ ಭಾಷಾ ಅವರ `ಪ್ರಚಲಿತ ವಿಚಲಿತ' ಪದ್ಯವು
ಬಿಜೆಪಿ ಸರ್ಕಾರದಲ್ಲಿ ಸಚಿವರು ಸದನದಲ್ಲಿ ಮೊಬೈಲ್ ನಲ್ಲಿ ನೀಲಿಚಿತ್ರ ನೋಡಿದ ಪ್ರಸಂಗಕ್ಕೆ ಛಾಟಿ ಬೀಸಿತು. ಇದಲ್ಲದೆ ಎಂಜಲೆಲೆ ಮೇಲೆ ಉರುಳಾಡುವ ಮಡೆಸ್ನಾನ, ಅಡ್ಡಪಲ್ಲಕ್ಕಿಗೂ, ಸ್ವಯಂಘೋಷಿತ ದೇವಮಾನವರ ಬಗ್ಗೆಯೂ ಕವಿಗಳು ಕತ್ತಿ ಝಳಪಿಸಿದರು.

ಅರ್ಥವತ್ತಾಗಿ ಕವಿತೆ ಓದಿದ ಗುಬ್ಬಿಗೂಡು ರಮೇಶ್ ಅವರ `ನನ್ನ ಕವಿತೆ' ಜೋರು ಚಪ್ಪಾಳೆ ಗಿಟ್ಟಿಸಿತು. ಇನ್ನು ಗುರುದೇವಿ ಹುಲೆಪ್ಪನವರ ಮಠ ಅವರು ಬರೆದ `ಕವಿತೆಗೆ  ಹುಮಾನ' ಕೂಡ ನವಿರಾದ ಹಾಸ್ಯದ ಮೂಲಕ ಗಮನ ಸೆಳೆಯಿತು. ಇನ್ನು ರೆಹಮಾನ್ ಮುಲ್ಲಾ ಅವರು ಬಸವಣ್ಣನ ಕುರಿತು ಬರೆದ `ಪ್ರಿಯ ಅಣ್ಣನಿಗೆ' ಪದ್ಯದಲ್ಲಿ ಕಲ್ಯಾಣ ಕ್ರಾಂತಿಯ ಹರಿಕಾರ ಕೂಡಲ ಸಂಗಮನ ನಾಮಾಂಕಿತ ಬಸವಣ್ಣನ ಸಾಮಾಜಿಕ ಕ್ರಾಂತಿಯನ್ನು ನೆನಪಿಸಿಕೊಳ್ಳುತ್ತಾ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಮೌಲ್ಯಮಾಪನ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT