ವರ್ಣರಂಜಿತ ಎತ್ತಿನಗಾಡಿಯಲ್ಲಿ ತಮ್ಮ ಪತ್ನಿಯ ಜೊತೆ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯ 
ಸುದ್ದಿ-ಸಮಾಚಾರ

ಸಮಾನತೆ ಸಾರಿದ ಗೊಮ್ಮಟನ ನಾಡಿನಲ್ಲಿ ದಲಿತ ಕವಿಯ ಅದ್ಧೂರಿ ಮೆರವಣಿಗೆ

೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಸಮ್ಮೇಳನಾಧ್ಯಕ್ಷರ

ಶ್ರವಣಬೆಳಗೊಳ: ೮೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಂದು ಶನಿವಾರ ಎತ್ತಿನ ಗಾಡಿಯಲ್ಲಿ ಅದ್ಧೂರಿಯಾಗಿ ನಡೆಯಿತು. ವರ್ಣರಂಜಿತ ಎತ್ತಿನಗಾಡಿಯಲ್ಲಿ ತಮ್ಮ ಪತ್ನಿಯ ಜೊತೆ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯ ನಗು ಮುಖ ಬೀರಿ ಎಲ್ಲರತ್ತ ಕೈಬೀಸಿ ಶುಭ ಕೋರುತ್ತಿದ್ದುದು ಸಾಮಾನ್ಯವಾಗಿತ್ತು.

ಸಾವಿರಾರು ಜನ ಈ ಮೆರವಣಿಗೆಗೆ ಸಾಕ್ಷಿಯಾದರು. ಮನೆಗಳ ಮೇಲೆ ನಿಂತು, ಫೋಟೊಗಳನ್ನು, ವಿಡಿಯೋಗಳನ್ನು ತಮ್ಮ ಮೊಬೈಲ್ಗಳ ಮೂಲಕ ಚಿತ್ರೀಕರಿಸುತ್ತಿದ್ದ ದೃಷ್ಯ ಎಲ್ಲೆಡೆ ಕಂಡುಬಂತು. ಮೆರವಣಿಗೆ ಜೊತೆ ಹೊರಟ ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆದವು.

ನೂರಾರು ಸುಸಜ್ಜಿತ ಪುಸ್ತಕ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ. ಬೃಹತ್ ವೇದಿಕೆ ನಾಳೆ ಸಮ್ಮೇಳನದ ಗೋಷ್ಠಿಗಳಿಗೆ ನೆಲಯಾಗಲಿದೆ. ವಾರ್ತಾ ಇಲಾಖೆಯ ತಾತ್ಕಾಲಿಕ ಕಛೇರಿಯ ಎದುರು ನಿರ್ಮಿಸಲಾಗಿರುವ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಪ್ರತಿಮೆಗಳು ಕೂಡ ಪ್ರಮುಖ ಆಕರ್ಷಣೆ.

ನಾಳೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT