ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಬಳಕೆದಾರರು ಹೆಚ್ಚು ಹಣಕಾಸು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ: ಅಧ್ಯಯನ

ನಮ್ಮ ಹಣಕಾಸಿನ ನಿರ್ಧಾರಗಳನ್ನು ಫೇಸ್ ಬುಕ್ ಹೇಗೆ ಪ್ರಭಾವಿಸಬಲ್ಲುದು ಎಂದು ಎಂದಾದರು ಚಿಂತಿಸಿದ್ದೀರಾ? ಫೇಸ್ ಬುಕ್ಕಿನ ಸುದ್ದಿಗಳನ್ನು ನೋಡಿ ಹೂಡಿಕೆ

ಮೆಲ್ಬರ್ನ್: ನಮ್ಮ ಹಣಕಾಸಿನ ನಿರ್ಧಾರಗಳನ್ನು ಫೇಸ್ ಬುಕ್ ಹೇಗೆ ಪ್ರಭಾವಿಸಬಲ್ಲುದು ಎಂದು ಎಂದಾದರು ಚಿಂತಿಸಿದ್ದೀರಾ? ಫೇಸ್ ಬುಕ್ಕಿನ ಸುದ್ದಿಗಳನ್ನು ನೋಡಿ ಹೂಡಿಕೆ ಮಾಡುವ ಅಥವಾ ಜೂಜಾಡುವ ಬಳಕೆದಾರರು ತಮ್ಮ ದುಡ್ಡಿನ ಜೊತೆ ಅಜಾಗರೂಕರಾಗಿರುತ್ತಾರೆ ಎಂದು ಆಸ್ಟ್ರೇಲಿಯಾ ಸಂಶೋಧನೆಯೊಂದು ತಿಳಿಸಿದೆ.

ತಮ್ಮ ಹಣಕಾಸಿನ ನಷ್ಟಕ್ಕೆ ಫೇಸ್ ಬುಕ್ ಬಳಕೆದಾರರು ಅಂತರ್ಜಾಲ ಸಾಮಾಜಿಕ ಗುಂಪುಗಳಿಂದ ಸಮಾಧಾನ ಪಡೆದುಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಸಿಡ್ನಿಯ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಾರುಕಟ್ಟೆ ಪ್ರವೀಣ ಯೂಜೀನ್ ಚ್ಯಾನ್ ಅವರು ಹೇಳುವಂತೆ ಫೇಸ್ ಬುಕ್ ಸುದ್ದಿಗಳನ್ನು ಗಮನಿಸದ ನಂತರ ಅದರ ಬಳಕೆದಾರರು ಅಂತರ್ಜಾಲ ಹೂಡಿಕೆ, ಅಥವಾ ಜೂಜಾಟ ಮತ್ತು ಕೆಸಿನೋಗಳಿಗೆ ಹೋಗುವುದನ್ನು ಒಂದು ಘಂಟೆಯಾದರು ವಿಳಂಬಿಸಬೇಕು ಎಂದು ತಿಳಿಸಿದ್ದಾರೆ ಎಂದು ವ್ಯಾಲ್ಯೂವಾಕ್.ಕಾಂ ವರದಿ ಮಾಡಿದೆ.

ಹೆಚ್ಚು ಸಮಯ ಕಳೆದಂತೆ ತಪ್ಪು ನಿರ್ಧಾರ ಕೈಗೊಳ್ಳುವುದು ಕಡಿಮೆಯಾಗುತ್ತದೆ ಆದರೆ ಫೇಸ್ ಬುಕ್ ಅನ್ನು ಆಗಾಗ ನೋಡುವವರಿಗೆ ಈ ಅಜಾಗರೂಕ ನಿರ್ಧಾರಗಳನ್ನು ಕೈಗೊಳ್ಳುವುದು ಚಟವಾಗಿ ದಿನಕ್ಕೆ ಹಲವು ಬಾರಿ ಇದಕ್ಕೆ ಸೋಲುತ್ತಾರೆ ಎಂದು ಅಧ್ಯಯನ ತಿಳಿಸಿದೆ.

"ಫೇಸ್ ಬುಕ್ ಬಳಕೆದಾರ ಆಗಿರುವುದರಿಂದ ಹಣಕಾಸು ಅಪಾಯ ಒದಗುವುದಿಲ್ಲ... ಆದರೆ ಫೇಸ್ ಬುಕ್ ಅನ್ನು ಸದಾ ಜಾಲಾಡುವವರು ಹೆಚ್ಚು ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿದಾಗ ಹೀಗಾಗುತ್ತದೆ" ಎಂದು ಚ್ಯಾನ್ ತಿಳಿಸಿದ್ದಾರೆ.

ಫೇಸ್ ಬುಕ್ ಫೀಡ್ ಗಳನ್ನು ನೋಡಿ ಅಪಾಯಕಾರಿ ಹೂಡಿಕೆಗಳನ್ನು ಮಾಡುವುದು ಏಕೆಂದರೆ ತಮ್ಮ ಕುಟುಂಬ ಮತ್ತು ಗೆಳೆಯರು ತಮ್ಮ ನೆರವಿಗೆ ಬರುತ್ತಾರೆ ಎಂಬ ತಪ್ಪು ಗ್ರಹಿಕೆ ಸದಾ ಮನಸ್ಸಿನಲ್ಲಿ ಉಳಿದುಬಿಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT