ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್ 
ವಿಜ್ಞಾನ-ತಂತ್ರಜ್ಞಾನ

ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್

ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. 

ಪ್ಯಾರಿಸ್: ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. 

ಏಡ್ಸ್ ವೈರಸ್ ಗೆ ಸಂಬಂಧಿಸಿದಂತೆ ನಡೆದ ಸಂಶೋಧನೆಯಲ್ಲಿ ಸಹ-ಸಂಶೋಧಕರಾಗಿದ್ದ ಪ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಈ ಆರೋಪ ಮಾಡಿದ್ದಾರೆ. 2008 ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಈಗ ಕೊರೋನಾ ವೈರಸ್ ಬಗ್ಗೆ ಮಾತನಾಡಿರುವ ಮೊಂಟಾಗ್ನಿಯರ್, ಚೀನಾದ ಪ್ರಯೋಗಾಲಯದಲ್ಲಿ ಏಡ್ಸ್ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಈ ವೈರಸ್ ನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಇದು ನೈಸರ್ಗಿಕವಾಗಿ ಉತ್ಪತ್ತಿಯಾಗಿರುವ ವೈರಸ್ ಅಲ್ಲ. ಮಾನವ ಸೃಷ್ಟಿ ವೈರಸ್ ಎಂದು ಹೇಳಿದ್ದಾರೆ. 

ಪ್ರೆಂಚ್ ನ ಸುದ್ದಿವಾಹಿನಿಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲ್ಯೂಕ್ ಮೊಂಟಾಗ್ನಿಯರ್, ಕೊರೋನಾ ವೈರಸ್ ನ ಜೀನೋಮ್ (ಜೀವಕೋಶಗಳ ಗುಚ್ಛ)ದಲ್ಲಿ ಹೆಚ್ಐವಿ ಅಂಶಗಳು, ಮಲೇರಿಯಾ ವೈರಾಣು ಇರುವುದು ಪತ್ತೆಯಾಗಿದೆ. ಇದು  ಸ್ವಾಭಾವಿಕವಾಗಿ ಕಾಣಲು ಸಾಧ್ಯವಿಲ್ಲ ಆದ್ದರಿಂದ ಕೊರೋನಾ ವೈರಸ್ ನ ಜೀನೋಮ್ ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.  

2000 ರಿಂದಲೂ ಚೀನಾದ ವುಹಾನ್ ರಾಷ್ಟ್ರೀಯ ಬಯೋ ಸೇಫ್ಟಿ ಲ್ಯಾಬೊರೇಟ್ರಿಯಲ್ಲಿ ಇಂತಹ ಕೊರೋನ ವೈರಸ್ ಗಳಲ್ಲಿ ಪರಿಣತಿ ಪಡೆದಿದೆ. ಇಲ್ಲಿಂದಲೇ ಆಕಸ್ಮಿಕವಾಗಿ ಬಂದಿರಬೇಕು ಎಂದು ಮೊಂಟಾಗ್ನಿಯರ್ ಹೇಳಿದ್ದಾರೆ.

ಕೊರೋನಾ ವೈರಸ್ ಸೋರಿಕೆಯಾಗಿರುವುದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಮೆರಿಕ ಹೇಳಿತ್ತು. ಇದಾದ ಬೆನ್ನಲ್ಲೇ ಫ್ರೆಂಚ್ ನ ವೈರಾಲಜಿಸ್ಟ್ ಈ ಹೇಳಿಕೆ ನೀಡಿದ್ದಾರೆ. 

ಏಡ್ಸ್ ಹಾಗೂ ಪಾರ್ಕಿನ್ಸನ್ ಸಮಸ್ಯೆಗಳಿಗೆ ಪಪಾಯದಿಂದ ಉಂಟಾಗುವ ಉಪಯೋಗಗಳು, ಡಿಎನ್ಎ ಯಿಂದ ವಿದ್ಯುತ್ಕಾಂತೀಯ ಅಲೆಗಳು ಹೊರಹೊಮ್ಮುವುದು ಹೀಗೆ ಲ್ಯೂಕ್ ಮೊಂಟಾಗ್ನಿಯರ್ ಅವರ ಹಲವು ಸಂಶೋಧನಾ ಕೃತಿಗಳು ವಿವಾದಗಳಿಗೆ ಗುರಿಯಾಗಿತ್ತು. ವೈಜ್ಞಾನಿಕ ಸಮುದಾಯವೂ ಈ ಬಗ್ಗೆ ಟೀಕಿಸಿತ್ತು. ಫ್ರೆಂಚ್ ವೈರಾಲಜಿಸ್ಟ್ ಎಟಿಯೆನ್ ಸೈಮನ್-ಲೋರಿಯೆರ್ ಮೊಂಟಾಗ್ನಿಯರ್ ಅವರ ಹೇಳಿಕೆಗಳನ್ನು ಅಲ್ಲಗಳೆದಿದ್ದು, ಕೊರೋನಾ ವೈರಸ್ ನ ಸಮುದಾಯದ ಬೇರೆ ವೈರಾಣುಗಳಲ್ಲಿಯೂ ಮೊಂಟಾಗ್ನಿಯರ್ ಅವರು ಹೇಳಿರುವ ಅಂಶಗಳಿರುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT