ಸಂಜಯ್ ಸುಬ್ರಮಣ್ಯ (ಸಂಗ್ರಹ ಚಿತ್ರ) 
ವಿಶೇಷ

ರಾಮನವಮಿ ಸಂಗೀತಕ್ಕೆ ಸಜ್ಜಾಗಿ

ರಾಮನವಮಿ ಎಂದರೆ ಥಟ್ಟನೆ ನೆನಪಾಗುವುದು ಪಾನಕ, ಕೋಸಂಬರಿ ಮಜ್ಜಿಗೆ. ಆದರೆ ಬೆಂಗಳೂರಿನ ಮಟ್ಟಿಗೆ ಇದರ ಜೊತೆ ರಾಮಸೇವಾ ಮಂಡಲಿಯ ಸಂಗೀತೋತ್ಸವವನ್ನೂ ಸೇರಿಸಬೇಕಲ್ಲವೇ!

ಬೆಂಗಳೂರು: ರಾಮನವಮಿ ಎಂದರೆ ಥಟ್ಟನೆ ನೆನಪಾಗುವುದು ಪಾನಕ, ಕೋಸಂಬರಿ ಮಜ್ಜಿಗೆ. ಆದರೆ ಬೆಂಗಳೂರಿನ ಮಟ್ಟಿಗೆ ಇದರ ಜೊತೆ ರಾಮಸೇವಾ ಮಂಡಲಿಯ ಸಂಗೀತೋತ್ಸವವನ್ನೂ ಸೇರಿಸಬೇಕಲ್ಲವೇ!

ಹೌದು ೭೭ನೆ ಶ್ರೀ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದೆ. ಎಂದಿನಂತ ಒಂದು ತಿಂಗಳು ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರದಾದ್ಯಂತ ವಿವಿಧ ಕಲಾವಿದರು ಬೆಂಗಳೂರಿನ ಪ್ರತಿಷ್ಟಿತ ಕೋಟೆ ಮೈದಾನದಲ್ಲಿ ಶಾಸ್ತ್ರೀಯ ಸಂಗೀತವನ್ನು ಉಣಬಡಿಸಲಿದ್ದಾರೆ.

ಮಾರ್ಚ್ ೨೮ರಂದು ರಾಮನವಮಿ. ಅಂದು ಸಂಜೆ ಶೇಖ್ ಮಹಬೂಬ್ ಸುಭಾನಿ ಮತ್ತು ಕಾಲೀಶಾಬಿ ಮಹಬೂಬ್ ಅವರ ನಾದಸ್ವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರಕಲಿದೆ. ಅರುಣಾ ಸಾಯಿರಾಂ, ಕೆ ಜೆ ಯೇಸುದಾಸ್, ಹೈದರಾಬಾದ್ ಸಹೋದರರು, ಪಟ್ಟಾಭಿರಾಮ ಪಂಡಿತ್, ಬೆಂಗಳೂರು ಶಂಕರ್, ಸಂಜಯ್ ಸುಬ್ರಮಣ್ಯ, ಟಿವಿ ಗೋಪಾಲಕೃಷ್ಣನ್, ರಂಜನಿ ಮತ್ತು ಗಾಯತ್ರಿ, ತ್ರಿಚೂರು ಸಹೋದರರು, ವಿಶ್ವಮೋಹನ ಭಟ್ ಮುಂತಾದ ಖ್ಯಾತ ಕಲಾವಿದರು ಇಲ್ಲಿ ಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದ ಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.
http://ramanavami.org/schedule.php

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT