ಯಮರಾಜನ ವೇಷ ಹಾಕಿಕೊಂಡು ಚಲನ್ ಹಿಡಿದುಕೊಂಡು ಓಡಾಡುತ್ತಿರುವ ಟ್ರಾಫಿಕ್ ಪೊಲೀಸರು 
ವಿಶೇಷ

ರಾಂಚಿಯಲ್ಲಿ 'ಯಮ' ಟ್ರಾಫಿಕ್ ಪೊಲೀಸ್!

ಜಾರ್ಖಂಡ್ ನ ರಾಜಧಾನಿ ರಾಂಚಿಯ ಟ್ರಾಫಿಕ್ ಪೊಲೀಸ್ರು ಮೃತ್ಯುವಿನ ಬ್ರಾಂಡ್ ಅಂಬಾಸಿಡರ್ ಆಗಿ ಯಮ ದೇವರ ವೇಷ ಹಾಕಿಕೊಂಡು ನಗರವಿಡೀ ಸುತ್ತಾಡಿ ಜನಕ್ಕೆ ಟ್ರಾಫಿಕ್ ನಿಯಮದ ಬಗ್ಗೆ ಸಂದೇಶ ನೀಡುತ್ತಿದ್ದಾರೆ...

ಅತಿ ವೇಗದ ಚಾಲನೆ; ಮೃತ್ಯುವಿಗೆ ಆಹ್ವಾನ, 'Alert today – Alive tomorrow', 'Stop accidents before they stop you' ಇಂತಹ ಕ್ಯಾಚಿ ಸ್ಲೋಗನ್ ಗಳನ್ನು ಟ್ರಾಫಿಕ್ ಪೊಲೀಸರು  ರಸ್ತೆಗಳ ಬದಿ ಅಲ್ಲಲ್ಲಿ ನೇತು ಹಾಕಿರುತ್ತಾರೆ.

ಆದರೆ ಅದನ್ನು ಸುಮ್ಮನೆ ಓದಿಬಿಟ್ಟು ಮುಂದೆ ಹೋಗುವವರೇ ಹೆಚ್ಚು. ಟ್ರಾಫಿಕ್ ನಿಯಮವನ್ನು  ಪಾಲಿಸುವವರು ಕಡಿಮೆ. 'ಈ ಜನಕ್ಕೆ ಎಷ್ಟು ಹೇಳಿದ್ರೂ, ದಂಡ ಹಾಕಿದ್ರೂ ಬುದ್ಧಿನೇ ಬರಲ್ಲ, ಇನ್ಯಾವ ಶೈಲಿಯಲ್ಲಿ ಹೇಳ್ಬೇಕು, ದಿನಾ ಒಂದಲ್ಲ ಒಂದು ಕಡೆ ಆಕ್ಸಿಡೆಂಟ್ಸ್ ಆಗ್ತಾನೇ ಇರ್ತವೆ ಅಂತ  ಟ್ರಾಫಿಕ್ ಪೊಲೀಸರು  ಬೈತಾನೇ ಇರ್ತಾರೆ.

ಜಾರ್ಖಂಡ್ ನ ರಾಜಧಾನಿ ರಾಂಚಿಯ ಟ್ರಾಫಿಕ್ ಪೊಲೀಸ್ರು  ಬೇರೆ ಬೇರೆ ಶೈಲಿಯಲ್ಲಿ ಜನಕ್ಕೆ ಅರ್ಥವಾಗುವ ರೀತಿಯಲ್ಲಿ ಹೇಳಿ ನೋಡಿದ್ರು. ಗಾಂಧಿಗಿರಿ ಸ್ಟೈಲಲ್ಲಿ ಹೂ ಕೊಟ್ಟು ಪ್ರೀತಿಯಿಂದ ಹೇಳಿ ನೋಡಿದ್ರು, ಆದ್ರೆ ರಸ್ತೆ ನಿಯಮವನ್ನು ಉಲ್ಲಂಘಿಸುವವರ ಸಂಖ್ಯೆ ಕಡಿಮೆಯೇನು ಆಗ್ಲಿಲ್ಲ.

ಇನ್ನು ಈ ರೀತಿಯಾದ್ರೂ ತೋರ್ಸಿದ್ರೆ ಜನಕ್ಕೆ ಅರ್ಥ ಆಗಿ ಬದಲಾಗಬಹುದೇನೋ ಅಂತ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಮೃತ್ಯುವಿನ ಬ್ರಾಂಡ್ ಅಂಬಾಸಿಡರ್ ಆಗಿ ಯಮ ದೇವರ ವೇಷ ಹಾಕಿಕೊಂಡು ನಗರವಿಡೀ ಸುತ್ತಾಡಿ ಜನಕ್ಕೆ ಸಂದೇಶ ನೀಡುವುದು. ಇದು ಸ್ವಲ್ಪ ಮಟ್ಟಿಗಾದರೂ ಪರಿಣಾಮ ಉಂಟು ಮಾಡಬಹುದು ಎನ್ನುತ್ತಾರೆ ರಾಂಚಿ ಟ್ರಾಫಿಕ್ ಪೊಲೀಸ್ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆನಂದ್ ಜ್ಯೋತಿ ಮಿಂಜ್ . ಈಗ ರಾಂಚಿಯ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ಯಮನ ವೇಷ ಹಾಕಿಕೊಂಡು, ಕೈಯಲ್ಲಿ ಟ್ರಾಫಿಕ್ ಉಲ್ಲಂಘನೆ ಚಲನ್ ಹಿಡ್ಕೊಂಡು ಓಡಾಡ್ತಿದ್ದಾರೆ.


ಯಮರಾಜನ ಈ ಐಡಿಯಾ ವರ್ಕೌಟ್ ಆದರೆ ಬೇರೆ ರಾಜ್ಯಗಳಲ್ಲಿಯೂ ಇದನ್ನು ಫಾಲೋ ಮಾಡ್ಬಹುದು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT