ಹಿಮದ ಮಧ್ಯೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ರಕ್ಷಿಸಿದ ಸ್ಥಳೀಯ ನಾಯಿ 
ವಿಶೇಷ

ಹಿಮದ ಮಧ್ಯೆ ಕಳೆದು ಹೋಗಿದ್ದ ವಿದ್ಯಾರ್ಥಿಗಳಿಗೆ ನೆರವಾದ ಸ್ಥಳೀಯ ನಾಯಿ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಗೆಂದು ಬಂದಿದ್ದ ಪಂಜಾಬ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದುಕುಳಿಯಲು ಸ್ಥಳೀಯ ನಾಯಿಯೊಂದು ನೆರವಾದ...

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಗೆಂದು ಬಂದಿದ್ದ ಪಂಜಾಬ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬದುಕುಳಿಯಲು ಸ್ಥಳೀಯ ನಾಯಿಯೊಂದು ನೆರವಾದ ಕುರಿತು ವಿದ್ಯಾರ್ಥಿಯೊಬ್ಬರು ಹೀಗೆ ವಿವರಿಸಿದ್ದಾರೆ.

ಹಿಮಾಚಲ ಪ್ರದೇಶದ ಬಿಜಲೇಶ್ವರ್ ಮಹಾದೇವ ದೇವಸ್ಥಾನ ನೋಡಲು ಟ್ರೆಕಿಂಗ್ ಇಸ್ಟ್ರಕ್ಟರ್ ಸೇರಿದಂತೆ 8 ಮಂದಿ ಕುಲುಗೆ ಬಂದಿದ್ದೇವು. ಟ್ರೆಕಿಂಗ್ ವೇಳೆ ಹೆಚ್ಚಾಗಿ ಹಿಮ ಬೀಳುತ್ತಿದ್ದರಿಂದ ನಮಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಈ ವೇಳೆ ಸ್ಥಳೀಯ ನಾಯಿಯೊಂದು ನಮಗೆ ನೆರವಾಯಿತು. ಕಡಿದಾದ ಭೂಪ್ರದೇಶದಲ್ಲಿ ನಾವು ದೇವಸ್ಥಾನ ತಲುಪಲು ಹೆಚ್ಚು ಶ್ರಮವಹಿಸಬೇಕಾಯಿತು. ಆಗ ನಮಗೆ ನೇರವಾಗಿದ್ದೆ ಸ್ಥಳೀಯ ನಾಯಿ.

ನಮ್ಮ ಜತೆಗೂಡಿದ ನಾಯಿಗೆ ದಾರಿ ಮಧ್ಯೆ ಊಟವನ್ನು ಕೊಡಲು ಮುಂದಾದರೆ ಅದು ತಿನ್ನುತ್ತಿರಲಿಲ್ಲ ಕಾರಣವೇನು ಎಂಬುದು ನಮಗೆ ಗೊತ್ತಾಗಲಿಲ್ಲ. ಹಿಮಗಾಳಿ ಹಾಗೂ ಹೆಚ್ಚಾಗಿ ಹಿಮ ಬೀಳಲು ಆರಂಭಗೊಂಡಾಗ ದೇವಾಲಯದ ದಾರಿ ಮುಚ್ಚಿ ನಮಗೆ ತಿಳಿಯದಾಯಿತು. ಈ ವೇಳೆ ತಾಳ್ಮೆ ಕಳೆದುಕೊಳ್ಳದ ನಾಯಿ ನಮಗೆ ಮಾರ್ಗದರ್ಶಕನಾಗಿ ನಿಂತಿತು ಎಂದು ವಿದ್ಯಾರ್ಥಿ ಸೌರಭ್ ಶರ್ಮಾ ತಮ್ಮ ಪ್ರಯಾಣದ ನೈಜ್ಯತೆಯನ್ನು ವಿವರಿಸುತ್ತಾರೆ.

ಭಾರೀ ಹಿಮಪಾತದಿಂದಾಗಿ ನಾವು ದೇವಾಲಯಕ್ಕೆ ತೆರಳುವ ಪರಿಸ್ಥಿತಿಯಲ್ಲಿರಲಿಲ್ಲ. ಆಗ ನಾವು ಬಿಜಲೇಶ್ವರ ದೇವಾಲಯದಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದೇವು. ಈ ವೇಳೆ ಟೆಂಟ್ ವೊಂದನ್ನು ನಿರ್ಮಿಸಿ ರಕ್ಷಣೆ ಪಡೆದೆವು. ಆದರೆ ನಮ್ಮ ಜತೆಗಿದ್ದ ನಾಯಿ ಮಾತ್ರ ಟೆಂಟ್ ಒಳಗೆ ಬರದೆ ಹಗಲು ರಾತ್ರಿ ಟೆಂಟ್ ನ ಆಚೆಯೇ ಕಳೆಯಿತು. ಹಿಮಪಾತದಿಂದಾಗಿ ಕನಿಷ್ಠ 78 ಘಂಟೆಗಳ ಕಾಲ ನಾವು ಆಹಾರ ಹಾಗೂ ಪರ್ವತಾರೋಹಣ ಉಪಕರಣಗಳಿಲ್ಲದೆ ಟೆಂಟ್ ನಲ್ಲಿಯೇ ಕಳೆಯುವಂತಾಯಿತು ಎಂದರು.

ಈ ಮಧ್ಯೆ ಟ್ರೆಕಿಂಗ್ ಹೋದ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರಿಂದ ಇತ್ತ ಮಾರ್ಚ್ 11 ರಂದು ಸ್ವೀಸ್ ನ ಪರ್ವತಾರೋಹಿಗಳ ರಕ್ಷಣಾ ಕಾರ್ಯ ಆರಂಭಿಸಿ ಎರಡು ದಿನಗಳ ನಂತರ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT