ಮದುಮಗಳೇ ಇಲ್ಲದ ಈ ಮದುವೆಗೆ ಬಂದು ಉಂಡವರು 800 ಮಂದಿ! 
ವಿಶೇಷ

ಮದುಮಗಳೇ ಇಲ್ಲದ ಈ ಮದುವೆಗೆ ಬಂದು ಉಂಡವರು 800 ಮಂದಿ!

ಜೀವನದಲ್ಲೊಮ್ಮೆ ಆಗುವ ವಿವಾಹವು ಎಂದಿಗೂ ಅವಿಸ್ಮರಣೀಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂಬ್ಬರು ತನ್ನ ಮಗನಿಗೆ ವಧುವೇ ಸಿಗದಿದ್ದರೂ ಸಹ....

ಹಿಮ್ಮತ್‌ನಗರ: ಜೀವನದಲ್ಲೊಮ್ಮೆ ಆಗುವ ವಿವಾಹವು ಎಂದಿಗೂ ಅವಿಸ್ಮರಣೀಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂಬ್ಬರು ತನ್ನ ಮಗನಿಗೆ ವಧುವೇ ಸಿಗದಿದ್ದರೂ ಸಹ ಅವನ ಆಸೆಯಂತೆ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಸಿದ್ದಾರೆ! ಹೌದು ವಧು ಇಲ್ಲದೇ ಹೋದರೂ ತನ್ನ 27  ವರ್ಷದ ಮಗ ಅಜಯ್ ಬರೋತ್ ಗೆ ಆತನ ತಂದೆ ಅವನಿಷ್ಟದಂತೆ ಮದುವೆ ಮಾಡಿಸಿದ್ದಾರೆ.
ಗುಜರಾತಿನಲ್ಲಿ ನದೆದಿರುವ ಈ ವಿವಾಹದ ಹಿಂದೆ ಮಾನವೀಯತೆಯ ಉದ್ದೇಶವಿದೆ. ಅಜಯ್ ಕಲಿಕಾ ಅಸಾಮರ್ಥ್ಯ ಹೊಂದಿದ ವ್ಯಕ್ತಿಯಾಗಿದ್ದು ಆತನಿಗೆ ತನ್ನ ಮದುವೆ ಅದ್ದೂರಿಯಾಗಿರಬೇಕೆಂದು ಆಸೆ ಇತ್ತು. ಚಿಕ್ಕಂದಿನಿಂದಲೇ ತಾಯಿಯನ್ನು ಕಳೆದುಕೊಂಡಿದ್ದ ಆತನಿಗೆ ಅವನಿಚ್ಚೆಯನ್ನು ಪೂರ್ಣಗೊಳಿಸಬೇಕೆಂದು ತಂದೆ ನಿಶ್ಚಯಿಸಿದ್ದರು. ಆದರೆ ಎಷ್ಟು ಹುಡುಕಿದರೂ ತಕ್ಕ ಜೋಡಿ ದೊರೆಯಲಿಲ್ಲ. ಹಾಗೆಂದು ನಿರಾಶರಾಗದ ಪೋಷಕರು ಆತನಿಗೆ ವಧುವೇ ಇಲ್ಲದೆ ವಿವಾಹ ಕಾರ್ಯಕ್ರಮ ನಡೆಸಿದ್ದಾರೆ.
ಮಾನಸಿಕ ಸಮಸ್ಯೆ ಹೊಂದಿದ್ದ ಮಗನ ಕನಸನ್ನು ಈಡೇರಿಸಲಿಕ್ಕಾಗಿ ತಂದೆ ಸಿದ್ದವಾಗಿದ್ದರು. ಗುಜರಾತಿ ಸಂಪ್ರದಾಯದಂತೆ ಮದುವೆಯ ಎಲ್ಲಾ ಶಾಸ್ತ್ರಗಳೂ ನೆರವೇರಿದ್ದವು. ಮದುವೆ ಆಮಂತ್ರಣ ಪತ್ರಿಕೆ ಸಹ ಮುದ್ರಿಸಲಾಗಿದ್ದು ಸಂಪಂಧಿಕರು, ಸ್ನೇಹಿತರಿಗೆ ನಿಡಲಾಗಿದೆ.
ಮದುವೆ ಹಿಂದಿನ ದಿನ ಮೆಹಂದಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ವರ ಕುಟುಂಬ್, ಆಪ್ತ ಸ್ನೇಹಿತರು ಸಾಕಷ್ಟು ಪ್ರಮಾಣದಲ್ಲಿ ಜಮಾಯಿಸಿದ್ದರು.
ಮದುವೆ ದಿನ ಸಹ ಸಂಪ್ರದಾಯದ ಅನುಸಾರ ಕುದುರೆ ಏರಿ ಯುವಕ ಮೆರವಣಿಗೆಯಲ್ಲಿ ಭಾಗವಹಿಸಿದ್ದ. ಈ ವೇಳೆ 200 ಜನರು ನೃತ್ಯ ಮಾಡುತ್ತಾ ಸಾಗಿದ್ದರು. ಮದುವೆಗೆ ಸುಮಾರು 800  ಜನರಿಗೆ ಔತಣಕೂಟ ಏರ್ಪಾಡಿಸಲಾಗಿತ್ತು.
ಮಾದ್ಯಮದವರೊಡನೆ ಮಾತನಾಡಿದ ಅಜಯ್ ತಂದೆ "ನನ್ನ ಮಗ ಮಾನಸಿಕ ಅಸಮತೋಲನ ಹೊಂದಿದ್ದವ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ. ಊರಿನಲ್ಲಿ ಬಹುತೇಕ ಎಲ್ಲಾ ಮದುವೆಗೆ ಆತ ಹಾಜರಾಗುತ್ತಿದ್ದ. ನನ್ನ ಮದುವೆ ಯಾವಾಗಲೆಂದು ಆಗಾಗ ನನ್ನನ್ನು ವಿಚಾರಿಸುತ್ತಿದ್ದ. ಆದರೆ ಅವನನ್ನು ಒಪ್ಪುವ ವಧು ಸಿಕ್ಕುವುದಿಲ್ಲ ಎಂಬುದು ನಮಗೆ ತಿಳಿದಿತ್ತು. ನಾನು ನನ್ನ ಪರಿವಾರ, ಕುಟುಂಬದವರೊಡನೆ ಮಾತನಾಡಿ ವಧುವಿಲ್ಲದೆ ವಿವಾಹ ಮಾಡಲು ನಿಶ್ಚಯಿಸಿದೆವು. ಅದರಂತೆ ಮಗನ ಆಸೆ ಈಡೇರುವಂತಾಗಲು ನಾವಿಂದು ವಿವಾಹ ನಡೆಸಿದ್ದೇವೆ" ಎಂದಿದ್ದಾರೆ. ಮಗನ ಸಂತೋಷದ ಹೊರತು ನನಗಾವುದೂ ದೊಡ್ಡದಲ್ಲ ಎಂಬುದು ಅವರ ನಿರ್ಧಾರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT