ಪ್ರತ್ಯಕ್ಷ ದೃಶ್ಯ 
ವಿಶೇಷ

ಯಜಮಾನನ ಕುಟುಂಬ ರಕ್ಷಿಸಲು ನಾಗರಹಾವಿನ ಮುಂದೆ 30 ನಿಮಿಷ ತಡೆಗೋಡೆಯಂತೆ ಕುಳಿತ ಸಾಕು ಬೆಕ್ಕು; ವಿಡಿಯೋ ವೈರಲ್!

ಬೆಕ್ಕು ಸಹ ನಾಯಿಯಂತೆ ಉತ್ತಮ ಸ್ನೇಹಿತನಾಗಬಹುದೆಂದು ಸಾಬೀತುಪಡಿಸಿದೆ. ಹೌದು ಬೆಕ್ಕೊಂದು ತನ್ನ ಮಾಲೀಕರ ಕುಟುಂಬವನ್ನು ರಕ್ಷಿಸುವ ಸಲುವಾಗಿ ನಾಗರಹಾವು ತಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಸಂಭವನೀಯ ಅಪಾಯದಿಂದ ರಕ್ಷಿಸಿದೆ.

ಭುವನೇಶ್ವರ: ಬೆಕ್ಕು ಸಹ ನಾಯಿಯಂತೆ ಉತ್ತಮ ಸ್ನೇಹಿತನಾಗಬಹುದೆಂದು ಸಾಬೀತುಪಡಿಸಿದೆ. ಹೌದು ಬೆಕ್ಕೊಂದು ತನ್ನ ಮಾಲೀಕರ ಕುಟುಂಬವನ್ನು ರಕ್ಷಿಸುವ ಸಲುವಾಗಿ ನಾಗರಹಾವು ತಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುವ ಮೂಲಕ ಸಂಭವನೀಯ ಅಪಾಯದಿಂದ ರಕ್ಷಿಸಿದೆ.

ಸಂಪದ್ ಕುಮಾರ್ ಪರಿದಾ ಮತ್ತು ಅವರ ಕುಟುಂಬವು ತಮ್ಮ ಸಾಕು ಬೆಕ್ಕು ಚಿನ್ನುನೊಂದಿಗೆ ಭೀಮತಂಗಿ ಪ್ರದೇಶದಲ್ಲಿ ನೆಲೆಸಿದ್ದರು. ನಿನ್ನೆ ಮಧ್ಯಾಹ್ನ ಮನೆಯ ಹಿಂಭಾಗದಿಂದ ನಾಗರಹಾವೊಂದು ಪರಿದಾ ಅವರ ಮನೆಯ ಆವರಣಕ್ಕೆ ಪ್ರವೇಶಿಸಲು ಮುಂದಾಗಿತ್ತು. ಈ ವೇಳೆ ಗಂಡು ಬೆಕ್ಕು ತಕ್ಷಣ ಅದನ್ನು ಕಂಡು ಅದರ ಮುಂದೆ ಹೋಗಿ ನಿಂತಿತ್ತು. 

ಚಿನ್ನು ಬೆಕ್ಕು ಹಿತ್ತಲಿಗೆ ಓಡುತ್ತಿರುವುದನ್ನು ನೋಡಿದ ಪರಿದಾ ಅದನ್ನು ಹಿಂಬಾಲಿಸಿದ. ಬೆಕ್ಕು ನಾಲ್ಕು ಅಡಿ ಉದ್ದದ ನಾಗರಹಾವು ವಿರುದ್ಧ ಕಾವಲು ನಿಂತು ಅದನ್ನು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಿಡಿದಿದೆ. ಹಾವು ಬುಸುಗುಡುತ್ತಿದ್ದು ಮುಂದಕ್ಕೆ ಬರಲು ಯತ್ನಿಸುತ್ತಿದ್ದರೂ ಚಿನ್ನು ತನ್ನ ಸ್ಥಳದಿಂದ ಒಂದು ಇಂಚು ಹಿಂದಕ್ಕೆ ಸರಿಯಲಿಲ್ಲ.

ಸಂಪದ್ ತಕ್ಷಣ ಸಹಾಯಕ್ಕಾಗಿ ಸ್ನೇಕ್ ಸಹಾಯವಾಣಿಗೆ ಕರೆ ಮಾಡಿದ. ಸಹಾಯವಾಣಿಯ ಸ್ವಯಂಸೇವಕ ಅರುಣ್ ಕುಮಾರ್ ಬರಾಲ್ ಸ್ಥಳಕ್ಕೆ ತಲುಪಿದಾಗ ಬೆಕ್ಕು ಕೋಬ್ರಾ ಹಾವನ್ನು ಸುಮಾರು 30 ನಿಮಿಷಗಳ ಕಾಲ ಒಳಗೆ ಪ್ರವೇಶಿಸದಂತೆ ತಡೆದಿದೆ. ನಂತರ ಅರುಣ್ ಬೆಕ್ಕನ್ನು ಸ್ಥಳದಿಂದ ದೂರವಿರಿಸಿ ತಕ್ಷಣ ನಾಗರಹಾವನ್ನು ರಕ್ಷಿಸಿದನು.

'ನಾನು ಸ್ಥಳಕ್ಕೆ ಬರುವವರೆಗೂ ಹಾವನ್ನು ತಡೆದು ಸಾಕು ಬೆಕ್ಕು ಕಾವಲು ನಿಂತಿದೆ. ಈ ಹೋರಾಟವು ಅರ್ಧ ಘಂಟೆಯವರೆಗೆ ನಡೆದಿದೆ. ಆದರೆ ಅದೃಷ್ಟವಶಾತ್ ಅವರಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅರುಣ್ ಹೇಳಿದರು.

2019ರಲ್ಲಿ ಖುರ್ಡಾ ಜಿಲ್ಲೆಯ ಜಾನ್ಲಾ ಗ್ರಾಮದಲ್ಲಿ ಸಾಕು ನಾಯಿ ತನ್ನ ಯಜಮಾನನ ಕುಟುಂಬವನ್ನು ವಿಷಪೂರಿತ ಹಾವಿನಿಂದ ರಕ್ಷಿಸಲು ತನ್ನ ಜೀವವನ್ನೇ ಕಳೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ