ವಿಶೇಷ

ಮುಂದೆ ಬಾರದ ಸಂಬಂಧಿಕರು: ಐಟಿ ಉದ್ಯೋಗಿ ಮತ್ತು ಆತನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಬಾಲ್ಯ ಸ್ನೇಹಿತರು!

Vishwanath S

ಚೆನ್ನೈ: ಬಾಲ್ಯ ಸ್ನೇಹಿತರಿಬ್ಬರು ಸೇರಿ ಕೊರೋನಾಗೆ ಬಲಿಯಾದ ಚೆನ್ನೈ ಐಟಿ ಉದ್ಯೋಗಿ ಮತ್ತು ಆತನ ತಂದೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 

ಕೊರೋನಾ ಸೋಂಕು ತಗುಲಬಹುದು ಎಂದು ಹೆದರಿ ಸಂಬಂಧಿಕರು ಯಾರೂ ಅಂತ್ಯಸಂಸ್ಕಾರ ನೆರವೇರಿಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ಬಾಲ್ಯ ಸ್ನೇಹಿತರಾದ ಸುಬ್ಬರಾಘವಲು ಮತ್ತು ಪ್ರಭಾಕರ್ ಇಬ್ಬರೂ ಅಪಾಯವಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಅಂತ್ಯ ಸಂಸ್ಕಾರ ನಡೆಸಿದ್ದಾರೆ. 

ಸೊಲಿಂಗನಲ್ಲೂರ್ ನೆಲೆಸಿದ್ದ ಐಟಿ ಉದ್ಯೋಗಿ ಪವನ್ ಕುಮಾರ್ ಅವರು ಇತ್ತೀಚೆಗಷ್ಟೇ ಚೆನ್ನೈನಿಂದ 80 ಕಿಮೀ ದೂರದಲ್ಲಿರುವ ಸ್ವಗ್ರಾಮ ಸುಲ್ಲೂರ್ಪೆಟಾಗೆ ಸ್ಥಳಾಂತರಗೊಂಡಿದ್ದರು. ಪವನ್ ತಂದೆ ಸುಧಾಕರ್ ಪ್ರಸಾದ್ ಯಾದವ್ ಅವರು ಇಸ್ರೋದ ನಿವೃತ್ತ ಉದ್ಯೋಗಿಯಾಗಿದ್ದರು. 

ಪವನ್ ಪತ್ನಿ, ಆರು ತಿಂಗಳ ಮಗು ಮತ್ತು ತಾಯಿ ಜೊತೆಯಲ್ಲಿ ಸಲೂರ್ಪೇಟಾದಲ್ಲಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಏಪ್ರಿಲ್ ಕೊನೆಯ ವಾರದಲ್ಲಿ, ಮಗುವನ್ನು ಹೊರತುಪಡಿಸಿ ಎಲ್ಲರಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಪವನ್ ಹೆಂಡತಿ ಮತ್ತು ಅತ್ತೆ ಕೊರೋನಾದಿಂದ ಚೇತರಿಸಿಕೊಂಡರು. ಆದರೆ ಪವನ್ ಮತ್ತು ಅವರ ತಂದೆ ಆರೋಗ್ಯ ಕ್ಷೀಣಿಸಿತ್ತು. ಆದರೆ ವಿಧಿಯಾಟ ಇಬ್ಬರೂ ಕೊವೀಡ್ ಗೆ ಬಲಿಯಾಗಿದ್ದರು. 

SCROLL FOR NEXT