ಕೃಷ್ಣ 
ವಿಶೇಷ

ಉಡುಪಿ: ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಉಳಿತಾಯದ ಹಣದಲ್ಲಿ ದಿನಗೂಲಿ ಕಾರ್ಮಿಕನ ನೆರವು!

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಸುಮಾರು 70 ಕುಟುಂಬಗಳಿಗೆ ಉಡುಪಿ ಜಿಲ್ಲೆಯ ಅಂಬಾಲಪಾಡಿ ಜಿಲ್ಲೆಯ ದಿನಗೂಲಿ ಕಾರ್ಮಿಕರೊಬ್ಬರು ಸಹಾಯ ಮಾಡಿದ್ದಾರೆ.

ಮಂಗಳೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಸುಮಾರು 70 ಕುಟುಂಬಗಳಿಗೆ ಉಡುಪಿ ಜಿಲ್ಲೆಯ ಅಂಬಾಲಪಾಡಿ ಜಿಲ್ಲೆಯ ದಿನಗೂಲಿ ಕಾರ್ಮಿಕರೊಬ್ಬರು ಸಹಾಯ ಮಾಡಿದ್ದಾರೆ.

42 ವರ್ಷದ ಕೃಷ್ಣ ಜೆ ಎಂಬುವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ತಮ್ಮ ಸಂಪಾದನೆಯೇ ಕಡಿಮೆ ಇದ್ದರೂ ಅದರಲ್ಲಿಯೇ ತನ್ನ ಗಳಿಕೆಯಲ್ಲಿ ಉಳಿತಾಯದ ಹಣವನ್ನು ಹಿಂದು ಮುಂದು ನೋಡದೇ ತಮ್ಮ ನೆರೆಹೊರೆಯವರಿಗೆ ಸಹಾಯ ಮಾಡಿದ್ದಾರೆ.

ಉಡುಪಿಯಿಂದ ಮೂರು ಕಿಮೀ ದೂರದ ಗ್ರಾಮದಲ್ಲಿ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಿದ್ದಾರೆ, ಮರ ಕತ್ತರಿಸುವ ಕೆಲಸ ಮಾಡುವ ಕೃಷ್ಣ, ಕಲ್ಮಾಡಿ, ಕಪ್ಪೆಟ್ಟು, ಬಚನಾಬೈಲ್, ಮುಂತಾದ ಗ್ರಾಮಗಳಲ್ಲಿರುವ ಬಡ ಜನರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಅಕ್ಕಿ, ಟೀ ಪುಡಿ, ಸಕ್ಕರೆ, ತೆಂಗಿನಕಾಯಿ ಮತ್ತು ಸೋಪು ಸೇರಿದಂತೆ ಹಲವು ಪದಾರ್ಥಗಳನ್ನು ಹಂಚಿದ್ದಾರೆ.

ನಾನು ಕೆಲಸಕ್ಕೆ ಹೋಗುವ ವೇಳೆ ಹಲವು ಬಡ ಕುಟುಂಬಗಳು ಸಹಾಯ ಕೇಳಿದವು, ಹಲವು ವಾರಗಳ ಹಿಂದೆ ಭಾರೀ ಮಳೆಯಿಂದಾಗಿ ಕೆಲವು ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದವು, ಅವುಗಳನ್ನು ನಾನು ತೆರವುಗೊಳಿಸಿದೆ, ಇದರಿಂದ ನನಗೆ ಸ್ವಲ್ಪ ಹಣ ಸಂಪಾದನೆಯಾಯಿತು, ಈ ಹಣದಿಂದ ನಾನು ಬಡ ಕುಟುಂಬದವರಿಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಿ ನೀಡಿದ್ದೇನೆ, ಲಾಕ್ ಡೌನ್ ಸಮಯದಲ್ಲಿ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುತ್ತಿರುವುದನ್ನು ನಾನು ನೋಡಿದ್ದೆ. ಹೀಗಾಗಿ ನಾನು ಉಳಿತಾಯ ಮಾಡಿದ್ದ 70 ಸಾವಿರ ರು ಹಣವನ್ನು ಬಡವರಿಗೆ ಸಹಾಯ ಮಾಡಲು ಬಳಸಲು ನಿರ್ಧರಿಸಿದೆ ಎಂದು ಕೃಷ್ಣ ತಿಳಿಸಿದ್ದಾರೆ.

ಆರಂಭದಲ್ಲಿ, ನಾವು ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಿದೆವು, ನಂತರ ನಾವು ಅವರನ್ನು ಭಜನಾ ಮಂದಿರಕ್ಕೆ ಕರೆದು ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಕಿಟ್‌ಗಳನ್ನು ವಿತರಿಸಿದ್ದೇವೆ ಎಂದು ಅವರು ಹೇಳಿದರು. ಮರ ಕತ್ತರಿಸುವುದರ ಜೊತೆಗೆ ತೆಂಗಿನಕಾಯಿ ಕೀಳುವುದು ಮತ್ತು ಚಾವಣಿ ಕಟ್ಟುವ ಕೆಲಸಗಳನ್ನು ಕೃಷ್ಣ ಮಾಡುತ್ತಾರೆ.

ಬಡತನ ಏನು ಎಂದು ನನಗೆ ತಿಳಿದಿದೆ ಮತ್ತು ಹಸಿವಿನ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ಕಷ್ಟದ ಸಮಯದಲ್ಲಿ, ನಾವು ಪರಸ್ಪರ ಸಹಾಯ ಮಾಡಬೇಕಾಗಿದೆ ಎಂದು 9 ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿರುವ ಕೃಷ್ಣ ಹೇಳಿದರು. ಪಡಿತರ ಕಿಟ್‌ಗಳನ್ನು ವಿತರಿಸುವುದರ ಹೊರತಾಗಿ, ಕೃಷ್ಣ ಅನೇಕ ಬಡ ಕುಟುಂಬಗಳಿಗೆ ಸಾವಿನ ಸಂದರ್ಭದಲ್ಲಿ ಆಂಬ್ಯುಲೆನ್ಸ್  ಗಾಗಿ  ಹಣ ಸಹಾಯ ಮಾಡಿದ್ದಾರೆ. ಕಳೆದ ವರ್ಷವೂ ಅವರು ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಪಡಿತರ ಕಿಟ್ ವಿತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT