ಚೋರ್ಮಾರಾ ಗ್ರಾಮದಲ್ಲಿ ಅಳವಡಿಸಲಾದ ಟಿವಿ 
ವಿಶೇಷ

ಬಿಹಾರದ ಮಾವೋವಾದಿ ಪೀಡಿತ ಬುಡಕಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಟಿವಿ ಆಗಮನ, ಗ್ರಾಮಸ್ಥರಲ್ಲಿ ಸಂಭ್ರಮ!

ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಈಗ ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ದೂರದರ್ಶನವನ್ನು ಅಳವಡಿಸಲಾಗಿದೆ.

ಪಾಟ್ನಾ: ಬಿಹಾರದ ಮಾವೋವಾದಿಗಳ ಪ್ರಾಬಲ್ಯವಿರುವ ಜಮುಯಿ ಜಿಲ್ಲೆಯ ಚೋರ್ಮಾರಾ ಗ್ರಾಮದ ನಿವಾಸಿಗಳ ಬಹುಕಾಲದ ಕನಸು ಈಗ ಅಕ್ಷರಶಃ ನನಸಾಗುತ್ತಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗುರುವಾರ ಟಿವಿಯನ್ನು ಅಳವಡಿಸಲಾಗಿದೆ.

43 ಇಂಚಿನ ಎಲ್‌ಇಡಿ ಟಿವಿ ಆನ್ ಮಾಡಿದಾಗ ಮಕ್ಕಳು ಸಂಭ್ರಮದಿಂದ ಕುಣಿದಾಡಿದರು ಮತ್ತು ಪುರುಷರು ಮತ್ತು ಮಹಿಳೆಯರು ಉತ್ಸಾಹದಿಂದ ಚಪ್ಪಾಳೆ ತಟ್ಟಿದರು.

'ನಾವು ಮೊದಲ ಬಾರಿಗೆ ಟಿವಿಯನ್ನು ಪಡೆದುಕೊಂಡಿದ್ದೇವೆ' ಎಂದು ಸ್ಥಳೀಯ ನಿವಾಸಿ ರಜತ್ ಕೋಡಾ ಹೇಳಿದರು. 'ಗ್ರಾಮದಲ್ಲಿ ಟೆಲಿವಿಷನ್ ಸೆಟ್ ಸ್ಥಾಪನೆಯಿಂದ ನಾವು ರೋಮಾಂಚನಗೊಂಡಿದ್ದೇವೆ. ಈಗ ನಾವು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮತ್ತೊಬ್ಬ ನಿವಾಸಿ ದಿಲೀಪ್ ಕುಮಾರ್ ಹೇಳುತ್ತಾರೆ.

ಗ್ರಾಮಸ್ಥರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿಗೆ ನಿಯೋಜಿಸಲಾಗಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳಿಂದಾಗಿ ಇಲ್ಲಿಗೆ ಟಿವಿಯನ್ನು ತರಲಾಗಿದೆ. ಡಿಐಜಿ (ಮುಜಾಫರ್‌ಪುರ ಶ್ರೇಣಿ) ಸಂದೀಪ್ ಸಿಂಗ್ ಮತ್ತು ಕಮಾಂಡೆಂಟ್ ಜೋಗೇಂದ್ರ ಸಿಂಗ್ ಮೌರ್ಯ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜಮುಯಿ ಶಾಖೆಯನ್ನು ಇದಕ್ಕಾಗಿ ಸಂಪರ್ಕಿಸಿದರು ಮತ್ತು ನಂತರ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಡಿಟಿಎಚ್‌ ಸಂಪರ್ಕ ಹೊಂದಿರುವ ಟಿವಿಯನ್ನು ಗ್ರಾಮದಲ್ಲಿ ಅಳವಡಿಸಲಾಗಿದೆ.

'ಉಗ್ರವಾದದಿಂದ ಪೀಡಿತ ನಿವಾಸಿಗಳ ಜೀವನದಲ್ಲಿ ನಂಬಿಕೆ, ಅಭಿವೃದ್ಧಿ ಮತ್ತು ಭದ್ರತೆಯು ಬದಲಾವಣೆಯನ್ನು ತರಬಹುದು. ಸಿಆರ್‌ಪಿಎಫ್ ಮತ್ತು ಜಿಲ್ಲಾ ಪೊಲೀಸರ ನಡುವಿನ ಸಮನ್ವಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ' ಎಂದು ಸಿಂಗ್ ಹೇಳಿದರು.

ಮೌರ್ಯ ಮಾತನಾಡಿ, ಸರ್ಕಾರ ಗ್ರಾಮಸ್ಥರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದವರೆಲ್ಲರೂ ಮರಳಿ ಬರಬೇಕು' ಎಂದರು.

ಬ್ಯಾಂಕ್ ಸಾಲ ಪಡೆದು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶಗಳನ್ನು ಹುಡುಕಲು ಎಸ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಆಕಾಶ್ ಆನಂದ್ ಗ್ರಾಮಸ್ಥರಿಗೆ ಹೇಳಿದರು. ಮಹಿಳೆಯರು ಸಹ ಜೀವನೋಪಾಯಕ್ಕಾಗಿ ಸ್ವಸಹಾಯ ಗುಂಪುಗಳನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.

ಮೂರು ವರ್ಷಗಳ ಹಿಂದಿನವರೆಗೂ ರಾಜ್ಯದಲ್ಲಿ ಎಡಪಂಥೀಯ ಉಗ್ರವಾದದ ಕೇಂದ್ರಬಿಂದುವಾಗಿದ್ದ ಬರ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೋರ್ಮಾರಾ ನೆಲೆಸಿದೆ. ಮುಖ್ಯವಾಗಿ ಆದಿವಾಸಿಗಳು ವಾಸಿಸುವ ಗ್ರಾಮವು ಕಾಡು ಮತ್ತು ಗುಡ್ಡಗಳಿಂದ ಆವೃತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT