ಬೆಂಗಳೂರು: ಶಿಕ್ಷಣವು ಆರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ಸಾಂಸ್ಕೃತಿಕವಾಗಿರಲಿ ದೇಶದ ದೃಷ್ಟಿಯನ್ನು ಒಟ್ಟಿಗೆ ಸಾಗಿಸುವ ಸಾಮಾನ್ಯ ವಿಚಾರವಾಗಿದೆ. ಇದು ಕನಸುಗಳು ಮತ್ತು ಸಾಧ್ಯತೆಗಳ ಸಮುದ್ರವಾಗಿದ್ದು, ಅದರ ಮೇಲೆ ರಾಷ್ಟ್ರ ಮತ್ತು ಅದರ ನಾಗರಿಕರು ತಮ್ಮ ಭವಿಷ್ಯದತ್ತ ಸಾಗುತ್ತಾರೆ. ಆದಾಗ್ಯೂ, ಇತ್ತೀಚಿನ ಸಾಂಕ್ರಾಮಿಕವು ಶಿಕ್ಷಣ ಕೈಗೆಟುಕುವಿಕೆ ಬಗ್ಗೆ ಕಟು ವಾಸ್ತವವನ್ನು ಬಹಿರಂಗಪಡಿಸಿತು.
ಕೋವಿಡ್ ಅಪ್ಪಳಿಸಿದಂತೆ, ಅನೇಕರು ಕೆಲಸ ಕಳೆದುಕೊಂಡರು, ಕೆಲವರು ತಮ್ಮ ಮಕ್ಕಳನ್ನು ಶುಲ್ಕ ಭರಿಸಲಾಗದ ಕಾರಣ ಶಾಲೆ ಬಿಡಿಸುವಂತೆ ಮಾಡಿತು. ಇದು ಪ್ರಜ್ಞಾಪೂರ್ವಕ ನಾಗರಿಕರನ್ನು ಸಮಾಜದ ವಿವಿಧ ಸ್ತರಗಳ ನಡುವಿನ ಶೈಕ್ಷಣಿಕ ಅಂತರವನ್ನು ತಗ್ಗಿಸಲು ಮಾತ್ರವಲ್ಲದೆ ಸಾಂಕ್ರಾಮಿಕ ರೋಗದ ಮೂಲಕ ಬಡ ಮಕ್ಕಳಿಗೆ ಅಧ್ಯಯನ ಮಾಡಲು ಸಹಾಯ ಮಾಡಲು ಪ್ರೇರೇಪಿಸಿತು.
ಬೆಂಗಳೂರಿನ ಕೋರಮಂಗಲದ ರಾಜೇಂದ್ರ ನಗರದ ಕೊಳೆಗೇರಿಯ 25 ಮಕ್ಕಳು ಕೋವಿಡ್ ಸಂದರ್ಭದಲ್ಲಿ ಶಾಲೆಯನ್ನು ತೊರೆದಿದ್ದರು. ಆದರೆ ಅಲ್ಲೊಂದು ಭರವಸೆಯ ಕಿರಣವಿತ್ತು. ಮಧ್ಯಪ್ರಾಚ್ಯದಿಂದ ಹಿಂದಿರುಗಿದ ವೆಂಕಟರಾಮನ್ ಅಯ್ಯರ್, ಮಕ್ಕಳು ಶೈಕ್ಷಣಿಕವಾಗಿ ಹಿಂದೆ ಬೀಳದಂತೆ ಮಾಡಲು ಮುಂದೆ ಬಂದರು. ತಮ್ಮ ಸ್ವಾಭಿಮಾನಿ ಶಿಕ್ಷಣ ಟ್ರಸ್ಟ್ ಮೂಲಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಕಾರ್ಯಕ್ರಮಕ್ಕೆ ಅವರನ್ನು ಸೇರಿಸಿಕೊಂಡರು. ಹತ್ತನೇ ತರಗತಿಯಲ್ಲಿರುವ ಮಕ್ಕಳು ಕಳೆದ ನಾಲ್ಕು ತಿಂಗಳಿಂದ ಉಚಿತವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ.
ಎರಡು ದಶಕಗಳ ಹಿಂದೆ ಟ್ರಸ್ಟ್ ಸ್ಥಾಪಿಸಿದ ಅಯ್ಯರ್, ಸಾಂಕ್ರಾಮಿಕ ರೋಗವು ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ತರಲು ಮತ್ತು ನಂತರ ಮತ್ತೆ ಸೇರಿಸಲು ಪೋಷಕರನ್ನು ಒತ್ತಾಯಿಸಿತು ಎಂದು ಹೇಳುತ್ತಾರೆ. ಈ ವಿದ್ಯಾರ್ಥಿಗಳು ಕನಿಷ್ಠ ಒಂದು ವರ್ಷ ಕಳೆದುಕೊಂಡಿದ್ದಾರೆ ಅಥವಾ ತಮ್ಮ ಅಧ್ಯಯನವನ್ನು ಸಂಪೂರ್ಣವಾಗಿ ನಿಲ್ಲಿಸಿರಬಹುದು. ಟ್ರಸ್ಟ್ ಈ ಮಕ್ಕಳಿಗೆ ಅಧ್ಯಯನ ಮುಂದುವರೆಸಲು ಅನುವು ಮಾಡಿಕೊಟ್ಟಿದೆ.
ಇದನ್ನೂ ಓದಿ: ದಾವಣಗೆರೆಯ 'ಶಕ್ತಿ ಮೆನ್'ಗಳ ಕಥೆ: ಸರ್ಕಾರದ ನೆರವಿಲ್ಲದೇ ಸ್ವಂತ ಖರ್ಚಿನಲ್ಲೇ ಕ್ರೀಡೆಯನ್ನು ಉತ್ತೇಜಿಸುತ್ತಿರುವ ಕ್ರೀಡಾಪಟುಗಳು
ಬಾಡಿಗೆಗೆ ಮನೆಯೊಂದನ್ನು ತೆಗೆದುಕೊಳ್ಳಲಾಗಿದೆ ಮತ್ತು ನಾವು ಮೇಲಿನ ಮಹಡಿಯಲ್ಲಿ ತರಗತಿ ಕೊಠಡಿ ಮತ್ತು ಕಂಪ್ಯೂಟರ್ ಕೇಂದ್ರವನ್ನು ಸ್ಥಾಪಿಸಿದ್ದೇವೆ. ನಾವು 25 ವಿದ್ಯಾರ್ಥಿಗಳನ್ನು ಎನ್ ಐಒಎಸ್, ದೆಹಲಿ ವ್ಯವಸ್ಥೆಯಲ್ಲಿ ನೋಂದಾಯಿಸಿದ್ದೇವೆ. ವಿನಮ್ರ ಹಿನ್ನೆಲೆಯಿಂದ ಬಂದ ಅರ್ಹ ಶಿಕ್ಷಕರನ್ನು ಸಂಬಳದ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಅತ್ಯುತ್ತಮ ಬೋಧನಾ ವಿಧಾನವನ್ನು ಅಳವಡಿಸಿಕೊಂಡಿರುವುದರಿಂದ ನಮಗೆ ಯಶಸ್ಸು ಖಚಿತ ಎಂದು ಅಯ್ಯರ್ ಹೇಳುತ್ತಾರೆ ಮತ್ತು ಮುಂದಿನ ವರ್ಷದಿಂದ ಕಾರ್ಯಕ್ರಮವನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತಮ್ಮ ವಿದ್ಯಾರ್ಥಿಗಳು ಮಾರ್ಚ್-ಏಪ್ರಿಲ್ನಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ವಿಶ್ವಾಸವಿದೆ ಎಂದು ಬೆಂಗಳೂರಿನ ಆರ್ಟಿ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿರುವ ಶಿಕ್ಷಕರಲ್ಲಿ ಒಬ್ಬರಾದ ಇಬ್ರಾಹಿಂ ಅಹ್ಮದ್ ಹೇಳಿದರು. ಕೆಲವು ವಿದ್ಯಾರ್ಥಿಗಳು ವಲಸಿಗರು ಮತ್ತು ಹಿಂದಿ ಮಾತನಾಡುತ್ತಾರೆ. ಅವರು ಕನ್ನಡವನ್ನೂ ಕಲಿಯುವಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ ಅಯ್ಯರ್.
ಇದನ್ನೂ ಓದಿ: ಬುಡಕಟ್ಟು ಮಕ್ಕಳಿಗೆ ರಂಗಭೂಮಿಯ ಕೌಶಲ್ಯ, ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನ ಮಾಡುತ್ತಿರುವ ಮೈಸೂರಿನ ವಿಕಾಸ್ ಚಂದ್ರ
ಶಾಲಾ ಶುಲ್ಕವನ್ನು ಪಾವತಿಸದ ಕಾರಣಕ್ಕಾಗಿ ತರಗತಿಗೆ ಹೋಗಲು ಸಾಧ್ಯವಾಗದ ನಂತರ ಜೂನ್ ನಲ್ಲಿ ಇಲ್ಲಿ ಸೇರಿಕೊಂಡೆ. ನಮಗೆ ಬೆಳಗ್ಗೆ 6.30ರಿಂದ ಮಧ್ಯಾಹ್ನ 1ರವರೆಗೆ ಕಲಿಸಲಾಗುತ್ತದೆ ಎಂದು ಕೋರಮಂಗಲದ ಗ್ರೀನ್ ಲ್ಯಾಂಡ್ ಹೈಸ್ಕೂಲ್ನಿಂದ ಹೊರಗುಳಿದ ವಿದ್ಯಾರ್ಥಿ ಸೂರಜ್ ಕುಮಾರ್ ಪಾಂಡೆ ತಿಳಿಸಿದರು.
ಸ್ವಾಭಿಮಾನ್ ಟ್ರಸ್ಟ್ನ ಕೆಲಸ:
ಸ್ವಾಭಿಮಾನ್ ಟ್ರಸ್ಟ್ ಅನ್ನು ವೆಂಕಟರಾಮನ್ ಅಯ್ಯರ್ ಮತ್ತು ಅವರ ಪತ್ನಿ ವಿಜಯಾ ಅವರು 2001 ರಲ್ಲಿ ಸ್ಥಾಪಿಸಿದರು. ಆರಂಭದಲ್ಲಿ ಬಡ ಒಂಟಿ ತಾಯಂದಿರನ್ನು ಬೆಂಬಲಿಸುವ ಕೆಲಸ ಮಾಡುತ್ತಿದ್ದ ಎನ್ಜಿಒ ಕ್ರಮೇಣ ಶಿಕ್ಷಣ, ಆರೋಗ್ಯ, ಕಿರುಬಂಡವಾಳ ಮತ್ತು ಆಹಾರ ವಿತರಣೆಯಂತಹ ಹಲವಾರು ನಿರ್ಣಾಯಕ ಕ್ಷೇತ್ರಗಳನ್ನು ಪೂರೈಸಲು ಪ್ರಾರಂಭಿಸಿತು ಮತ್ತು ವಿಶೇಷವಾಗಿ ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ ಬಡವರ ಜೀವನ ಸುಧಾರಣೆಗೆ ತನ್ನನ್ನು ತೊಡಗಿಸಿಕೊಂಡಿದೆ.