ಅಹಮದಾಬಾದ್ ಮೂಲದ ರೂಪೇಶ್ ಮಕ್ವಾನಾ 
ವಿಶೇಷ

ಬಡ ಮಕ್ಕಳಿಗೆ ರಕ್ಷಣಾ-ಕ್ರೀಡೆ ಕ್ಷೇತ್ರಗಳಲ್ಲಿ ಉಚಿತ ತರಬೇತಿ: ಹಲವರಿಗೆ ಮಾದರಿಯಾದ ಗುಜರಾತ್ ವ್ಯಕ್ತಿ!

ರಕ್ಷಣಾ ವಲಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಬಡ ಮಕ್ಕಳಿಗೆ, ಉಚಿತ ತರಬೇತಿ ನೀಡುವ ಮೂಲಕ ಅಹಮದಾಬಾದ್ ಮೂಲದ ರೂಪೇಶ್ ಮಕ್ವಾನಾ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಅಹಮದಾಬಾದ್: ರಕ್ಷಣಾ ವಲಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಬಡ ಮಕ್ಕಳಿಗೆ, ಉಚಿತ ತರಬೇತಿ ನೀಡುವ ಮೂಲಕ ಅಹಮದಾಬಾದ್ ಮೂಲದ ರೂಪೇಶ್ ಮಕ್ವಾನಾ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಕಳೆದ 4-5 ವರ್ಷಗಳಲ್ಲಿ ಮಕ್ವಾನಾ ಅವರು 300ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದ್ದು, 500ಕ್ಕೂ ಹೆಚ್ಚು ಯುವಕರು ವ್ಯನಸಗಳಿಂದ ಮುಕ್ತರಾಗಲು ನೆರವಾಗಿದ್ದಾರೆ.

2015 ರಲ್ಲಿ ಗುಜರಾತ್ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳಲು ರೂಪೇಶ್ ಸಿದ್ಧತೆ ನಡೆಸಿದ್ದರು. ಆದರೆ, ಎತ್ತರದ ಮಾನದಂಡದಲ್ಲಿ ವಿಫಲರಾಗಿದ್ದರಿಂದ ಗುಜರಾತ್ ಪೊಲೀಸ್ ಪಡೆ ಸೇರುವ ಅವರ ಕನಸು ಕನಸ್ಸಾಗಿಯೇ ಉಳಿಯಿತು. ಇದರಿಂದ ತೀವ್ರವಾಗಿ ನೊಂದ ರೂಪೇಶ್ ಅವರು, ತಮ್ಮ ಕನಸ್ಸು ಇತರೆ ಯುವಕರ ಮೂಲಕ ಈಡೇರಿಸಿಕೊಳ್ಳಲು ಮುಂದಾದರು. ಇದರಂತೆ ಬಡ ಯುವಕರಿಗೆ ಉಚಿತ ತರಬೇತಿ ನೀಡಲು ನಿರ್ಧರಿಸಿದರು.

ರೂಪೇಶ್ ಮಕ್ವಾನಾ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದು, ಅವರ ತಂದೆ ಟೈಲರ್, ಮತ್ತು ಅವರ ತಾಯಿ ಗೃಹಿಣಿಯಾಗಿದ್ದಾರೆ.

8 ವರ್ಷಗಳ ಹಿಂದೆ ಸಮಾಜ ಕಾರ್ಯ ಆರಂಭಿಸಿದ್ದೆ. ಇದರಿಂದ 800ಕ್ಕೂ ಹೆಚ್ಚು ಯುವಕರ ಜೀವನ ಬದಲಾಗುವಂತೆ ಮಾಡಿದೆ. 300 ಯವಕರಿಗೆ ತರಬೇತಿ ನೀಡಿದ್ದು, ಈ ಪೈಕಿ ಸುಮಾರು 60 ಯುವಕರು ಭಾರತೀಯ ಸೇನೆ, 58 ಮಂದಿ ಗುಜರಾತ್ ಪೊಲೀಸ್ ಪಡೆ, ಇಬ್ಬರು ನೌಕಾಪಡೆ ಮತ್ತು ಇಬ್ಬರು ವಾಯುಸೇನಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಮಕ್ವಾನಾ ಅವರು ಹೇಳಿದ್ದಾರೆ.

4-5 ವರ್ಷಗಳಿಂದಲೂ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದೇನೆ. ಕ್ರೀಡೆಯಲ್ಲಿ ವೃತ್ತಿಜೀವನ ಬಯಸುವವರಿಗೂ ತರಬೇತಿ ನೀಡುತ್ತಿದ್ದೇನೆ. ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸುವವರಿಗೆ ಬೆಳಿಗ್ಗೆ ತರಬೇತಿ ನೀಡುತ್ತೇನೆ. ಕ್ರೀಡಾ ವಲಯ ಬಯಸುವವರಿಗೆ ಸಂಜೆ ಸಮಯದಲ್ಲಿ ತರಬೇತಿ ನೀಡುತ್ತಿದ್ದೇನೆ. ಇದಲ್ಲದೆ, ಪಾನ್, ಸಿಗರೇಟ್ ಮತ್ತು ತಂಬಾಕು ಚಟದಿಂದ ಯುವಕರನ್ನು ಮುಕ್ತಗೊಳಿಸುವುದರತ್ತಲೂ ಶ್ರಮಿಸುತ್ತಿದ್ದೇನೆ.

ಇದನ್ನೂ ಓದಿ: ಕೆಂಪು ಬಟ್ಟೆ ಬೀಸುತ್ತಾ ಹಳಿ ಮೇಲೆ ಬಿದ್ದ ಮರಕ್ಕೆ ರೈಲು ಡಿಕ್ಕಿಯಾಗುವುದನ್ನು ತಪ್ಪಿಸಿದ ಮಹಿಳೆ; ಎಲ್ಲೆಡೆ ಪ್ರಶಂಸೆ
 
ಪಾನ್ ಶಾಪ್ ಬಳಿ ನಿಂತಿರುವ ಮಕ್ಕಳು ಹಾಗೂ ಯುವಕರ ಬಳಿ ಹೋಡಿ ದೇಶ ಮತ್ತು ಕುಟುಂಬಕ್ಕೆ ನಮ್ಮ ಜೀವನ ಬಹಳ ಮುಖ್ಯ ಎಂಬ ಮಾತುಗಳನ್ನು ಹೇಳುತ್ತೇನೆ. ವ್ಯಸನದಿಂದ ಹೊರಬರಲು ಬಯಸುವವರು ನನ್ನೊಂದಿಗೆ ಬರುವಂತೆ ತಿಳಿಸುತ್ತೇನೆ. ಅವರಿಗೆ ತರಬೇತಿ ನೀಡುತ್ತೇನೆ. ಈ ವರೆಗೂ 500ಕ್ಕೂ ಹೆಚ್ಚು ಯುವವಕರನ್ನು ವ್ಯಸನದಿಂದ ಮುಕ್ತಗೊಳಿಸಿದ್ದೇನೆಂದು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ, ಮಕ್ವಾನಾ ಅವರು, ಯುವ ಬಚಾವೋ ದೇಶ್ ಬಚಾವೋ’ ಮತ್ತು ‘ಭೂಮಿಯನ್ನು ಉಳಿಸಿ’ ಎಂಬ ಮಿಷನ್‌ನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಮೇ 20 ರಂದು ದೆಹಲಿಯಲ್ಲಿ 6,000-ಕಿಮೀ ಮ್ಯಾರಥಾನ್'ನ್ನು ಪೂರ್ಣಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT