ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ 
ಕ್ರೀಡೆ

ಧೋನಿ ಬಿಕಾರಿಯಾಗಿ ಬಿಡ್ತಾನೆ: ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಯುವರಾಜ್ ಸಿಂಗ್

ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆ...

ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ಚಾನೆಲೊಂದರಲ್ಲಿ ಸಂದರ್ಶನದ ವೇಳೆ ತಮ್ಮ ತಂದೆಯ ಹೇಳಿಕೆ ಕುರಿತಂತೆ ಮಾತನಾಡಿರುವ ಯುವರಾಜ್ ಸಿಂಗ್ ಅವರು, ತಮ್ಮ ತಂದೆಯ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಧೋನಿಯೊಂದಿಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ಧೋನಿ ಅವರ ನಾಯಕತ್ವದಲ್ಲಿ ಈಗಲೂ ಆಟವಾಡಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೆ, ಧೋನಿ ತಂದೆಯಾಗಿದ್ದಕ್ಕೆ ಅಭಿನಂದಿಸುವ ಸಲುವಾಗಿ ಅವರನ್ನು ಭೇಟಿಯಾಗಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವಕಪ್- 2015 ರಲ್ಲಿ ಯುವರಾಜ್ ಸಿಂಗ್ ಆಯ್ಕೆಯಾಗದಿರುವುದಕ್ಕೆ ಧೋನಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ್ದ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧೋನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಧೋನಿ ಒಬ್ಬ ಅಹಂಕಾರಿ. ರಾವಣನ ಅಹಂಕಾರ ಕೊನೆಯಾದಂತೆ ಒಂದು ದಿನ ಧೋನಿ ಇದಕ್ಕೆಲ್ಲಾ ಬೆಲೆ ತೆರಲೇ ಬೇರಾಗುತ್ತದೆ. ಧೋನಿ ಏನೂ ಆಗಿರಲಿಲ್ಲ. ಧೋನಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಮಾಧ್ಯಮಗಳು. ಮಾಧ್ಯಮಗಳು ಹೊಗಳಿ ಅಟ್ಟಕ್ಕೇರಿಸಿದ ಕಾರಣವೇ ಧೋನಿಗೆ ಪಟ್ಟ ಕಟ್ಟುವಂತಾಯಿತು. ತನಗೆ ನೆರವು ನೀಡಿದ್ದ ಮಾಧ್ಯಮಗಳನ್ನು ಧೋನಿ ತುಚ್ಛವಾಗಿ ನೋಡುತ್ತಾನೆ. ಆತ ಒಂದೊಂದು ರನ್ ಪಡೆಯುವಾಗಲೂ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ನೋಡಿ ಆತ ವ್ಯಂಗ್ಯವಾಗಿ ನಗುತ್ತಾನೆ. ನಾನೊಬ್ಬ ಪತ್ರಕರ್ತನಾಗಿದ್ದರೆ ಧೋನಿಯ ಕಪಾಳಕ್ಕೆ ಬಾರಿಸುತ್ತಿದ್ದೆ. ಧೋನಿಯಂಥ ಮನುಷ್ಯನನ್ನು ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಕಿಡಿಕಾರಿದ್ದರು ಅಲ್ಲದೆ ಹಿಡಿಶಾಪ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT