ಸಾಂದರ್ಭಿಕ ಚಿತ್ರ 
ಕ್ರೀಡೆ

ಕ್ರಿಕೆಟ್ ಚೆಂಡಿಗೆ ಬಾಲಕ ಬಲಿ

ಮನೆಯ ಬಳಿ ಕ್ರಿಕೆಟ್ ಆಡುತ್ತಿದ್ದ 6 ವರ್ಷದ ಬಾಲಕ ಎದೆಗೆ ಟೆನಿಸ್ ಬಾಲ್ ಬಡಿದು ಸಾವನ್ನಪ್ಪಿದ್ದಾನೆ. ಟಿ. ವಂಶಿಕೃಷ್ಣ ಮೃತ ದುರ್ದೈವಿ...

ಹೈದರಾಬಾದ್: ಮನೆಯ ಬಳಿ ಕ್ರಿಕೆಟ್ ಆಡುತ್ತಿದ್ದ 6 ವರ್ಷದ ಬಾಲಕ ಎದೆಗೆ ಟೆನಿಸ್ ಬಾಲ್ ಬಡಿದು ಸಾವನ್ನಪ್ಪಿದ್ದಾನೆ. ಟಿ. ವಂಶಿಕೃಷ್ಣ ಮೃತ ದುರ್ದೈವಿ. ವಾನಸ್ಥಾಲಿಪುರಂನಲ್ಲಿನ ಸಹಾರಾ ಎಸ್ಟೇಟ್‍ನಲ್ಲಿ ತನ್ನ ನಿವಾಸದ ಅಕ್ಕಪಕ್ಕದ ಮನೆಗಳ ಹುಡುಗರೊಂದಿಗೆ ಆತ ಗುರುವಾರ ಬೆಳಗ್ಗೆ ಕ್ರಿಕೆಟ್ ಆಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಫೀಲ್ಡಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‍ಮನ್ ಬಿರುಸಿನ ಹೊಡೆತಕ್ಕೆ ಸಿಕ್ಕ ಚೆಂಡು ನೇರವಾಗಿ ಬಂದು ವಂಶಿಕೃಷ್ಣನ ಎದೆಗೆ ಅಪ್ಪಳಿಸಿದೆ. ರಭಸವಾದ ಹೊಡೆತವಾಗಿದ್ದರಿಂದ ಆತ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ ಕೃಷ್ಣವಂಶಿ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ದುಃಖಿತರಾದ ಕೃಷ್ಣವಂಶಿಯ ತಂದೆ-ತಾಯಿ, ಜೋರಾಗಿ  ಬ್ಯಾಟಿಂಗ್ ನಡೆಸಿದ್ದ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆತನ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT