ಜೋಷ್ನಾ ಚಿನ್ನಪ್ಪ 
ಕ್ರೀಡೆ

ಸ್ಕ್ವಾಷ್: ಜೋಷ್ನಾ ಚಿನ್ನಪ್ಪಗೆ ಮೆಲ್ಬರ್ನ್ ಗರಿ

ಭಾರತದ ಭರವಸೆಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು, ವಿಕ್ಟೋರಿಯಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ...

ಮೆಲ್ಬರ್ನ್: ಭಾರತದ ಭರವಸೆಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು, ವಿಕ್ಟೋರಿಯಾ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು
ಕೊಂಡಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಪಡೆದಿದ್ದ ಜೋಷ್ನಾ ಚಿನ್ನಪ್ಪ, ತಮ್ಮ ಪ್ರತಿಸ್ಪರ್ಧಿ ಎರಡನೇ ಶ್ರೇಯಾಂಕಿತ ಲೈನ್ ಹನ್ಸೆನ್ ವಿರುದ್ಧ 11-5, 11-4, 11-9 ಅಂಕಗಳ ಅಂತರದಲ್ಲಿ ಜಯಿಸಿ ದ್ದಾರೆ. ಈ ಮೂಲಕ ಜೋಷ್ನಾ ತಮ್ಮ ವೃತ್ತಿ ಜೀವನದ 10ನೇ ವಿಶ್ವ ಸ್ಕ್ವಾಷ್ ಸಂಸ್ಥೆಯ ಪ್ರಶಸ್ತಿ ಗೆದ್ದಂತಾಗಿದೆ.
ಕಳೆದ ವಾರವಷ್ಟೇ ಕೋಯಂಗ್ ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಲೈನ್ ಹನ್ಸೆನ್ ವಿರುದ್ಧ ಸೋಲನುಭವಿಸಿದ್ದ ಜೋಷ್ನಾ ಈ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ರಿಚ್ ಮಂಡ್ ಓಪನ್ ಕಪ್‍ನಲ್ಲಿ ಗೆದ್ದ ನಂತರ ಯಾವುದೇ ಟ್ರೋಫಿಯನ್ನು ಗೆಲ್ಲದ ಜೋಷ್ನಾ, ವರ್ಷಕ್ಕೂ ಹೆಚ್ಚಿನ ಸಮಯದ ನಂತರ ಪ್ರಶಸ್ತಿಯ ದಾಹವನ್ನು
ನೀಗಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಎದುರಾಳಿಯಿಂದ ಪ್ರತಿರೋಧ ಎದುರಿಸಿ ದ್ದಾಗಿ ಒಪ್ಪಿಕೊಂಡಿರುವ ಜೋಶ್ನಾ, ತಮ್ಮ ಮಿಶ್ರಭರಿತ ಹೊಡೆತಗಳು, ಅತ್ಯುತ್ತಮ ಹಾಗೂ ನಿಖರವಾದ ಪ್ಲೇಸ್ಮೆಂಟ್  ಮೂಲಕ ಮೇಲುಗೈ ಸಾಧಿಸಿದ ಜೋಷ್ನಾ ಆಡಿದ ಮೂರೂ ಗೇಮ್ ಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದಿದ್ದ ಜೋಷ್ನಾ, ತಮ್ಮ ಪ್ರಸಕ್ತ ಲಯದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭವಾಗಲಿದ್ದು  ಈ ಯಶಸ್ಸನ್ನು ಮುಂದಿನ  ಸ್ಪರ್ಧೆಗಳಲ್ಲೂ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.
ಈ ಪ್ರಶಸ್ತಿ ಗೆಲುವಿನಿಂದ ಬಹಳ ಸಂತೋಷವಾಗಿದೆ. ಆಸ್ಟ್ರೇಲಿಯಾ ಓಪನ್ ಟೂರ್ನಿ ಸಹ ಇದೇ ಅಂಗಣ ದಲ್ಲಿ ನಡೆಯಲಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಎಂದರು. ಇನ್ನು ಪುರುಷರ ಸಿಂಗಲ್ಸ್ ವಿಭಾಗ ದಲ್ಲಿ ಆಸ್ಟ್ರೇಲಿಯಾದ ರೆಯಾನ್ ಕುಸ್ಕೆಲ್ಲಿ  ತಮ್ಮ ಪ್ರತಿಸ್ಪರ್ಧಿ ಸ್ಕಾಟ್ಲೆಂಡ್‍ನ  ಗ್ರೇಗ್ ಲೊಬ್ಬನ್ 12-10, 12-11, 11-9 ಗೇಮ್ ಗಳ ಅಂತರದಿಂದ ಜಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT