ರಾಹುಲ್ ದ್ರಾವಿಡ್ -ಸೌರವ್ ಗಂಗೂಲಿ 
ಕ್ರೀಡೆ

ಗಂಗೂಲಿ ಕೈಬಿಡಲು ದ್ರಾವಿಡ್ ನಕಾರ

ಹತ್ತು ವರ್ಷಗಳ ಹಿಂದೆ ಟೀಂ ಇಂಡಿಯಾ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅಂದಿನ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಅವರು...

ನವದೆಹಲಿ: ಹತ್ತು ವರ್ಷಗಳ ಹಿಂದೆ ಟೀಂ ಇಂಡಿಯಾ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅಂದಿನ ಕೋಚ್ ಆಗಿದ್ದ ಗ್ರೇಗ್ ಚಾಪೆಲ್  ಅವರು ಗಂಗೂಲಿಯನ್ನು ತಂಡದಿಂದ ಕೈಬಿಡುವಂತೆ ಒತ್ತಡ ಹೇರಿದ್ದರು. ಆದರೆ, ಅಂದು ಟೀಂ ಇಂಡಿಯಾ ನಾಯಕರಾಗಿದ್ದ ರಾಹುಲ್  ದ್ರಾವಿಡ್  ಇದಕ್ಕೆ ಸಮಮ್ಮತಿಸರಲಿಲ್ಲ ಎಂಬ ಕುತೂಹಲಕಾರಿ ವಿಚಾರವನ್ನು ಬಿಸಿಸಿಐನ ಸಹ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆಂದು ಎನ್ ಡಿಟಿವಿ ವರದಿ ಮಾಡಿದೆ. ಭಾರತೀಯ ಕ್ರಿಕೆಟ್ ತಂಡ 2005ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ, ಅಮಿತಾಭ್ ಚೌಧರಿ ಆಗ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ಇಲ್ಲಿ  ನಡೆದ ಖಾಸಗಿ ಮಾತನಾಡಿದ ಅಮಿತಾಭ್, ``ಬಿಸಿಸಿಐ ಜೊತೆಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಗ್ರೇಗ್ ಚಾಪೆಲ್ ಅವರ ಮೊದಲ ಗಂಗೂಲಿ ವಿಚಾರದಲ್ಲಿ ಜಿಗುಟು ಧೋರಣೆ ಪ್ರದರ್ಶಿಸಿದರು. ಇಲ್ಲಿಂದಲೇ ಅವರ ಕಿರಿಕ್ ಶುರುವಾದವು'' ಎಂದ ಅವರು ದ್ರಾವಿಡ್ ಹಾಗೂ ಚಾಪೆಲ್ ನಡುವೆ ನಡೆದಿದ್ದ ವಿಚಾರವನ್ನು ಸವಿಸ್ತಾರವಾಗಿ ಬಿಚ್ಚಿಟ್ಟರು.
``ಆಗ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅದೊಂದು ದಿನ ವಬುಲಾವೆಯೋ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್  ತಯಾರಿಗಾಗಿ ಭಾರತೀಯ ಆಟಗಾರರು ಅಭ್ಯಾಸ ನಡೆಸು ತ್ತಿರುವಾಗ ದ್ರಾವಿಡ್ ಬಳಿ ಸಾಗಿದ ಚಾಪೆಲ್, ಗಂಗೂಲಿಯವರನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದರು. ಇದರಿಂದ ಬೇಸರಗೊಂಡ ದ್ರಾವಿಡ್, ಸರಸರನೆ ಡ್ರೆಸ್ಸಿಂಗ್  ರೂಂನೊಳಗೆ ಧಾವಿಸಿ ಬಂದು ಒಂದು ಕುರ್ಚಿಯನ್ನು ಸಿಟ್ಟಿನಿಂದ  ತಮ್ಮತ್ತ ಎಳೆದುಕೊಂಡು ಕೂತರ್  ನಡೆದ ವಿಚಾರವನ್ನು ದ್ರಾವಿಡ್ ವಿವರಿಸಿದರು'' ಎಂದು ಅಮಿತಾಭ್ ಹೇಳಿ ದರು. ಮುಂದೆ, ಚಾಪೆಲ್ ಅವರು ತಮ್ಮ ಹಠಮಾರಿ ಧೋರಣೆ ಪ್ರದರ್ಶಿಸಿದ್ದರಿಂದ ಇದು ಮುಂದೆ ಹಲವಾರು ಆಂತರಿಕ ಕಲಹಕ್ಕೆ ನಾಂದಿ ಹಾಡಿತು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT