ಆಕರ್ಷಕ ಅರ್ಧಶತಕ ಗಳಿಸಿದ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಶೈಲಿ. 
ಕ್ರೀಡೆ

ಫೈನಲ್‍ಗೆ ಆಸ್ಟ್ರೇಲಿಯಾ

ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ...

ಚೆನ್ನೈ: ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವಿಗೆ ಉನ್ಮುಕ್ತ್ ಚಾಂದ್ ಸಾರಥ್ಯದ ಭಾರತ ಎ ತಂಡ ನೀಡಿದ್ದ 259 ರನ್ ಗಳಿಗೆ ಉತ್ತರವಾಗಿ ಉಸ್ಮಾನ್ ಖವಾಜಾ ನೇತೃತ್ವದ ಆಸೀಸ್, 48.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸುವುದರೊಂದಿಗೆ ವಿಯಯಿಯಾಯಿತು. ಆರಂಭಿಕ ಟ್ರಾವಿಸ್ ಹೆಡ್ (45), ಕ್ರಿಸ್ ಲಿನ್ (63), ಕಲಮ್ ಫಗ್ರ್ಯೂಸನ್ (ಅಜೇಯ 45) ಹಾಗೂ ಆ್ಯಡಂ ಝಂಪಾ (54) ಹಾಗೂ 39 ರನ್‍ಗಳಿಗೆ 5 ವಿಕೆಟ್ ಪಡೆದ ಆ್ಯಷ್ಟನ್ ಆಗರ್ ಭಾರತ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿಂಚಿದ ಆಗರ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ `ಎ' ತಂಡ ಎಡಗೈ ಸ್ಪಿನ್ನರ್ ಆ್ಯಷ್ಟನ್ ಆಗರ್ ನಡೆಸಿದ ಮಾರಕ ದಾಳಿಗೆ ಸಿಲುಕಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 258 ರನ್ ಗಳಿಸಿತು. ಆರಂಭಿಕ ಮಯಾಂಕ್ ಅಗರ್ವಾಲ್ (61) ಯಶಸ್ವಿ ಅರ್ಥಶತಕ ಪೂರೈಸಿದರೆ, ನಾಯಕ ಉನ್ಮುಕ್ತ್ ಚಾಂದ್ ಕೇವಲ 5 ರನ್ ಗಳಿಗೆ ನಿರುತ್ತರರಾದರು.

ಸಂಕ್ಷಿಪ್ತ ಸ್ಕೋರ್:
ಭಾರತ `ಎ': 50 ಓವರ್ ಗಳಲ್ಲಿ 9 ವಿಕೆಟ್‍ಗೆ 258 (ಮಯಾಂಕ್ 61, ಮನೀಶ್ ಪಾಂಡೆ 50, ಕರುಣ್ ನಾಯರ್ 32; ಆ್ಯಷ್ಟನ್ ಆಗರ್ 30ಕ್ಕೆ 5) ಆಸ್ಟ್ರೇಲಿಯಾ ಎ: 48.3 ಓವರ್ ಗಳಲ್ಲಿ 7 ವಿಕೆಟ್ ಗೆ 262 (ಕ್ರಿಸ್ ಲಿನ್ 63, ಆ್ಯಡಂ ಝಂಪಾ 54: ಫರ್ಗ್ಯೂಸನ್ ಅಜೇಯ 45: ಕರಣ್ ಶರ್ಮಾ 45ಕ್ಕೆ 3 ) ಪಂದ್ಯಶ್ರೇಷ್ಠ: ಆ್ಯಷ್ಟನ್ ಆಗರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ