ಆಕರ್ಷಕ ಅರ್ಧಶತಕ ಗಳಿಸಿದ ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಶೈಲಿ. 
ಕ್ರೀಡೆ

ಫೈನಲ್‍ಗೆ ಆಸ್ಟ್ರೇಲಿಯಾ

ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ...

ಚೆನ್ನೈ: ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವಿಗೆ ಉನ್ಮುಕ್ತ್ ಚಾಂದ್ ಸಾರಥ್ಯದ ಭಾರತ ಎ ತಂಡ ನೀಡಿದ್ದ 259 ರನ್ ಗಳಿಗೆ ಉತ್ತರವಾಗಿ ಉಸ್ಮಾನ್ ಖವಾಜಾ ನೇತೃತ್ವದ ಆಸೀಸ್, 48.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸುವುದರೊಂದಿಗೆ ವಿಯಯಿಯಾಯಿತು. ಆರಂಭಿಕ ಟ್ರಾವಿಸ್ ಹೆಡ್ (45), ಕ್ರಿಸ್ ಲಿನ್ (63), ಕಲಮ್ ಫಗ್ರ್ಯೂಸನ್ (ಅಜೇಯ 45) ಹಾಗೂ ಆ್ಯಡಂ ಝಂಪಾ (54) ಹಾಗೂ 39 ರನ್‍ಗಳಿಗೆ 5 ವಿಕೆಟ್ ಪಡೆದ ಆ್ಯಷ್ಟನ್ ಆಗರ್ ಭಾರತ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿಂಚಿದ ಆಗರ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ `ಎ' ತಂಡ ಎಡಗೈ ಸ್ಪಿನ್ನರ್ ಆ್ಯಷ್ಟನ್ ಆಗರ್ ನಡೆಸಿದ ಮಾರಕ ದಾಳಿಗೆ ಸಿಲುಕಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 258 ರನ್ ಗಳಿಸಿತು. ಆರಂಭಿಕ ಮಯಾಂಕ್ ಅಗರ್ವಾಲ್ (61) ಯಶಸ್ವಿ ಅರ್ಥಶತಕ ಪೂರೈಸಿದರೆ, ನಾಯಕ ಉನ್ಮುಕ್ತ್ ಚಾಂದ್ ಕೇವಲ 5 ರನ್ ಗಳಿಗೆ ನಿರುತ್ತರರಾದರು.

ಸಂಕ್ಷಿಪ್ತ ಸ್ಕೋರ್:
ಭಾರತ `ಎ': 50 ಓವರ್ ಗಳಲ್ಲಿ 9 ವಿಕೆಟ್‍ಗೆ 258 (ಮಯಾಂಕ್ 61, ಮನೀಶ್ ಪಾಂಡೆ 50, ಕರುಣ್ ನಾಯರ್ 32; ಆ್ಯಷ್ಟನ್ ಆಗರ್ 30ಕ್ಕೆ 5) ಆಸ್ಟ್ರೇಲಿಯಾ ಎ: 48.3 ಓವರ್ ಗಳಲ್ಲಿ 7 ವಿಕೆಟ್ ಗೆ 262 (ಕ್ರಿಸ್ ಲಿನ್ 63, ಆ್ಯಡಂ ಝಂಪಾ 54: ಫರ್ಗ್ಯೂಸನ್ ಅಜೇಯ 45: ಕರಣ್ ಶರ್ಮಾ 45ಕ್ಕೆ 3 ) ಪಂದ್ಯಶ್ರೇಷ್ಠ: ಆ್ಯಷ್ಟನ್ ಆಗರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT