ಪ್ರೊ ಕಬಡ್ಡಿ: ರಾಜೇಶ್ ನರ್ವಾಲ್ ಮಿಂಚು, 4ನೇ ಸ್ಥಾನಕ್ಕೆ ಜೈಪುರ ಜಿಗಿತ 
ಕ್ರೀಡೆ

ಪ್ಯಾಂಥರ್ಸ್ ಗೆ ದಾಖಲೆ ಗೆಲುವು

ತಂಡದ ಪ್ರಮುಖ ಆಟಗಾರ ರಾಜೇಶ್ ನರ್ವಾಲ್ (15 ರೈಡಿಂಗ್ ಅಂಕ) ದಾಖಲೆಯ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ದಾಖಲೆ ಗೆಲವು ದಾಖಲಿಸಿದೆ...

ನವದೆಹಲಿ: ತಂಡದ ಪ್ರಮುಖ ಆಟಗಾರ ರಾಜೇಶ್ ನರ್ವಾಲ್ (15 ರೈಡಿಂಗ್ ಅಂಕ) ದಾಖಲೆಯ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ದಾಖಲೆ ಗೆಲವು ದಾಖಲಿಸಿದೆ.

ಸೋಮವಾರ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 51-21 ಅಂಕಗಳ ಅಂತರದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ ಜಯ ಸಂಪಾದಿಸಿತು. ಈ ಪಂದ್ಯದಲ್ಲಿ 30 ಅಂಕಗಳ ಅಂತರದ ಗೆಲುವು ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ತಂಡ ಗಳಿಸಿದ ದಾಖಲೆಯ ಅಂತರದ ಗೆಲುವಾಗಿದೆ.

ಉಭಯ ತಂಡಗಳು ಅಂಕಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದುದರಿಂದ ಮೇಲುಗೈ ಸಾಧಿಸಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿತ್ತು. ಆದರೆ, ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾ„ಸುವಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಯಶ ಕಂಡಿತು.

ಇನ್ನು ಪಂದ್ಯ ಶುರುವಾದ ಲಾಗಾಯ್ತಿನಿಂದಲೂ ತನ್ನ ರಕ್ಷಣಾತ್ಮಕ ವಿಭಾಗದ ಭದ್ರಕೋಟೆ ಹಾಗೂ ರೈಡರ್ ಗಳ ಚುರುಕಿನ ಪ್ರದರ್ಶನದ ನೆರವಿನಿಂದೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರಾಬಲ್ಯ ಮೆರೆಯಿತು. ಪಂಜ್ಯದ ಮೂರನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ನಂತರ 6ನೇ ನಿಮಿಷದ ವೇಳೆಗೆ 6-2ರ ಮುನ್ನಡೆ ಪಡೆದಿತ್ತು. ತಮ್ಮ ಬಿಗಿ ಹಿಡಿತವನ್ನು ಮುಂದುವರೆಸಿದ ಡೆಲ್ಲಿ ಆಟಗಾರರು ಪಂದ್ಯದ ಮೊದಲಾರ್ಧದ ವೇಳೆಗೆ 19-9ರಿಂದ 10 ಅಂಕಗಳ ಮುನ್ನಡೆ ಸಾಧಿಸಿದರು.

ಇನ್ನು ಪಂದ್ಯದ ದ್ವಿತಿಯಾರ್ಧದಲ್ಲೂ ಜೈಪುರ ತಂಡ ಉತ್ತಮ ಪ್ರದರ್ಶನ ಮುಂದುವರೆಸಿತು. 21ನೇ ನಿಮಿಷದಲ್ಲಿ ಎರಡನೇ ಬಾರಿಗೆ ಆಲೌಟ್ ಆದ ಡೆಲ್ಲಿ ತಂಡ 9-22 ಅಂಕಘಲ ಅಂತರದಲ್ಲಿ ಹಿನ್ನಡೆ ಅನುಭವಿಸಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಆತಿಥೇಯ ಡೆಲ್ಲಿ ತಂಡ ಒಟ್ಟು 4 ಬಾರಿ ಆಲೌಟ್ ಆಗಿ ಹಿನ್ನಡೆ ಅನುಭವಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT