ಪ್ರೊ ಕಬಡ್ಡಿ: ರಾಜೇಶ್ ನರ್ವಾಲ್ ಮಿಂಚು, 4ನೇ ಸ್ಥಾನಕ್ಕೆ ಜೈಪುರ ಜಿಗಿತ 
ಕ್ರೀಡೆ

ಪ್ಯಾಂಥರ್ಸ್ ಗೆ ದಾಖಲೆ ಗೆಲುವು

ತಂಡದ ಪ್ರಮುಖ ಆಟಗಾರ ರಾಜೇಶ್ ನರ್ವಾಲ್ (15 ರೈಡಿಂಗ್ ಅಂಕ) ದಾಖಲೆಯ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ದಾಖಲೆ ಗೆಲವು ದಾಖಲಿಸಿದೆ...

ನವದೆಹಲಿ: ತಂಡದ ಪ್ರಮುಖ ಆಟಗಾರ ರಾಜೇಶ್ ನರ್ವಾಲ್ (15 ರೈಡಿಂಗ್ ಅಂಕ) ದಾಖಲೆಯ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ದಾಖಲೆ ಗೆಲವು ದಾಖಲಿಸಿದೆ.

ಸೋಮವಾರ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 51-21 ಅಂಕಗಳ ಅಂತರದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ ಜಯ ಸಂಪಾದಿಸಿತು. ಈ ಪಂದ್ಯದಲ್ಲಿ 30 ಅಂಕಗಳ ಅಂತರದ ಗೆಲುವು ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ತಂಡ ಗಳಿಸಿದ ದಾಖಲೆಯ ಅಂತರದ ಗೆಲುವಾಗಿದೆ.

ಉಭಯ ತಂಡಗಳು ಅಂಕಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದುದರಿಂದ ಮೇಲುಗೈ ಸಾಧಿಸಲು ಗೆಲ್ಲಲೇಬೇಕಾದ ಒತ್ತಡ ಎದುರಾಗಿತ್ತು. ಆದರೆ, ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾ„ಸುವಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಯಶ ಕಂಡಿತು.

ಇನ್ನು ಪಂದ್ಯ ಶುರುವಾದ ಲಾಗಾಯ್ತಿನಿಂದಲೂ ತನ್ನ ರಕ್ಷಣಾತ್ಮಕ ವಿಭಾಗದ ಭದ್ರಕೋಟೆ ಹಾಗೂ ರೈಡರ್ ಗಳ ಚುರುಕಿನ ಪ್ರದರ್ಶನದ ನೆರವಿನಿಂದೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರಾಬಲ್ಯ ಮೆರೆಯಿತು. ಪಂಜ್ಯದ ಮೂರನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ನಂತರ 6ನೇ ನಿಮಿಷದ ವೇಳೆಗೆ 6-2ರ ಮುನ್ನಡೆ ಪಡೆದಿತ್ತು. ತಮ್ಮ ಬಿಗಿ ಹಿಡಿತವನ್ನು ಮುಂದುವರೆಸಿದ ಡೆಲ್ಲಿ ಆಟಗಾರರು ಪಂದ್ಯದ ಮೊದಲಾರ್ಧದ ವೇಳೆಗೆ 19-9ರಿಂದ 10 ಅಂಕಗಳ ಮುನ್ನಡೆ ಸಾಧಿಸಿದರು.

ಇನ್ನು ಪಂದ್ಯದ ದ್ವಿತಿಯಾರ್ಧದಲ್ಲೂ ಜೈಪುರ ತಂಡ ಉತ್ತಮ ಪ್ರದರ್ಶನ ಮುಂದುವರೆಸಿತು. 21ನೇ ನಿಮಿಷದಲ್ಲಿ ಎರಡನೇ ಬಾರಿಗೆ ಆಲೌಟ್ ಆದ ಡೆಲ್ಲಿ ತಂಡ 9-22 ಅಂಕಘಲ ಅಂತರದಲ್ಲಿ ಹಿನ್ನಡೆ ಅನುಭವಿಸಿತು. ಪಂದ್ಯದ ದ್ವಿತೀಯಾರ್ಧದಲ್ಲಿ ಆತಿಥೇಯ ಡೆಲ್ಲಿ ತಂಡ ಒಟ್ಟು 4 ಬಾರಿ ಆಲೌಟ್ ಆಗಿ ಹಿನ್ನಡೆ ಅನುಭವಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

SCROLL FOR NEXT