ಕರ್ನಾಟಕ ರಣಜಿ ತಂಡ 
ಕ್ರೀಡೆ

ಕರ್ನಾಟಕ ತಂಡದ ರಣಜಿ ಚ್ಯಾಂಪಿಯನ್ ಪಟ್ಟದ ಕನಸು ನುಚ್ಚು ನೂರು

ನಿರ್ಣಾಯಕ 8ನೇ ಹಾಗೂ ಅಂತಿಮ ಲೀಗ್ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಅಗ್ರ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 53 ರನ್ ಸೋಲನುಭವಿಸಿದೆ...

ಪುಣೆ: ಮಹಾರಾಷ್ಟ್ರ ತಂಡದೆದುರಿನ ಮಾಡು ಇಲ್ಲವೆ ಮಡಿ ಸವಾಲಿನ ನಿರ್ಣಾಯಕ 8ನೇ ಹಾಗೂ ಅಂತಿಮ ಲೀಗ್ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಅಗ್ರ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 53 ರನ್ ಸೋಲನುಭವಿಸಿದೆ. ಈ ಮೂಲಕ ಸತತ ಮೂರನೇ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸುವ ಅವಕಾಶವನ್ನು ಕಳೆದುಕೊಂಡಿದೆ.

ಕಳೆದ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ (34 ರಣಜಿ ಪಂದ್ಯ, 2 ಇರಾನಿ ಟ್ರೋಫಿ ಪಂದ್ಯ, 1 ಬಾಂಗ್ಲಾದೇಶ ಎ ವಿರುದ್ಧ ಪಂದ್ಯ) ಸೋಲಿಲ್ಲದೆ ಮುನ್ನುಗ್ಗಿದ್ದ ರಾಜ್ಯ ತಂಡದ ಓಟಕ್ಕೆ ಈ ಸೋಲಿನೊಂದಿಗೆ ಕಡಿವಾಣ ಬಿದ್ದಿದೆ. ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ಜಯ, 1 ಸೋಲು ಮತ್ತು 5 ಡ್ರಾದೊಂದಿಗೆ ವಿನಯ್ಕುಮಾರ್ ಪಡೆ 24 ಅಂಕದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟು ಕ್ವಾರ್ಟರ್​ಫೈನಲ್​ನಿಂದ ವಂಚಿತವಾಗಿದೆ.

ಮಹಾರಾಷ್ಟ್ರ ಎಸೆದ 293 ರನ್ ಗೆಲುವಿನ ಸವಾಲಿಗೆ ಪ್ರತಿಯಾಗಿ 1 ವಿಕೆಟ್​ಗೆ 61ರನ್​ಗಳಿಂದ ಶುಕ್ರವಾರ ಅಂತಿಮ ದಿನದಾಟ ಮುಂದುವರಿಸಿದ ಕರ್ನಾಟಕ, ರಾಬಿನ್ ಉತ್ತಪ್ಪ(61ರನ್, 108ಎಸೆತ, 6ಬೌಂಡರಿ, 2ಸಿಕ್ಸರ್) ಹಾಗೂ ಉಪನಾಯಕ ಸಿಎಂ ಗೌತಮ್ 65ರನ್, 104ಎಸೆತ, 7ಬೌಂಡರಿ) ಅರ್ಧಶತಕದಾಟದ ಹೊರತಾಗಿಯೂ ಮಧ್ಯಮ ವೇಗಿಗಳಾದ ನಿಖಿಲ್ ಧುಮಲ್(78ಕ್ಕೆ 5) ಹಾಗೂ ಅನುಪಮ್ ಸಂಕ್ಲೇಚ(65ಕ್ಕೆ 4) ಸಂಘಟಿತ ದಾಳಿಗೆ ತತ್ತರಿಸಿ 239ರನ್​ಗೆ ದ್ವಿತೀಯ ಇನಿಂಗ್ಸ್ ಮುಗಿಸಿ ಶರಣಾಯಿತು.

ಮಹಾರಾಷ್ಟ್ರ: 212 ಮತ್ತು 260, ಕರ್ನಾಟಕ: 180 ಮತ್ತು 72 ಓವರ್​ಗಳಲ್ಲಿ 239(ಉತ್ತಪ್ಪ 61, ಗೌತಮ್ 65, ಮಯಾಂಕ್ ಅಗರ್ವಾಲ್ 31, ಮನೀಷ್ ಪಾಂಡೆ 0, ಕರುಣ್ ನಾಯರ್ 4, ಧುಮಲ್ 78ಕ್ಕೆ 5, ಸಂಕ್ಲೇಚ 65ಕ್ಕೆ4).

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT