ಬೆಂಗಳೂರು ಯೋಧಾಸ್ ಗೆ ಸೋಲು 
ಕ್ರೀಡೆ

ಯೋಧಾಸ್‍ಗೆ ಮತ್ತೆ ಮುಖಭಂಗ

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹರ್ಯಾಣ ಹ್ಯಾಮರ್ಸ್ ತಂಡ ಚೊಚ್ಚಲ ಪ್ರೊ. ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ...

ಗುರ್‍ಗಾವ್: ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹರ್ಯಾಣ ಹ್ಯಾಮರ್ಸ್ ತಂಡ ಚೊಚ್ಚಲ ಪ್ರೊ. ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ.

ಬುಧವಾರ ಗುರ್‍ಗಾವ್‍ನಲ್ಲಿ ಆರಂಭವಾದ ದ್ವಿತೀಯ ಹಂತದ ಟೂರ್ನಿಯ ಮೊದಲ ದಿನ ಹರ್ಯಾಣ ಹ್ಯಾಮರ್ಸ್ ತಂಡ ಬೆಂಗಳೂರು ಯೋಧಾಸ್ ವಿರುದ್ಧ 4-3 ಅಂತರದ ರೋಚಕ ಜಯ  ಸಂಪಾದಿಸಿತು. ಆ ಮೂಲಕ ಪ್ರಶಸ್ತಿ ಗೆಲ್ಲುವಫೇವರಿಟ್ ತಂಡವಾಗಿ ಬಿಂಬಿತವಾಗಿರುವ ಬೆಂಗಳೂರು ಯೋಧಾಸ್ ತಂಡ ಸತತ ಎರಡನೇ ಸೋಲನುಭವಿಸಿದೆ. ಈ ಸೆಣಸಾಟದಲ್ಲಿ ಆತ್ಮೀಯ  ಸ್ನೇಹಿತರಾದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಮತ್ತು ಬಜರಂಗ್ ಪುನಿಯಾ ಅವರ ನಡುವಣ ಪುರುಷರ 65 ಕೆ.ಜಿ ವಿಭಾಗದ ಕಾದಾಟ ಹೆಚ್ಚು ಆಕರ್ಷಕವಾಗಿತ್ತು.

ಈ ಪಂದ್ಯದಲ್ಲಿ ಬಜರಂಗ್ ತನ್ನ ಹಿರಿಯ ಹಾಗೂ ಮಾರ್ಗದರ್ಶಕ ಯೋಗೇಶ್ವರ್‍ಗೆ ತಾಂತ್ರಿಕವಾಗಿ ಸಾಕಷ್ಟು ಉತ್ತಮ ಸವಾಲು ನೀಡಿದರು. ಆದರೆ, 3-2 ಅಂತರದಲ್ಲಿ ಮೇಲುಗೈ ಸಾಧಿಸುವಲ್ಲಿ  ಯಶಸ್ವಿಯಾದರು. ಪುರುಷರ 57 ಕೆ.ಜಿ ವಿಭಾಗದ ಪಂದ್ಯದವೂ ಸಹ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಯಿತು. ಹರ್ಯಾಣ ತಂಡದ ನಿತೀನ್ ರಾತೀ ಮತ್ತು ಪ್ರತಿಸ್ಪರ್ಧಿ ಸಂದೀಪ್ ತೋಪಾರ್  ಜಿದ್ದಾಜಿದ್ದಿನ ಹೋರಾಟ ನಡೆಸಿದರಾದರೂ ಅಂತಿಮ ವಾಗಿ ನಿತೀನ್ 9-8 ಅಂತರದಲ್ಲಿ ಮುನ್ನಡೆ ಸಾಧಿಸಿದರು.

ಮಹಿಳೆಯರ 53 ಕೆ.ಜಿ ವಿಭಾಗದ ಪಂದ್ಯದಲ್ಲಿ ಟಟಿಯನಾ ಕಿಟ್ ಯೋಧಾಸ್ ನ ಲಲಿತಾ ಶೆರಾವತ್ ವಿರುದ್ಧ ಅರ್ಹ ಜಯ ಸಂಪಾದಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಬೆಂಗಳೂರಿನ  ಪಾವ್ಲೊ ಒಲಿನಿಕ್ ಪುರುಷರ 97 ಕೆ.ಜಿ ವಿಭಾಗದ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಹ್ಯಾಮರ್ಸ್ ತಂಡದ ಅಂತರವನ್ನು ಕಡಿಮೆ ಮಾಡಿದರು. ಪಾವ್ಲೊ ತಮ್ಮ ಪ್ರತಿಸ್ಪರ್ಧಿ ಉಕ್ರೇನ್‍ನ ಯೂರಿ  ಮೈರ್ ವಿರುದ್ಧ ತಾಂತ್ರಿಕ ಮಾದರಿ ಆಧಾರದ ಮೇಲೆ 10-0 ಮುನ್ನಡೆ ಪಡೆದರು. ಹರ್ಯಾಣ ತಂಡದ ಗೀತಿಕಾ ಜಖಾರ್ ಮಹಿಳೆಯರ 69 ಕೆ.ಜಿ ವಿಭಾಗದ ಪಂದ್ಯದಲ್ಲಿ ಬೆಂಗಳೂರಿನ  ನವ್‍ಜೋತ್ ಕೌರ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT