ಬೆಂಗಳೂರು ಯೋಧಾಸ್ ಗೆ ಸೋಲು 
ಕ್ರೀಡೆ

ಯೋಧಾಸ್‍ಗೆ ಮತ್ತೆ ಮುಖಭಂಗ

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹರ್ಯಾಣ ಹ್ಯಾಮರ್ಸ್ ತಂಡ ಚೊಚ್ಚಲ ಪ್ರೊ. ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ...

ಗುರ್‍ಗಾವ್: ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಹರ್ಯಾಣ ಹ್ಯಾಮರ್ಸ್ ತಂಡ ಚೊಚ್ಚಲ ಪ್ರೊ. ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ.

ಬುಧವಾರ ಗುರ್‍ಗಾವ್‍ನಲ್ಲಿ ಆರಂಭವಾದ ದ್ವಿತೀಯ ಹಂತದ ಟೂರ್ನಿಯ ಮೊದಲ ದಿನ ಹರ್ಯಾಣ ಹ್ಯಾಮರ್ಸ್ ತಂಡ ಬೆಂಗಳೂರು ಯೋಧಾಸ್ ವಿರುದ್ಧ 4-3 ಅಂತರದ ರೋಚಕ ಜಯ  ಸಂಪಾದಿಸಿತು. ಆ ಮೂಲಕ ಪ್ರಶಸ್ತಿ ಗೆಲ್ಲುವಫೇವರಿಟ್ ತಂಡವಾಗಿ ಬಿಂಬಿತವಾಗಿರುವ ಬೆಂಗಳೂರು ಯೋಧಾಸ್ ತಂಡ ಸತತ ಎರಡನೇ ಸೋಲನುಭವಿಸಿದೆ. ಈ ಸೆಣಸಾಟದಲ್ಲಿ ಆತ್ಮೀಯ  ಸ್ನೇಹಿತರಾದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಮತ್ತು ಬಜರಂಗ್ ಪುನಿಯಾ ಅವರ ನಡುವಣ ಪುರುಷರ 65 ಕೆ.ಜಿ ವಿಭಾಗದ ಕಾದಾಟ ಹೆಚ್ಚು ಆಕರ್ಷಕವಾಗಿತ್ತು.

ಈ ಪಂದ್ಯದಲ್ಲಿ ಬಜರಂಗ್ ತನ್ನ ಹಿರಿಯ ಹಾಗೂ ಮಾರ್ಗದರ್ಶಕ ಯೋಗೇಶ್ವರ್‍ಗೆ ತಾಂತ್ರಿಕವಾಗಿ ಸಾಕಷ್ಟು ಉತ್ತಮ ಸವಾಲು ನೀಡಿದರು. ಆದರೆ, 3-2 ಅಂತರದಲ್ಲಿ ಮೇಲುಗೈ ಸಾಧಿಸುವಲ್ಲಿ  ಯಶಸ್ವಿಯಾದರು. ಪುರುಷರ 57 ಕೆ.ಜಿ ವಿಭಾಗದ ಪಂದ್ಯದವೂ ಸಹ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಯಿತು. ಹರ್ಯಾಣ ತಂಡದ ನಿತೀನ್ ರಾತೀ ಮತ್ತು ಪ್ರತಿಸ್ಪರ್ಧಿ ಸಂದೀಪ್ ತೋಪಾರ್  ಜಿದ್ದಾಜಿದ್ದಿನ ಹೋರಾಟ ನಡೆಸಿದರಾದರೂ ಅಂತಿಮ ವಾಗಿ ನಿತೀನ್ 9-8 ಅಂತರದಲ್ಲಿ ಮುನ್ನಡೆ ಸಾಧಿಸಿದರು.

ಮಹಿಳೆಯರ 53 ಕೆ.ಜಿ ವಿಭಾಗದ ಪಂದ್ಯದಲ್ಲಿ ಟಟಿಯನಾ ಕಿಟ್ ಯೋಧಾಸ್ ನ ಲಲಿತಾ ಶೆರಾವತ್ ವಿರುದ್ಧ ಅರ್ಹ ಜಯ ಸಂಪಾದಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಬೆಂಗಳೂರಿನ  ಪಾವ್ಲೊ ಒಲಿನಿಕ್ ಪುರುಷರ 97 ಕೆ.ಜಿ ವಿಭಾಗದ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಹ್ಯಾಮರ್ಸ್ ತಂಡದ ಅಂತರವನ್ನು ಕಡಿಮೆ ಮಾಡಿದರು. ಪಾವ್ಲೊ ತಮ್ಮ ಪ್ರತಿಸ್ಪರ್ಧಿ ಉಕ್ರೇನ್‍ನ ಯೂರಿ  ಮೈರ್ ವಿರುದ್ಧ ತಾಂತ್ರಿಕ ಮಾದರಿ ಆಧಾರದ ಮೇಲೆ 10-0 ಮುನ್ನಡೆ ಪಡೆದರು. ಹರ್ಯಾಣ ತಂಡದ ಗೀತಿಕಾ ಜಖಾರ್ ಮಹಿಳೆಯರ 69 ಕೆ.ಜಿ ವಿಭಾಗದ ಪಂದ್ಯದಲ್ಲಿ ಬೆಂಗಳೂರಿನ  ನವ್‍ಜೋತ್ ಕೌರ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT