ಕ್ರೀಡೆ

ಬುಕ್ಕಿ ಜೊತೆ ಹುಸೇನ್ ನಂಟು ವರದಿ ಅಲ್ಲಗಳೆದ ಬಿಸಿಬಿ

Vishwanath S

ಢಾಕಾ: ವಿಶ್ವಕಪ್ ಟೂರ್ನಿಯ ವೇಳೆ ಐಸಿಸಿ ವಿಧಿಸಿದ್ದ ಕರ್ಫ್ಯೂ ಉಲ್ಲಂಘಿಸಿದ ಕಾರಣಕ್ಕೆ, ಬಾಂಗ್ಲಾದೇಶ ತಂಡದ ಆಡಳಿತ ಮಂಡಳಿ ವೇಗಿ ಅಲ್ ಅಮೀನ್ ಹುಸೇನ್ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕರೆಯಿಸಿಕೊಂಡಿದೆ.

ಆದರೆ ಸ್ಥಳಿಯ ಪತ್ರಿಕೆಯೊಂದು, ಹುಸೇನ್ ಭಾರತೀಯ ಮೂಲದ ಬುಕ್ಕಿಯೊಬ್ಬನನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ತವರಿಗೆ ಕರೆಯಿಸಿಕೊಳ್ಳಲಾಗಿದೆ. ಅಲ್ಲದೆ ಹುಸೇನ್ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಪರಿವೀಕ್ಷಣೆಯಲ್ಲಿದ್ದಾರೆ ಎಂದು ವರದಿ ಮಾಡಿತ್ತು.

ಈ ವರದಿಯನ್ನು ಮಂಡಳಿ ತಳ್ಳಿ ಹಾಕಿದ್ದು, ಹುಸೇನ್ ತಂಡದ ನಿಯಮ ಪಾಲಿಸದಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಲ್ಲ ಎಂದು ಬಿಸಿಬಿ ಮಾಧ್ಯಮ ಮುಖ್ಯಸ್ಥ ಜಲಾಲ್ ಯೂನಸ್ ಸ್ಪಷ್ಟಪಡಿಸಿದ್ದಾರೆ.

SCROLL FOR NEXT