1983ರ ಚಾಂಪಿಯನ್ ಭಾರತ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

1983ರಲ್ಲಿ ಹೊಸ ಇತಿಹಾಸ ಬರೆದ ಭಾರತ

ಆರಂಭಿಕ ಎರಡು ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯ ನೋಡಿದ್ದ ಕ್ರಿಕೆಟ್ ಜಗತ್ತಿಗೆ, ಮೂರನೇ ಆವೃತ್ತಿಯಲ್ಲಿ ದೊಡ್ಡ ಅಚ್ಚರಿ ಎದುರಾಗಿತ್ತು.

ಆರಂಭಿಕ ಎರಡು ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯ ನೋಡಿದ್ದ ಕ್ರಿಕೆಟ್ ಜಗತ್ತಿಗೆ, ಮೂರನೇ ಆವೃತ್ತಿಯಲ್ಲಿ ದೊಡ್ಡ ಅಚ್ಚರಿ ಎದುರಾಗಿತ್ತು.

ಕಾರಣ ಕ್ರಿಕೆಟ್‌ನಲ್ಲಿ ಆಗಷ್ಟೇ ಬೆಳವಣಿಗೆ ಕಾಣುತ್ತಿದ್ದ ಭಾರತ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿತ್ತು.

ಆ ಕ್ಷಣದ ನಂತರ ಭಾರತದಲ್ಲಿ ಕ್ರಿಕೆಟ್ ಕ್ರೀಡೆ ಬೆಳೆದ ರೀತಿ ಅದ್ಭುತ. ಭಾರತದಲ್ಲಿ ಕ್ರಿಕೆಟ್ ಈಗ ಧರ್ಮವಾಗಿ ಪರಿವರ್ತನೆಯಾಗುವಲ್ಲಿ 1983ರ ವಿಶ್ವಕಪ್ ಗೆಲುವು ಸಹ ಪ್ರಮುಖ ಕಾರಣಗಳಲ್ಲಿ ಒಂದು ಎಂದರೆ ತಪ್ಪಿಲ್ಲ.

ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿದ್ದರೂ, ಜಿಂಬಾಬ್ವೆ ಹಾಗೂ ಭಾರತದಂತಹ ದುರ್ಬಲ ತಂಡಗಳು ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್‌ನಂತಹ ಪ್ರಬಲ ತಂಡಗಳ ವಿರುದ್ಧ ಅದ್ಭುತ ಗೆಲುವ ದಾಖಲಿಸಿ, ಹೊಸ ಸಂಚಲನ ಸೃಷ್ಟಿಸಿದ್ದವು. ಈ ಟೂರ್ನಿಯಲ್ಲಿ ದುರ್ಬಲ ತಂಡಗಳು ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿದ ರೀತಿ ವಿಶ್ವದಲ್ಲಿನ ಕ್ರಿಕೆಟ್ ಆಭಿಮಾನಿಗಳ ಕುತೂಹಲವನ್ನು ಕೆರಳಿಸಿತ್ತು.

ಈ ಟೂರ್ನಿಯಲ್ಲಿ ಶ್ರೀಲಂಕಾ ಸೇರಿದಂತೆ 7 ತಂಡಗಳು ಟೆಸ್ಟ್ ಮಾನ್ಯತೆ ಪಡೆದ ತಂಡಗಳಾಗಿದ್ದವು. ಜಿಂಬಾಬ್ವೆ ಅರ್ಹತೆ ಪಡೆಯುವ ಮೂಲಕ ಟೂರ್ನಿಗೆ ಪ್ರವೇಶಿಸಿತ್ತು. ಈ ಟೂರ್ನಿಯಲ್ಲೂ 60 ಓವರ್ ಪಂದ್ಯಗಳು ನಡೆದಿದ್ದು, 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.

ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಉಪಾಂತ್ಯದ ಸುತ್ತಿಗೆ ಪ್ರವೇಶಿಸಿದ್ದವು. ಈ ಟೂರ್ನಿಯಲ್ಲಿ ಕರ್ನಾಟಕದ ರೋಜರ್ ಬಿನ್ನಿ 18 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇನ್ನು ಇಂಗ್ಲೆಂಡ್‌ನ ಡೇವಿಡ್ ಗೋವರ್ (348) ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರನಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel