ಕ್ರೀಡೆ

ವಾವ್ರಿಂಕಾ, ಜೊಕೊ ಕ್ವಾರ್ಟರ್ ಫೈನಲ್ ಘಟಕ್ಕೆ

ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ವಿಶ್ವದ ನಂಬರ್‍ಒನ್ ಆಟಗಾರ ಜೊಕೊವಿಚ್ ಅವರು...

ಮೆಲ್ಬರ್ನ್: ಹಾಲಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ, ವಿಶ್ವದ ನಂಬರ್‍ಒನ್ ಆಟಗಾರ ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್‍ನ ಕ್ವಾರ್ಟರ್ ಫೈನಲ್ ಘಟ್ಟ ಪ್ರವೇಶಿಸಿದ್ದಾರೆ.

ಮಾರ್ಗರೇಟ್ ಕೋರ್ಟ್ ಅರೇನಾದಲ್ಲಿ ನಡೆದ ಸ್ವಿರ್ಡರ್ಲೆಂಡ್‍ನ ವಾವ್ರಿಂಕಾ ಹಾಗೂ ಸ್ಪೇನ್‍ನ ಗಿಲೆರ್ಮೊ ಗಾರ್ಸಿಯಾ ಲೊಪೇಜ್ ನಡುವಿನ ಸುಮಾರು 3 ಗಂಟೆ 2 ನಿಮಿಷಗಳವರೆಗೆ ನಡೆಯಿತು. ಇದರಲ್ಲಿ ವಾವ್ರಿಂಕಾ, ಗಿಲೆರ್ಮೋ ರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದರು. ಆದರೂ, ವಾವ್ರಿಂಕಾ ಅವರು 7-6 (7-2), 6-4, 4-6, 7-6
(10-8) ಸೆಟ್‍ಗಳಲ್ಲಿ ಮಣಿಸಿ, ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟರು.

ಇನ್ನು, ಸರ್ಬಿಯಾದ ಜೊಕೊವಿಚ್ ಅವರು, ಲಕ್ಸೆಂಬರ್ಗ್‍ನ ಗಿಲ್ಸ್ ಮುಲ್ಲರ್ ವಿರುದಟಛಿ 6-4, 7-5, 7-5 ಅಂತರದಲ್ಲಿ ಜಯ ಸಾಧಿಸಿದರು. ಮೊದಲ ಸೆಟ್‍ನ ಆರಂಭದಿಂದಲೂ ಎದುರಾಳಿ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಜೊಕೊವಿಚ್, ಪಂದ್ಯದ ಅಂತ್ಯದವರೆಗೂ ಪಟ್ಟು ಬಿಡದೇ ಆಡಿದರು. ಅಲ್ಲಲ್ಲಿ, ಮುಲ್ಲರ್ ಅವರು ತೀವ್ರ ಪ್ರತಿರೋಧ ತೋರಿದರೂ, ಛಲಬಿಡದ ಜೊಕೊವಿಚ್ ಪಂದ್ಯದಲ್ಲಿ ಜಯಶಾಲಿಯಾದರು.

ಇತಿಹಾಸ ಬರೆದ ಮೈಲೋಸ್
ಭಾನುವಾರ ನಡೆದ 4ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ, ಕೆನಡಾದ ಮೈಲೋಸ್ ರಾವೊನಿಕ್, ಸ್ಪೇನ್‍ನ ಫೆಲಿಸಿಯಾನೊ ಲೋಪೇಜ್ ವಿರುದ್ಧ 6-4, 4-6, 6-3, 7-6 (9-7), 6-3 ಸೆಟ್‍ಗಳಲ್ಲಿ ಜಯ ಸಾಧಿಸಿ, ಕ್ವಾರ್ಟರ್ ಫೈನಲ್‍ಗೆ ಲಗ್ಗೆಯಿಟ್ಟರು. ಈ ಮೂಲಕ, ಕೆನಡಾದ ಟೆನಿಸ್ ಆಟಗಾರರೊಬ್ಬರು ಕಳೆದ 47 ವರ್ಷಗಳಿಂದೀಚೆಗೆ ಆಸ್ಟ್ರೇಲಿಯನ್ ಓಪನ್‍ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಪಡೆದರು. 1968ರಲ್ಲಿ ಕೆನಡಾದ ಮೈಕಲ್ ಬೆಲ್ಕಿನ್ ಎಂಬುವರು ಮೆಲ್ಬರ್ನ್‍ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದರು.

ಫೆರರ್‍ಗೆ ನಿರಾಸೆ
ಫಾರ್ಮ್ ನಲ್ಲಿರುವ ಜಪಾನ್‍ನ ಕಿಯ್  ನಿಶಿಕೋರಿ ಅವರು ವಿರುದ್ಧ  ಸೆಣೆಸಿದ್ದ ಸ್ಪೇನ್‍ನ ಡೇವಿಡ್  ಫೆರರ್, 3-6, 3-6, 3-6 ಅಂತರದಲ್ಲಿ ಸೋತು ಹೊರನಡೆದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT