ಯು ಮುಂಬಾ ತಂಡ 
ಕ್ರೀಡೆ

ಪ್ರೋ ಕಬಡ್ಡಿ: ಯು ಮುಂಬಾಗೆ ಸತತ 4ನೇ ಗೆಲುವು

ರಕ್ಷಣಾತ್ಮಕ ವಿಭಾಗದ ಸಂಘಟಿತ ಪ್ರದರ್ಶನದಿಂದ ಯು ಮುಂಬಾ ತಂಡ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ...

ಮುಂಬೈ: ರಕ್ಷಣಾತ್ಮಕ ವಿಭಾಗದ ಸಂಘಟಿತ ಪ್ರದರ್ಶನದಿಂದ ಯು ಮುಂಬಾ ತಂಡ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ.

ಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ಯು ಮುಂಬಾ ತಂಡವು 28-21 ಅಂಕಗಳ ಅಂತರದಲ್ಲಿ ಪುನೇರಿ ಪಲ್ಟಾನ್ಸ್ ವಿರುದ್ಧ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಉಭಯ ಆಟಗಾರರು ಪರಸ್ಪರ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರೂ, ಮುಂಬಾ ಎದುರಿನ ಆಕ್ರಮಣಕಾರಿ ಆಟಕ್ಕೆ ಪುಣೆ ತಲೆ ಬಾಗಲೇಬೇಕಾಯಿತು.

ಈ ಗೆಲುವಿನ ಮೂಲಕ ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಪಂದ್ಯದ ಮೂಲಕ ಟೂರ್ನಿಯಲ್ಲಿನ ಮುಂಬೈ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಕೋಲ್ಕಾತಾದಲ್ಲಿ 2ನೇ ಹಂತದ ಪಂದ್ಯಗಳು ನಡೆಯಲಿವೆ. ಆರಂಭಿಕ ಹಂತದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟ ಪ್ರದರ್ಶಿಸಿದವು. ಹಾಗಾಗಿ ಆರಂಭಿಕ ಐದು ನಿಮಿಷದಲ್ಲಿ ಎರಡೂ ತಂಡಗಳು 2-2 ಅಂಕಗಳಿಂದ ಸಮ-ಬಲ ಸಾಧಿಸಿದ್ದವು.

ಈ ಬಾರಿ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಜಯ ದಾಖಲಿಸಿದ್ದ ಯು ಮುಂಬಾ ತಂಡ, ಪಂದ್ಯದಲ್ಲಿ ಆತ್ಮ ವಿಶ್ವಾಸದಿಂದಲೇ ಕಣಕ್ಕಿಳಿದಿತ್ತು. ಇತ್ತ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿ ಆಘಾತ ಅನುಭವಿಸಿದ್ದ ಪುನೇರಿ ಪಲ್ಟಾನ್ಸ್ ತಂಡ ಈ ಪಂದ್ಯ-ದಲ್ಲಿ ಹೋರಾಟಕಾರಿ ಪ್ರದರ್ಶನ ನೀಡಿತು.

ಆರಂಭಿಕ 10 ನಿಮಿಷಗಳಲ್ಲಿ ಚೇತರಿಕೆಯ ಆಟ ಪ್ರದರ್ಶಿಸಿದ ಯು ಮುಂಬಾ ತಂಡ 6-4 ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಪುಣೆ ತಂಡ ಇನ್ನಷ್ಟು ಚುರುಕಿನ ಆಟವಾಡಿತು.
ಪುಣೆ ತಂಡ ಆಲೌಟ್ ಆಗುವ ನಿರೀಕ್ಷೆ ಇತ್ತಾದರೂ ಮೊದಲು ಆಲೌಟ್ ಆಗಿದ್ದು ಮಾತ್ರ ಯು ಮುಂಬಾ ತಂಡ. 30ನೇ ನಿಮಿಷದಲ್ಲಿ ಮುಂಬೈ ತಂಡವನ್ನು ಆಲೌಟ್ ಮಾಡಿದ ಪುಣೆ 18-17 ಅಂತರದ ಮುನ್ನಡೆ ಪಡೆದು ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ನಂತರ ಸತತವಾಗಿ 5 ಅಂಕಗಳನ್ನು ಗಳಿಸಿದ ಮುಂಬೈ ಪಡೆ 21-18 ಅಂತರದಿಂದ ಪುಣೆ ತಂಡವನ್ನು ಪಂದ್ಯದಲ್ಲಿ ಹಿಂದೆ ಹಾಕಿತು.

ಪಂದ್ಯದಲ್ಲಿ ಯು ಮುಂಬಾ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ಶಬ್ಬೀರ್ ಬಾಪು ರೈಡಿಂಗ್‍ನಲ್ಲಿ 8 ಅಂಕಗಳನ್ನು ಗಳಿಸಿದರು. ಆ ಮೂಲಕ ಪಂದ್ಯದಲ್ಲಿ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪುಣೆ ತಂಡದ ಪರ ನಾಯಕ ವಜೀರ್ ಸಿಂಗ್ 7 ಅಂಕ
ದಾಖಲಿಸಿದರು. ಬುಧವಾರ ಕೋಲ್ಕತಾದಲ್ಲಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಡಲಿದ್ದಾರೆ.

ಇಂದಿನ ಪಂದ್ಯಗಳು
ಬೆಂಗಾಲ್ ವಾರಿಯರ್ಸ್ v/s ಜೈಪುರ್ ಪಿಂಕ್‍ಪ್ಯಾಂಥರ್ಸ್, ರಾತ್ರಿ 8ಕ್ಕೆ
ಬೆಂಗಳೂರು ಬುಲ್ಸ್ v/s ಪಾಟ್ನಾ ಪೈರೆಟ್ಸ್, ರಾತ್ರಿ 9ಕ್ಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT