ಐರ್ಲೆಂಡ್ ತಂಡದ ದಾಂಡಿಗರು 
ಕ್ರೀಡೆ

ಭಾರತ vs ಐರ್ಲೆಂಡ್ ಪಂದ್ಯ: ಭಾರತಕ್ಕೆ 260 ರನ್ ಗಳ ಗುರಿ

ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿಂದು ಭಾರತ ಮತ್ತು ಐರ್ಲೆಂಡ್ ನಡುವೆ ಸೆಣಸಾಟ ನಡೆದಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ...

ಸೆಡನ್ ಪಾರ್ಕ್, ಹ್ಯಾಮಿಲ್ಟನ್:  ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿಂದು ಭಾರತ ಮತ್ತು ಐರ್ಲೆಂಡ್ ನಡುವೆ ಸೆಣಸಾಟ ನಡೆದಿದ್ದು ಟಾಸ್ ಗೆದ್ದು  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ಭಾರತಕ್ಕೆ 260 ರನ್‌ಗಳ ಗುರಿ ನೀಡಿದೆ.

ಐರ್ಲೆಂಡ್ ತಂಡ ಆರಂಭದಲ್ಲಿಯೇ ಉತ್ತಮ ಆರಂಭವನ್ನು ಕಂಡುಕೊಳ್ಳುವ ಮೂಲಕ ಭಾರತಕ್ಕೆ ಸವಾಲೊಡ್ಡಿತ್ತು. ಆರಂಭಿಕ ದಾಂಡಿಗರಾದ ಪೋರ್ಟ್‌ಫೀಲ್ಡ್ ಮತ್ತು ಸ್ಟಿರ್ಲಿಂಗ್ ಉತ್ತಮ ಆರಂಭ ನೀಡಿದ್ದು, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

15ನೇ ಓವರ್‌ನಲ್ಲಿ ಅಶ್ವಿನ್ ಬಾಲ್‌ಗೆ  ಸ್ಟಿರ್ಲಿಂಗ್ ಔಟಾಗುವ ಮೂಲಕ ಭಾರತಕ್ಕೆ ಮೊದಲ ವಿಕೆಟ್ ದಕ್ಕಿತು. ಪೋರ್ಟರ್ ಫೀಲ್ಡ್ ಜತೆಗೆ ಉತ್ತಮ ಸಾಥ್ ನೀಡಿದ ಸ್ಟಿರ್ಲಿಂಗ್ 42 ಬಾಲ್‌ಗಳಲ್ಲಿ 42 ರನ್‌ಗಳನ್ನು ಗಳಿಸಿದ್ದರು. ನಂತರ ಕ್ರೀಸ್‌ಗಿಳಿದ ಜೋಯ್ಸಿ  2 ರನ್ ಗಳಿಸಿ ರೈನಾ ಬಾಲ್‌ಗೆ ಔಟಾದರು.  ಇದಾದ ನಂತರ ಪೋಟರ್‌ಫೀಲ್ಡ್‌ಗೆ ಸಾಥ್ ನೀಡಿದ್ದು ನೀಲ್ ಓಬ್ರಿಯಾನ್. ಇವರಿಬ್ಬರ ಜತೆಯಾಟದಿಂದಾಗಿ ಐರ್ಲೆಂಡ್ ಉತ್ತಮ ಸ್ಕೋರ್‌ಗಳಿಸಿ ಮುನ್ನಡೆಯುತ್ತಿದ್ದಂತೆ  ಮೋಹಿತ್ ಶರ್ಮಾ ಎಸೆತಕ್ಕೆ ಪೋರ್ಟ್‌ಫೀಲ್ಡ್ (67) ಔಟಾಗಿ ಪೆವಿಲಿಯನ್‌ಗೆ ನಡೆದರು.  ನಂತರ ಬಂದ ಕೆವಿನ್ ಓಬ್ರಿಯಾನ್ (1) ಮತ್ತು ವಿಲ್ಸನ್  (6 )ರನ್ ಗಳಿಸಿ ಬೇಗನೆ ಔಟಾದರು. ಒಟ್ಟೊಟ್ಟಿಗೆ ವಿಕೆಟ್ ಪತನವಾಗುವ ಮೂಲಕ ಐರ್ಲೆಡ್ ಸ್ಕೋರ್ ಕೂಡಾ ಮಂದಗತಿಯಲ್ಲಿ ಸಾಗಿತು. ಆದಾಗ್ಯೂ, ಭಾರತಕ್ಕೆ ನೀಲ್ ಓಬ್ರಿಯಾನ್‌ರ ವಿಕೆಟ್ ಅತ್ಯಂತ ಮಹತ್ವದ್ದಾಗಿತ್ತು. ಹೀಗಿರುವಾಗ 43ನೇ ಓವರ್‌ನಲ್ಲಿ ಮಹಮ್ಮದ್ ಶಮಿ ಅವರ ಬಾಲ್‌ಗೆ ನೀಲ್ ಯಾದವ್‌ಗೆ ಕ್ಯಾಚಿತ್ತು ಔಟಾದರು. ನೀಲ್ ಔಟಾದ ಕೂಡಲೇ  43ನೇ ಓವರ್‌ನಲ್ಲಿ ಥಾಮ್ಸನ್‌ನ್ನು ಕೊಹ್ಲಿ ರನೌಟ್ ಮಾಡಿದರು.
40 ಓವರ್‌ನ ನಂತರದ ಮೂರು ಓವರ್‌ಗಳಲ್ಲಿ ಐರ್ಲೆಂಡ್ ಒಟ್ಟೊಟ್ಟಿಗೆ 3 ವಿಕೆಟ್ ಕಳೆದುಕೊಂಡಿತು.

ಇದಾದ ಮೇಲೆ 49ನೇ ಓವರ್‌ನಲ್ಲು ಕುಸಕ್ ನ್ನು ಮೊಹಮ್ಮದ್ ಶಮಿ ಔಟ್ ಮಾಡುವ ಮೂಲಕ ಐರ್ಲೆಂಡ್ ಆಲೌಟ್ ಆಯಿತು. 12 ರನ್ ಗಳಿಸಿದ ಮೂನಿ ಅಜೇಯರಾಗಿ ಉಳಿದರು.

49 ಓವರ್‌ಗಳಲ್ಲಿ 259 ರನ್ ದಾಖಲಿಸಿರುವ ಪ್ರಸ್ತುತ ತಂಡ ಭಾರತಕ್ಕೆ  260 ರನ್‌ಗಳ ಗುರಿ ನೀಡಿದೆ.

ಭಾರತದ ಪರವಾಗಿ ಶಮಿ 3 ವಿಕೆಟ್ ಮತ್ತು ಅಶ್ವಿನ್ 2 ವಿಕೆಟ್ ಗಳಿಸಿದ್ದಾರೆ. ಅದೇ ವೇಳೆ ಯಾದವ್, ಮೋಹಿತ್ ಶರ್ಮಾ, ಜಡೇಜಾ, ರೈನಾ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!

ಇರಾನ್ ಹಡಗಿನ ಮೇಲೆ ದಾಳಿ; 101 ಜನ ನಾಪತ್ತೆ; ಅಮೆರಿಕದೊಂದಿಗೆ 'ಸಂಧಾನ ಇಲ್ಲ', ಯುದ್ಧ ಮುಂದುವರಿಯಲಿದೆ! Video

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ'; Sam Curran ಅತ್ಯುತ್ಸಾಹ!

SCROLL FOR NEXT