ಸೌರವ್ ಗಂಗೂಲಿ-ವಿರೇಂದರ್ ಸೆಹ್ವಾಗ್ 
ಕ್ರೀಡೆ

ಸೆಹ್ವಾಗ್‌ಗೆ ವಿದಾಯ ಕಾರ್ಯಕ್ರಮ ಏರ್ಪಡಿಸುವಂತೆ ಗಂಗೂಲಿ ಒತ್ತಾಯ

ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವ ವಿರೇಂದರ್ ಸೆಹ್ವಾಗ್ ಅವರಿಗೆ ವಿದಾಯ ಕಾರ್ಯಕ್ರಮ...

ನವದೆಹಲಿ: ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವ ವಿರೇಂದರ್ ಸೆಹ್ವಾಗ್ ಅವರಿಗೆ ವಿದಾಯ ಕಾರ್ಯಕ್ರಮವನ್ನೇರ್ಪಡಿಸುವಂತೆ ಸೌರವ್ ಗಂಗೂಲಿ ಬಿಬಿಸಿಐಗೆ ಒತ್ತಾಯಿಸಿದ್ದಾರೆ.
ಸುದ್ದಿ ಪತ್ರಿಕೆಯೊಂದರ ಜತೆ ಮಾತನಾಡಿದ ಗಂಗೂಲಿ, ಸೆಹ್ವಾಗ್ ಎಕ್ಸ್‌ಟ್ರಾ ಆರ್ಡಿನರಿ ಗಿಫ್ಟೆಡ್ ಕ್ರಿಕೆಟರ್ ಎಂದು ಬಣ್ಣಿಸಿದ್ದಾರೆ.
ಕ್ರಿಕೆಟ್ ಪಂದ್ಯವೊಂದನ್ನು ಆಡಿದ ನಂತರ ಅವರು ವಿದಾಯ ಹೇಳಬೇಕೆಂಬುದು ನನ್ನ ಆಸೆ. ಆದ ಕಾರಣ ಸೆಹ್ವಾಗ್‌ಗೆ ಈ ತರ ವಿದಾಯ ಹೇಳಲು ಬಿಸಿಸಿಐ ಅವಕಾಶ ಮಾಡಿಕೊಡಬೇಕು . ಮುಂಬೈ ಏಕದಿನ ಪಂದ್ಯದ ವೇಳೆ ಅವರನ್ನು ಸನ್ಮಾನಿಸುವುದು ಉತ್ತಮ ಎಂದು ಗಂಗೂಲಿ ಹೇಳಿದ್ದಾರೆ.
ಸೆಹ್ವಾಗ್‌ನ ಹೊಡೆಬಡಿ ಆಟಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟವರು ಗಂಗೂಲಿ. ಈ ಬಗ್ಗೆ ಸೆಹ್ವಾಗ್ ಹಲವಾರು ಕಡೆ ಹೇಳಿದ್ದೂ ಇದೆ. 
ಸೆಹ್ವಾಗ್‌ನ ತಮಾಷೆಗಳನ್ನು ಹೇಗೆ ಮರೆಯಲು ಸಾಧ್ಯ ? ನಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯವಾಗಿತ್ತು ಅದು. ನಮ್ಮ ಮುಂದೆ ಇಂಗ್ಲೆಂಡ್ 325 ರನ್‌ಗಳ ಗುರಿಯಿರಿಸಿತ್ತು. ಅಷ್ಟೊಂದು ಸ್ಕೋರ್ ಮಾಡುವುದು ನಮ್ಮಿಂದ ಸಾಧ್ಯವೇ ಎಂಬ ಒತ್ತಡದಲ್ಲಿ ನಾನಿದ್ದೆ. ಆರಂಭಿಕ ದಾಂಡಿಗರಾಗಿ ನಾವು ಕ್ರೀಸಿಗಿಳಿದಾಗ ನಾನು ತುಂಬಾ ವ್ಯಾಕುಲನಾಗಿದ್ದೆ. ಆದರೆ ಸೆಹ್ವಾಗ್ ಸೀಟಿ ಹೊಡೆಯುತ್ತಾ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸ್ಕೋರ್ ಜಾಸ್ತಿ ಇದೆ, ಆಟದತ್ತ ಗಮನ ಹರಿಸು ಎಂದು ನಾನು ಸೆಹ್ವಾಗ್‌ಗೆ ಹೇಳಿದರೆ, ಕ್ಯಾಪ್ಟನ್..ಈ ಮ್ಯಾಚ್ ನಾವೇ ಗೆಲ್ಲುತ್ತೇವೆ ಎಂದು ಉತ್ತರಿಸಿದ್ದರು ಎಂದು ಸೆಹ್ವಾಗ್ ಜತೆಗಿನ ನೆನಪುಗಳನ್ನು ಗಂಗೂಲಿ ಬಿಚ್ಚಿಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT