ಕ್ರೀಡೆ

ಅಂಪೈರನ್ನು ತಳ್ಳಿ ಅನುಚಿತ ವರ್ತನೆ: ಗಂಭೀರ್‌ಗೆ ನಿಷೇಧ ಸಾಧ್ಯತೆ

Vishwanath S
ನವದೆಹಲಿ: ರಣಜಿ ಪಂದ್ಯದ ವೇಳೆ ಅಂಪೈರ್ ರನ್ನು ತಳ್ಳಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ದೆಹಲಿ ರಣಜಿ ತಂಡದ ನಾಯಕ ಗೌತಮ್ ಗಂಭೀರ್ ಗೆ ನಿಷೇಧ ಹೇರುವ ಸಾಧ್ಯತೆ ಇದೆ. 
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದೆಹಲಿ ಮತ್ತು ಪಶ್ಚಿಮಬಂಗಾಳ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಪಶ್ಚಿಮಬಂಗಾಳ ನಾಯಕ ಮನೋಜ್ ತಿವಾರಿ ಅವರೊಂದಿಗೆ ಗಂಭೀರ್ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಅಂಪೈರ್ ಶ್ರೀನಾಥ್ ರನ್ನು ಗಂಭೀರ್ ತಳ್ಳಿ ಆನ್ ಫೀಲ್ಡ್ ನಲ್ಲಿ ಅನುಚಿತ ವರ್ತನೆ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಭೀರ್ ಅವರು ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ. 
SCROLL FOR NEXT