ಪ್ರಸಿದ್ಧ್ ಎಂ ಕೃಷ್ಣ 
ಕ್ರೀಡೆ

ರಣಜಿ ತಂಡದಲ್ಲಿ ಪ್ರಸಿದ್ಧ್, ಸುಚಿತ್

ಪ್ರಸಿದ್ಧ್ ಎಂ ಕೃಷ್ಣ ಹಾಗೂ ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಸ್ಪಿನ್ನರ್ ಜೆ.ಸುಚಿತ್ ಕರ್ನಾಟಕ ರಣಜಿ ತಂಡಕ್ಕೆ ಲಗ್ಗೆ ಹಾಕಿದ್ದಾರೆ.

ಬೆಂಗಳೂರು: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಐದು ವಿಕೆಟ್ ಗಳನ್ನು ಎಗರಿಸಿ ಭರವಸೆ ಮೂಡಿಸಿರುವ ವೇಗಿ ಪ್ರಸಿದ್ಧ್ ಎಂ ಕೃಷ್ಣ ಹಾಗೂ ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಸ್ಪಿನ್ನರ್ ಜೆ.ಸುಚಿತ್ ಕರ್ನಾಟಕ ರಣಜಿ ತಂಡಕ್ಕೆ ಲಗ್ಗೆ ಹಾಕಿದ್ದಾರೆ.

ಕರ್ನಾಟಕ ತಂಡದ ಆಯ್ಕೆ ಸಮಿತಿ ಅಕ್ಟೋಬರ್ 1 ರಿಂದ 4 ರವರೆಗೆ ರಣಜಿ ಟ್ರೋಫಿ ಎ ಗುಂಪಿನಲ್ಲಿ ಅಸ್ಸಾಂ ವಿರುದ್ಧ ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಹದಿನೈದು ಮಂದಿ ಆಟಗಾರರನ್ನು ಅಂತಿಮಗೊಳಿಸಿದ್ದು, ಈ ಇಬ್ಬರು ಯುವ ಆಟಗಾರರನ್ನೂ ಸೇರ್ಪಡೆಗೊಳಿಸಿದೆ. ಇವರೊಂದಿಗೆ ಶಿಶಿರ್ ಭಾವಾನೆ ಹಾಗೂ ಮಯಾಂಕ್ ಅಗರವಾಲ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ತಂಡದ ಸಾರಥ್ಯವನ್ನು ಆರ್. ವಿನಯ್ ಕುಮಾರ್ ಹೊತ್ತುಕೊಂಡಿದ್ದರೆ, ಬಾಂಗ್ಲಾದೇಶ ಎ ತಂಡದ ವಿರುದ್ಧ ಯುವ ತಂಡವನ್ನು ಯಶಸ್ವಿಯಾಗಿ ಗೆಲುವಿನತ್ತ ಮುನ್ನಡೆಸಿದ ಸಿಎಂ ಗೌತಮ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ತಂಡದ ವಿವರ: ಆರ್ ವಿನಯ್ ಕುಮಾರ್(ನಾಯಕ), ಸಿ.ಎಂ ಗೌತಮ್(ಉಪನಾಯಕ), ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕರುಣ್ ನಾಯರ್, ಆರ್.ಸಮರ್ಥ, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ಹೆಚ್.ಎಸ ಶರತ್, ಜೆ.ಸುಚಿತ್, ಶಿಶಿರ್ ಭಾವಾನೆ, ಮಯಾಂಕ್ ಅಗರವಾಲ್ ಮತ್ತು ಪ್ರಸಿದ್ಧ್ ಎಂ ಕೃಷ್ಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT