ಪ್ರಮುಖ ಸುತ್ತಿಗೆ ಸೋಮ್ದೇವ್ 
ಕ್ರೀಡೆ

ಪ್ರಮುಖ ಸುತ್ತಿಗೆ ಸೋಮ್ದೇವ್

ಕಳೆದ ವರ್ಷ ಪ್ರಮುಖ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದ ಸೋಮ್ದೆವ್ ದೇವ್‍ವರ್ಮನ್, ಈ ಬಾರಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ...

ಚೆನ್ನೈ: ಕಳೆದ ವರ್ಷ ಪ್ರಮುಖ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದ ಸೋಮ್ದೆವ್ ದೇವ್‍ವರ್ಮನ್, ಈ ಬಾರಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಭಾನುವಾರ ನಡೆದ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಸೋಮ್ದೇವ್, ತಮ್ಮ ಪ್ರತಿಸ್ಪರ್ಧಿ ಬ್ರಿಟನ್‍ನ ಜೇಮ್ಸ್ ವಾರ್ಡ್ ಅವರನ್ನು 2-6, 7-5,
6-4 ಸೆಟ್‍ಗಳ ಅಂತರದಿಂದ ಜಯಿಸಿದರು. ಸುದೀರ್ಘ ಎರಡು ಗಂಟೆ 3 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೋಮ್ದೇವ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. 
ಮೊದಲ ಸೆಟ್‍ನಲ್ಲಿ ವಾರ್ಡ್ ವಿರುದ್ಧ ನಿಯಂತ್ರಣ ಸಾಧಿಸಲು ವಿಫಲರಾದ ಸೋಮ್, 2-6ರ ಹಿನ್ನಡೆ ಅನುಭವಿಸಿದರು. ನಂತರ ಹೇರಾಟ ನಡೆಸಿದ ಸ್ಥಳೀಯ ಆಟಗಾರ ಅಂತಿಮ ಎರಡು ಸೆಟ್‍ಗಳಲ್ಲಿ ಕ್ರಮವಾಗಿ 7-5, 6-4 ಸೆಟ್‍ಗಳಿಂದ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆ ಮೂಲಕ ರಾಮ್ಕಮಾರ್ ರಾಮನಾಥನ್ ಅವರೊಂದಿಗೆ ಪುರುಷರ ಸಿಂಗಲ್ಸ್ ವಿಭಾಗದ ಪ್ರಮುಖ ಸುತ್ತಿಗೆ  ತೆರಳಿದ್ದಾರೆ. ಇನ್ನು ಪುರುಷರ ಡಬಲ್ಸ್‍ನಲ್ಲಿ  ಭಾರತದ ಖ್ಯಾತನಾಮರಾದ ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ ಮತ್ತು ಮಹೇಶ್ ಭೂಪತಿ ಮತ್ತೆ ಕಣಕ್ಕಿಳಿಯುತ್ತಿರುವುದು ಭಾರತದ ಭರವಸೆ ಹೆಚ್ಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT