ಸಾಂದರ್ಭಿಕ ಚಿತ್ರ 
ಕ್ರೀಡೆ

ರಿಯೋ ಒಲಂಪಿಕ್ಸ್ ನಲ್ಲಿ ಪೋಕೆಮಾನ್ ಗೋ ಇಲ್ಲ; ಕ್ರೀಡಾಪಟುಗಳಿಗೆ ನಿರಾಸೆ

ಡೋಪಿಂಗ್ ಬಿಕ್ಕಟ್ಟು ಮತ್ತು ಸೌಲಭ್ಯಗಳ ಕೊರತೆ ಇವಕ್ಕಿಂತಲೂ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಅವಕಾಶ ಇಲ್ಲದೆ ಇರುವುದು ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ

ಲಂಡನ್: ಡೋಪಿಂಗ್ ಬಿಕ್ಕಟ್ಟು ಮತ್ತು ಸೌಲಭ್ಯಗಳ ಕೊರತೆ ಇವಕ್ಕಿಂತಲೂ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಅವಕಾಶ ಇಲ್ಲದೆ ಇರುವುದು ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ನಿರಾಸೆ ತಂದಿದೆ. 
31 ಕಟ್ಟಡಗಳು ಮತ್ತು 3604 ಅಪಾರ್ಟ್ ಮೆಂಟ್ ಗಳಿರುವ ಒಲಂಪಿಕ್ಸ್ ಗ್ರಾಮಕ್ಕೆ ಜುಲೈ 31 ರಂದು ನೂರಾರು ಕ್ರೀಡಾಪಟುಗಳು ತೆರಳಿದ್ದಾರೆ. ಗ್ರಾಮದಲ್ಲಿ ಇದ್ದ ತೊದರೆಗಳನ್ನು ನಿವಾರಿಸಿದ್ದೇವೆ ಎಂದು ರಿಯೋ ವ್ಯವಸ್ಥಾಪಕ ಸಮಿತಿ ಹೇಳಿಕೊಂಡಿದೆ. 
ಆದರೆ ಕ್ರೀಡಾಪಟುಗಳು ಹಿಡಿಯಲು ಪೋಕೆಮಾನ್ ಗಳು ಇಲ್ಲದಿರುವುದರ ಬಗ್ಗೆ ಆರೋಪಿಸುತ್ತಿದ್ದಾರೆ. ಸದ್ಯಕ್ಕೆ ಈ ಮೊಬೈಲ್ ಆಟ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಫಿಲಿಪೈನ್ಸ್, ನ್ಯೂಜಿಲ್ಯಾಂಡ್, ಬ್ರಿಟನ್ ಮತ್ತು ಜರ್ಮನಿಯಲ್ಲಿ ಲಭ್ಯವಿದ್ದು ಬ್ರೆಜಿಲ್ ನಲ್ಲಿ ಇನ್ನು ಬಿಡುಗಡೆಯಾಗಬೇಕಿದೆ. 
ಆದುದರಿಂದ್ ಈ ಆಪ್ ಹೊಂದಿರುವ ಕ್ರೀಡಾಪಟುಗಳಿಗೆ ರಿಯೋ ನಗರದ ನಿಜವಾದ ಭೂಪಟ ಲಭ್ಯವಾಗದೆ ಕೇವಲ ಡಿಜಿಟಲ್ ಭೂಪಟ ಮಾತ್ರ ಲಭ್ಯವಿದ್ದು ಪೋಕೆಸ್ಟಾಪ್ ಗಳು ಕಾಣದೆ ಕ್ರೀಡಾಪಟುಗಳಿಗೆ ನಿರಾಸೆಯಾಗಿದೆ. 
ಇದರಿಂದ ಬೇರೆ ಕ್ರೀಡಾಪಟುಗಳನ್ನು ಭೇಟಿ ಮಾಡಲು ಹೆಚ್ಚಿನ ಸಮಯಾವಾಕಾಶ ಸಿಕ್ಕಂತಾಗಿದೆ ಎಂದಿದ್ದಾರೆ ಕೆನಡಾದ ಹಾಕಿ ಆಟಗಾರ ಮ್ಯಾಟಿಕ್ ಸರಮೆಂಟೊ.  ಆದರೆ ಈ ಕ್ರೀಡಾಕೂಟದ ವಿರಾಮದ ವೇಳೆಯಲ್ಲಿ ಪೊಕೆಮಾನ್ ಗೋ ಆಟ ಆಡುವ ಅವಕಾಶ ಇದ್ದಲ್ಲಿ ಉಪಯುಕ್ತವಿತ್ತು ಎಂದಿರುವ ಅವರು "ಕೆಲವು ಬಾರಿ ಪ್ರಮುಖ ವಿಷಯಗಳಿಂದ ಮನಸ್ಸನ್ನು ಹೊರಗಿಟ್ಟು ಆರಾಮವಾಗಿರಬಹುದಿತ್ತು" ಎಂದಿದ್ದಾರೆ.  
ಪೋಕೆಮಾನ್ ಗೋ ಆಟ ಲಭ್ಯವಿರುವ ದೇಶಗಳಲ್ಲಿ ಪೋಕೆಸ್ಟಾಪ್ ಗಳನ್ನು ಗ್ರಾಹಕರನ್ನು ಸೆಳೆಯಲು ಬಳಸಲಾಗುತ್ತಿದೆ. ಹೋಟೆಲ್ ಗಳು, ಬಾರ್ ಗಳು ಇತ್ಯಾದಿ ಸ್ಥಾನಗಳಲ್ಲಿ ಪೋಕೆಸ್ಟಾಪ್ ಗಳಿದ್ದು ವಿರಳ ಪೋಕೆಮಾನ್ ಗಳನ್ನು ಹಿಡಿಯಲು ಜನ ಬರುತ್ತಾರೆ. 
ಇದನ್ನು ಮನಗಂಡಿರುವ ರಿಯೋ ಮೇಯರ್ ಎಡ್ವಾರ್ಡೊ ಪೇಸ್, ಈ ಆಟವನ್ನು ಬ್ರೆಜಿಲ್ ನಲ್ಲಿ ಬಿಡುಗಡೆ ಮಾಡುವಂತೆ ಇದನ್ನು ಅಭಿವೃದ್ಧಿ ಮಾಡಿರುವ ಸಂಸ್ಥೆಗೆ ಮನವಿ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT