ಸಾಕು ನಾಯಿಯೊಂದಿಗೆ ಸೆರೆನಾ ವಿಲಿಯಮ್ಸ್ (ಸಂಗ್ರಹ ಚಿತ್ರ) 
ಕ್ರೀಡೆ

ನಾಯಿ ಊಟದ ರುಚಿ ನೋಡಿದ ಟೆನಿಸ್ ಆಟಗಾರ್ತಿಯ ಫಜೀತಿ ಏನಾಯ್ತು ಗೊತ್ತಾ!

ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ.

ರೋಮ್: ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ.

ಇಟಾಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇಂತಹುದೊಂದು ಪೇಚಾಟಕ್ಕೆ ಸಿಲುಕಿ ಒದ್ದಾಡಿದ್ದಾರೆ.  ಇಟಾಲಿಯನ್ ಓಪನ್ ಟೂರ್ನಿ ನಿಮಿತ್ತ ರೋಮ್ ನ ಖಾಸಗಿ ಹೊಟೆಲ್ ನಲ್ಲಿ ಉಳಿದುಕೊಂಡಿರುವ ಸೆರೆನಾ ತಮ್ಮೊಂದಿಗೆ ತಮ್ಮ ಸಾಕು ನಾಯಿಯನ್ನು ಕೂಡ ಕರೆತಂದಿದ್ದರು. ಹೊಟೆಲ್ ಸಿಬ್ಬಂದಿ  ಸಾಕು ನಾಯಿಗೆಂದೇ ವಿಶೇಷ ಮೆನು ತಯಾರಿಸಿದ್ದು, ಕುತೂಹಲದಿಂದ ಸೆರೆನಾ ತಮ್ಮ ನಾಯಿಗೆ ನೀಡಿದ್ದ ಊಟದ ರುಚಿ ನೋಡಿದ್ದಾರೆ. ಬಳಿಕ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೊಟ್ಟೆ ನೋವು  ಕಾಣಿಸಿಕೊಂಡಿದ್ದು, ಸತತ ಶೌಚಾಲಯಕ್ಕೆ ಪರೇಡ್ ಮಾಡಬೇಕಾದ ಸ್ಥಿತಿ ಸೆರೆನಾಗೆ ಎದುರಾಯಿತಂತೆ.

ಈ ವಿಚಾರವನ್ನು ಸ್ವತಃ ಸೆರೆನಾ ವಿಲಿಯಮ್ಸ್ ಸಾಮಾಜಿಕ ಜಾಲತಾಣಗದಲ್ಲಿ ಹಂಚಿಕೊಂಡಿದ್ದು, ಸಾಕು ಪ್ರಾಣಿಗೆ ನೀಡಿದ್ದ ಆಹಾರವನ್ನು ಮಾನವರು ತಿನ್ನಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ  ಸಾಕು ನಾಯಿಗಾಗಿ ನೀಡಲಾಗಿದ್ದ ಮೆನುವಿನಲ್ಲಿ ನಾವು ತಿನ್ನುವ ಸಾಲ್ಮನ್ ರೆಸಿಪಿ ಇತ್ತು. ಹಾಗಾಗಿ ಒಂದು ಸ್ಪೂನ್ ಟೇಸ್ಟ್ ನೋಡುವ ಎಂದೆನಿಸಿ ಒಂದೇ ಒಂದು ಸ್ಪೂನ್ ತಿಂದೆ. ಅದಾದ ಸ್ವಲ್ಪ  ಹೊತ್ತಲ್ಲಿ ಹೊಟ್ಟೆ ನೋವು ಬಂದು ಟಾಯ್ಲೆಟ್​ಗೆ ಹೋಗುವ ಪರಿಸ್ಥಿತಿ ಬಂತು! ಎಂದು ಹೇಳಿಕೊಂಡಿದ್ದಾರೆ.

ನಾಯಿಯ ಆಹಾರ ಮನುಷ್ಯರು ತಿನ್ನುವಂತದ್ದಲ್ಲ. ಅದೊಂದು ರೀತಿಯ ಮನೆ ಸ್ವಚ್ಛ ಮಾಡುವ ಡಿಟರ್​ಜೆಂಟ್​ನಂತೆ ಇತ್ತು! ಎಂದು ವಿಶ್ವದ ನಂಬರ್ 1 ಆಟಗಾರ್ತಿ ಸೆರೆನಾ ತನ್ನ  ಅವಾಂತರಗಳನ್ನು ಹೇಳಿಕೊಂಡಿದ್ದಾರೆ. ನಾಯಿಯ ಸಾಲ್ಮನ್ ಊಟವನ್ನು ನೋಡಿದರೆ ಯಾರೇ ಆದರೂ ವಾಮಿಟ್ ಮಾಡಿಕೊಳ್ಳುತ್ತಾರೆ, ಬೇಕಿದ್ದರೆ ನೋಡಿ ಎಂದು ಆಹಾರವನ್ನೂ  ತೋರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT