ಸಿನ್ಸಿನಾಟಿ ಮಾಸ್ಟರ್ಸ್ನ ಕ್ವಾರ್ಟರ್ಸ್ ಫೈನಲ್ ತಲುಪಿದ ರೋಹನ್ ಬೋಪಣ್ಣಾ-ಇವಾನ್ ಡಾಡಿಗ್ ಜೋಡಿ 
ಕ್ರೀಡೆ

ಸಿನ್ಸಿನಾಟಿ ಮಾಸ್ಟರ್ಸ್ ಕ್ವಾರ್ಟರ್ ಫೈನಲ್ ತಲುಪಿದ ಬೋಪಣ್ಣಾ - ಡಾಡಿಗ್ ಜೋಡಿ

ರೋಹನ್ ಬೋಪಣ್ಣ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಗ್ ಅವರು ಸಿನ್ಸಿನಾಟಿ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ

ಹೊಸದಿಲ್ಲಿ: ರೋಹನ್ ಬೋಪಣ್ಣ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಗ್ ಅವರು ಸಿನ್ಸಿನಾಟಿ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಜುವಾನ್ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ಫ್ಯಾಬಿಯೊ ಫೊಗ್ನಿನಿ ಅವರನ್ನು ಮಣಿಸಿ ಈ ಮುನ್ನಡೆ ಸಾಧಿಸಿದ್ದಾರೆ. 
ಏಳನೇ ಶ್ರೇಯಾಂಕಿತ ಬೋಪಣ್ಣಾ ಮತ್ತು ಡೋಡಿಗ್ ಕಳೆದ ವಾರ ಮಾಂಟ್ರಿಯಲ್ನಲ್ಲಿ ನಡೆದ ರೋಜರ್ಸ್ ಕಪ್ ನಲ್ಲಿ ಅಂತಿಮ ಹಂತವನ್ನು ಪ್ರವೇಶಿಸಿದ್ದರು. ಕೊಲಂಬಿಯಾ-ಇಟಾಲಿಯನ್ ಟೂರ್ನಿಯ ಎರಡನೇ ಸುತ್ತಿನಲ್ಲಿ  5-7, 7-5, 10-8 ಸೆಟ್ ಗಳಿಂದ ಸೋಲನುಭವಿಸಿದರು.
ಇದೇ ಸಮಯದಲ್ಲಿ  ಡಬ್ಲ್ಯೂಟಿಎ ಪಂದ್ಯಾವಳಿಯಲ್ಲಿ, ಆಡಿ ಪ್ರಸಿದ್ದವಾಗಿರುವ ಸಾನಿಯಾ ಮಿರ್ಜಾ ಮತ್ತು ಶುಯಿ ಪೆಂಗ್ ಅವರು ಐರಿನಾ-ಕ್ಯಾಮೆಲಿಯಾ ಬೇಗು ಮತ್ತು ರಾಲುಕಾ ಒಲುರು ವಿರುದ್ಧ 6-3, 6-7 (1) 10-3 ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಒಂದು ಗಂಟೆ ಮತ್ತು 41 ನಿಮಿಷಗಳ ಕಾಲ ನಡೆದ ತಮ್ಮ ಉತ್ತಮ ಪ್ರದರ್ಶನದಲ್ಲಿ ಬೋಪಣ್ಣಾ ಮತ್ತು ಡೋಡಿಗ್ ಅವರ ಪ್ರತಿಸ್ಪರ್ಧಿಗಳನ್ನುೊಂದು ಸೆಟ್ ನಿಂದ ಮಣಿಸಿದರೆ ಇನ್ನೊಂದು ಸೆಟ್ ನಲ್ಲಿ ತಾವು ಶರಣಾದರು. 
ಕ್ಯಾಬಲ್ ಮತ್ತು ಫೊಗ್ನಿನಿ ಅವರ ಸಹ ಕಠಿಣ ಹೋರಾಟವನ್ನು ಕೊಟ್ಟು ಬೋಪಣ್ಣ ಜೋಡಿಗೆ ಸವಾಲಾಗಿದ್ದರು. ಕಡೆಗೂ ಅವರು ಈ ಹೋರಾಟದಲ್ಲಿ ಏಳು ಪಾಯಿಂಟ್ ಗಳನ್ನು ಪಡೆಯಲು ಮಾತ್ರವೇ ಸಾಧ್ಯವಾಯಿತು.
ಬೋಪಣ್ಣಾ ಮತ್ತು ಡೋಡಿಗ್ ಜೋಡಿ ಎರಡನೇ ಶ್ರೇಯಾಂಕಿತರಾದ ಲುಕಾಸ್ ಕುಬೊಟ್ ಮತ್ತು ಮಾರ್ಸೆಲೋ ಮೆಲೊ ಅವರನ್ನು ಎದುರಿಸಿದರು. ಅವರು ಡಿಯಾಗೋ ಶ್ವಾರ್ಟ್ಜ್ಮನ್ ಮತ್ತು ಮಿಸ್ಚಾ ಝವೆರೆವ್ ಅವರನ್ನು 7-5, 6-2 ಸೆಟ್ಗಳಿಂದ ಸೋಲಿಸಿದರು.
ರಾಮ್ ಕುಮಾರ್ ರಾಮನಾಥನ್ ಮತ್ತು ಲಿಯಾಂಡರ್ ಪೇಸ್ ನಿರ್ಗಮನದ ಬಳಿಕ ಈ ಸರಣಿಯಲ್ಲಿ ಸ್ಪರ್ಧೆಗಿಳಿದಿರುವ ಏಕೈಕ ಭಾರತೀಯ ಬೋಪಣ್ನ ಅವರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹೂಮಳೆ ಸುರಿಸಿ ಸ್ವಾಗತ ಕೋರಿದ ಜನತೆ..!

ಮೂರನೇ ಜಗತ್ತಿನ ದೇಶಗಳಿಗೆ ಮತ್ತೊಂದು ಶಾಕ್ ನೀಡಿದ ಡೊನಾಲ್ಡ್ ಟ್ರಂಪ್! ಜಾಗತಿಕವಾಗಿ ಬಹು ದೊಡ್ಡ ಹೊಡೆತ?

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ಕೊಟ್ಟ ಮಾತಿನ ಕದನ: ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಹಗ್ಗದ ಮೇಲಿನ ನಡಿಗೆ! (ನೇರ ನೋಟ)

SCROLL FOR NEXT