ಹರಿಕಾ ದ್ರೋಣವಲ್ಲಿ 
ಕ್ರೀಡೆ

ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್: ಹರಿಕ ದ್ರೋಣವಲ್ಲಿ ಗೆಲುವು

ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ಮಾಸ್ಟರ್ ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.

ಅಬುಧಾಬಿ ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ ಮಾಸ್ಟರ್  ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.
ವಿಶ್ವ ನಂ 9 ನೇ ಶ್ರೇಯಾಂಕರ ಭಾರತೀಯ ಆಟಗಾರ್ತಿ ಹರಿತಾ ಬಿಳಿ ಕಾಯಿಗಳೊಡನೆ ಆಟ ಪ್ರಾರಂಭಿಸಿ ಪ್ರಾರಂಭದಿಂದಲೇ ಆಕ್ರಮಣಕಾರಿ ಆಟವನ್ನು ಆಡಿದ್ದರು.  ಇದು ಅವರ ಜಯಕ್ಕೆ ಅನುಕೂಲವಾಗಿದೆ.
ಆದಾಗ್ಯೂ, ಅಜೆರ್ಬೈಜಾನ್ ನ ತರುಣ ಆಕ್ರಮಣಕಾರಿ ಆಟವಾಡಿ ಭಾರತದ್ ಆಟಗಾರ್ತಿಗೆ ತೀವ್ರ ಹೋರಾಟವನ್ನು ನೀಡಿದರು, ಆದರೆ 40 ಚಲನೆಗಳ ನಂತರ ಹರಿಕಳ ಆಟಕ್ಕೆ ಪ್ರತಿತಂತ್ರ ರೂಪಿಸಲಿಕ್ಕೆ ಸಾಧ್ಯವಾಗದೆ ಸೋಲೊಪ್ಪಿದರು.
"ನಾನು ಪ್ರಾರಂಭ ಉತ್ತಮವಾಗಿತ್ತು. ಆದರೆ ನಡುವೆ ಕೆಲವು ತಪ್ಪು ನಡೆಗಳಿಂದ ಪಂದ್ಯವು ತುಸು ಕಠಿಣವಾಗಿ ಪರಿಣಮಿಸಿತು" ಹರಿಕ ಹೇಳಿದರು.
"ನಾವು ಇಬ್ಬರೂ ಕಾಲದ ಒತ್ತಡದಲ್ಲಿದ್ದೆವು ಮತ್ತು, ನನ್ನದೇ ಆದ ಕೆಲವು ತಂತ್ರಗಳನ್ನು ನಾನು ಅವನಿಗೆ ತೋರಿಸಿದೆ" ಎಂದು ಅವರು ಹೇಳಿದರು.
ಒಂಭತ್ತು-ಸುತ್ತಿನ ಸ್ವಿಸ್ ಪಂದ್ಯಾವಳಿಯಲ್ಲಿ ಏಳು ಸುತ್ತುಗಳ ನಂತರ, ಹರಿಕಾ ಒಟ್ಟು 4.5 ಅಂಕಗಳು, ಸೌಜನ್ಯ ಮೂರು ಗೆಲುವುಗಳು, ಮೂರು ಡ್ರಾಗಳು ಮತ್ತು ಕೇವಲ ಒಂದು ಸೋಲನ್ನು ಕಂಡಿದ್ದಾರೆ. ಅವರು ಶ್ರೆಯಾಂಕದಲ್ಲಿ ಟಾಪ್ -10 ಆಗಿ ಮೂಡಿ ಬಂದರು..
ಪಂದ್ಯಾವಳಿಯ ಎಂಟನೆಯ ಸುತ್ತಿನ ಪಂದ್ಯದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತವು ರಷ್ಯಾದ ಜಿಎಂ ಇವಾನ್ ರೊಝುಮ್ ಅವರನ್ನು ಎದುರಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT