ಹರಿಕಾ ದ್ರೋಣವಲ್ಲಿ 
ಕ್ರೀಡೆ

ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್: ಹರಿಕ ದ್ರೋಣವಲ್ಲಿ ಗೆಲುವು

ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ಮಾಸ್ಟರ್ ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.

ಅಬುಧಾಬಿ ಅಂತರಾಷ್ಟ್ರೀಯ ಚೆಸ್ ಫೆಸ್ಟಿವಲ್ ನ ಮಾಸ್ಟರ್ಸ್ ಪಂದ್ಯಾವಳಿಯ ಏಳನೇ ಸುತ್ತಿನಲ್ಲಿ ಅಜೆರ್ಬೈಜಾನ್ ದ ಸಿಎಂ ಸುಲೇಮನ್ಲಿ ಆಯ್ದಿನ್ ವಿರುದ್ಧ ಭಾರತದ ಗ್ರಾಂಡ್ ಮಾಸ್ಟರ್  ಹರಿಕ ದ್ರೋಣವಲ್ಲಿ ಜಯ ಸಾಧಿಸಿದರು.
ವಿಶ್ವ ನಂ 9 ನೇ ಶ್ರೇಯಾಂಕರ ಭಾರತೀಯ ಆಟಗಾರ್ತಿ ಹರಿತಾ ಬಿಳಿ ಕಾಯಿಗಳೊಡನೆ ಆಟ ಪ್ರಾರಂಭಿಸಿ ಪ್ರಾರಂಭದಿಂದಲೇ ಆಕ್ರಮಣಕಾರಿ ಆಟವನ್ನು ಆಡಿದ್ದರು.  ಇದು ಅವರ ಜಯಕ್ಕೆ ಅನುಕೂಲವಾಗಿದೆ.
ಆದಾಗ್ಯೂ, ಅಜೆರ್ಬೈಜಾನ್ ನ ತರುಣ ಆಕ್ರಮಣಕಾರಿ ಆಟವಾಡಿ ಭಾರತದ್ ಆಟಗಾರ್ತಿಗೆ ತೀವ್ರ ಹೋರಾಟವನ್ನು ನೀಡಿದರು, ಆದರೆ 40 ಚಲನೆಗಳ ನಂತರ ಹರಿಕಳ ಆಟಕ್ಕೆ ಪ್ರತಿತಂತ್ರ ರೂಪಿಸಲಿಕ್ಕೆ ಸಾಧ್ಯವಾಗದೆ ಸೋಲೊಪ್ಪಿದರು.
"ನಾನು ಪ್ರಾರಂಭ ಉತ್ತಮವಾಗಿತ್ತು. ಆದರೆ ನಡುವೆ ಕೆಲವು ತಪ್ಪು ನಡೆಗಳಿಂದ ಪಂದ್ಯವು ತುಸು ಕಠಿಣವಾಗಿ ಪರಿಣಮಿಸಿತು" ಹರಿಕ ಹೇಳಿದರು.
"ನಾವು ಇಬ್ಬರೂ ಕಾಲದ ಒತ್ತಡದಲ್ಲಿದ್ದೆವು ಮತ್ತು, ನನ್ನದೇ ಆದ ಕೆಲವು ತಂತ್ರಗಳನ್ನು ನಾನು ಅವನಿಗೆ ತೋರಿಸಿದೆ" ಎಂದು ಅವರು ಹೇಳಿದರು.
ಒಂಭತ್ತು-ಸುತ್ತಿನ ಸ್ವಿಸ್ ಪಂದ್ಯಾವಳಿಯಲ್ಲಿ ಏಳು ಸುತ್ತುಗಳ ನಂತರ, ಹರಿಕಾ ಒಟ್ಟು 4.5 ಅಂಕಗಳು, ಸೌಜನ್ಯ ಮೂರು ಗೆಲುವುಗಳು, ಮೂರು ಡ್ರಾಗಳು ಮತ್ತು ಕೇವಲ ಒಂದು ಸೋಲನ್ನು ಕಂಡಿದ್ದಾರೆ. ಅವರು ಶ್ರೆಯಾಂಕದಲ್ಲಿ ಟಾಪ್ -10 ಆಗಿ ಮೂಡಿ ಬಂದರು..
ಪಂದ್ಯಾವಳಿಯ ಎಂಟನೆಯ ಸುತ್ತಿನ ಪಂದ್ಯದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತವು ರಷ್ಯಾದ ಜಿಎಂ ಇವಾನ್ ರೊಝುಮ್ ಅವರನ್ನು ಎದುರಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT