ಭಾರತೀಯ ಮಹಿಳಾ ಹಾಕಿ ತಂಡ 
ಕ್ರೀಡೆ

ಭಾರತದ ಮಹಿಳಾ ಹಾಕಿ ತಂಡ ಸ್ಪೇನ್ ವಿರುದ್ಧ 3-2 ಅಂತರದಿಂದ ಜಯ

ನಾಯಕಿ ರಾಣಿ ರಾಂಪಲ್ ಕೊನೆಯಲ್ಲಿ ಆಡಿದ ಮಿಂಚಿನ ಆಟದ ನೆರವಿನಿಂದ ಭಾರತೀಯ ಮಹಿಳಾ ಹಾಕಿ ತಂಡ ಸ್ಪೇನ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದೆ.

ಮ್ಯಾಡ್ರಿಡ್ :ನಾಯಕಿ ರಾಣಿ ರಾಂಪಲ್ ಕೊನೆಯಲ್ಲಿ  ಆಡಿದ  ಮಿಂಚಿನ ಆಟದ ನೆರವಿನಿಂದ  ಭಾರತೀಯ ಮಹಿಳಾ ಹಾಕಿ ತಂಡ  ಸ್ಪೇನ್ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದೆ.
ಕಾಂಸೆಜೊ ಸುಪಿರಿಯರ್ ಡಿ ಡಿಪೊರ್ಟ್ಸ್  ಹಾಕಿ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು  ಬಗ್ಗು ಬಡಿದ ಭಾರತ ತಂಡ  ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಆರಂಭದಲ್ಲಿ ಭಾರತವನ್ನು 3-0 ಅಂತರದಿಂದ   ಸ್ಪೇನ್ ಸೋಲಿಸಿತ್ತು. ಎರಡನೇ ಗೇಮ್ ನಲ್ಲಿ  1-1 ಅಂತರದಲ್ಲಿ ಪಂದ್ಯ ಮುಕ್ತಾಯಗೊಂಡಿತ್ತು. ನಾಲ್ಕನೇ ಗೇಮ್ ನಲ್ಲಿ  3-2 ಅಂತರದಿಂದ ಸ್ಪೇನ್ ನನ್ನು ಭಾರತ ಸೋಲಿಸಿತ್ತು. ಈ ಗೆಲುವಿನೊಂದಿಗೆ ಭಾರತ ಹಾಗೂ ಸ್ಪೇನ್ 1-1 ಸಮಾನ ಅಂತರ ಹೊಂದಿದಂತಾಗಿವೆ. 
ಪಂದ್ಯ ಆರಂಭವಾದ ಮೂರೇ ನಿಮಿಷದಲ್ಲಿ ಮಾರಿಯಾ ಲೊಪೆಜ್  ಎರಡನೇ ಪೆನಾಲ್ಟಿ ಕಾರ್ನರ್ ನಿಂದ ತಂದುಕೊಟ್ಟ ಗೋಲಿನಿಂದ ಸ್ಪೇನ್ ಮುನ್ನಡೆ ಸಾಧಿಸಿತ್ತು.  ಮೊದಲಾರ್ಧದಲ್ಲಿ ಭಾರತ ರಕ್ಷಣಾತ್ಮಕ ಆಟದ ಮೊರೆ ಹೋಗಿತ್ತು.  ಎರಡನೇ ಭಾಗದ ನಂತರ ಭಾರತೀಯ  ಆಟಗಾರರು ಚುರುಕಾಗಿ ಆಟವಾಡಲು ಶುರು ಮಾಡಿದರು.
ವಿಶ್ವದ 10 ನೇ ಕ್ರಮಾಂಕದಲ್ಲಿನ ಭಾರತ ರಕ್ಷಣಾತ್ಮಕ ಆಟದ ಮೇಲೆ ಸ್ಪೇನ್ ಮೇಲೆ ಒತ್ತಡ ಹಾಕಿತ್ತು. 28ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಪರಿವರ್ತಿಸಿದ  ಪೆನಾಲ್ಟಿ ಕಾರ್ನರ್  ಜಯ ತಂದುಕೊಟ್ಟಿತ್ತು ಈ ಹಂತದಲ್ಲಿ ಉಭಯ ತಂಡಗಳು 1-1 ಅಂತರದಲ್ಲಿದ್ದವು.  ಕೊನೆಯ ಹಂತದಲ್ಲಿ ಭಾರತ ಉತ್ತಮ ರೀತಿಯ ಪ್ರದರ್ಶನ ನೀಡಿತ್ತು.
32 ನೇ ನಿಮಿಷದಲ್ಲಿ ಲಾಲ್ ರೆಮ್ ಸಿಯಾಮಿ  ತಂದುಕೊಟ್ಟ ಗೋಲುನಿಂದ ಉತ್ತಮ ಅಂಕ ಪಡೆಯಿತು. 42 ನೇ ನಿಮಿಷದಲ್ಲಿ ವಂದನಾ ಕಾಟಾರಿಯಾ ಕೂಡಾ ಒಂದು ಕೋಲು ತಂದುಕೊಟ್ಟರು. 
ಗೋಲು ಕೀಪರ್ ಸವಿತಾ ಅವರಿಂದ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿದಂತಾಯಿತು. ಆದಾಗ್ಯೂ, ಸ್ಪೇನಿನ ಲೊಲಾ ರಿಯಾರ ಉತ್ತಮ ಗೋಲಿನಿಂದ  ಅಂಕದ ಮಟ್ಟ ಹೆಚ್ಚಾಗತೊಡಗಿತ್ತು.ಆದರೆ, ಅಂಕಗಳ ಏರಿಳಿತದ ನಡುವೆ ಭಾರತೀಯ ನಾಯಕಿ ರಾಣಿ ಅದ್ಬುತವಾದ ಗೋಲು ಬಾರಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo crisis|ವಿಮಾನ ಸೇವೆ ವ್ಯತ್ಯಯ ತನಿಖೆಗೆ DGCAಯಿಂದ ಉನ್ನತ ಮಟ್ಟದ ಸಮಿತಿ ರಚನೆ, ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ ಇಂಡಿಗೋ

5ನೇ ದಿನವೂ ಮುಂದುವರಿದ IndiGo ಅವಾಂತರ: ಬೆಂಗಳೂರು ಏರ್ ಪೋರ್ಟ್ ಲ್ಲಿ ಪ್ರಯಾಣಿಕರ ಗೋಳಾಟ, ಪರದಾಟ, ಫ್ಲೈಟ್ ಟಿಕೆಟ್ ದರ ದುಪ್ಪಟ್ಟು-Video

‘Indigo ವಿಮಾನ’ ಬಿಕ್ಕಟ್ಟು: ಪ್ರಯಾಣಿಕರ ನೆರವಿಗೆ ಬಂದ ಭಾರತೀಯ ರೈಲ್ವೇ ಇಲಾಖೆ, ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ..!

GST ದರ ಬದಲಾವಣೆಯಿಂದ ರಾಜ್ಯದ ಆದಾಯ ಕುಸಿತ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ನಾನು ಯಾರಿಂದಲೂ ಲಂಚ ಪಡೆದಿಲ್ಲ, ಭ್ರಷ್ಟ ಕೃತ್ಯಗಳಲ್ಲಿ ಭಾಗಿಯಾಗುವ ಪೊಲೀಸರು ಸೇವೆಯಿಂದಲೇ ವಜಾ: ಗೃಹ ಸಚಿವ ಪರಮೇಶ್ವರ್

SCROLL FOR NEXT