ತೇಜಿಂದರ್ ಪಾಲ್ ಸಿಂಗ್ 
ಕ್ರೀಡೆ

ತೇಜಿಂದರ್ ಸಿಂಗ್ ಪಾಲ್ ಗೆ ಆಘಾತ: ಗೆದ್ದ ಚಿನ್ನದ ಪದಕ ತೋರಿಸುವ ಮುನ್ನವೇ ತಂದೆ ಸಾವು

ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು....

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ  ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ ತೇಜಿಂದರ್ ಗೆ ತಂದೆ ವಿಧಿವಶರಾದ ಸುದ್ದಿ ಸಿಕ್ಕಿದೆ. ತಂದೆಗೆ ಚಿನ್ನದ ಪದಕ ತೋರಿಸಬೇಕೆಂಬ ಸಿಂಗ್ ಕನಸು ಹಾಗೇ ಕಮರಿ ಹೋಗಿದೆ.
ತೇಜಿಂದರ್ ಪಾಲ್ ಸಿಂಗ್ ಅವರ ತಂದೆ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಈ ಸುದ್ದಿ ಕೇಳಿ ಎಎಫ್ ಐಗೆ ಆಘಾತವಾಗಿದೆ. ನಾವು ಈಗಷ್ಟೇ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೆವು. ಆದರೆ ಇದೇ ಸಂದರ್ಭದಲ್ಲಿ ತೇಜಿಂದರ್ ತಂದೆ ನಿಧನರಾದ ಸುದ್ದಿಯ ಸಂದೇಶ ಕೂಡಾ ಬಂದಿತ್ತು ಎಂದು ಟ್ವೀಟ್ ಮಾಡಿದೆ.
ಮಗ ಏಶ್ಯನ್ ಗೇಮ್ಸ್ ನಲ್ಲಿ ಪಡೆಯುವ ಚಿನ್ನದ ಪದಕವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕೆಂಬುದು ತೇಜಿಂದರ್ ಅವರ ತಂದೆ ಕರಮ್ ಸಿಂಗ್ ಅವರ ಆಸೆಯಾಗಿತ್ತಂತೆ. ಆದರೆ ವಿಧಿ ವಿಪರ್ಯಾಸ, ಕೊನೆಗೂ ಆ ಆಸೆ ಈಡೇರಲೇ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT