ಗಲ್ಝಾರ್ ಸಾಹಬ್ ಹಾಗೂ ಎ ಆರ್ ರೆಹಮಾನ್ 
ಕ್ರೀಡೆ

ಸಂಗೀತ ನಿರ್ದೇಶಕ ರೆಹಮಾನ್, ಗೀತ ರಚನೆಗಾರ ಗುಲ್ಜಾರ್ ರಿಂದ ಹಾಕಿ ವಿಶ್ವಕಪ್ ಶೀರ್ಷಿಕೆ ಗೀತೆ!

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ....

ಭುವನೇಶ್ವರ್: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ ರಚಿಸಲು ಸಹಯೋಗ  ನಡೆಸಲಿದೆ ಎಂದು ಘೋಷಿಸಿದೆ. 
ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪ್ರಕಟಣೆ ನಿಡಿರುವ ಪಟ್ನಾಯಕ್ ಈ ವರ್ಷಒಡಿಶಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ರಹಮಾನ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ ಎಂದು ಹೇಳಿದ್ದಾರೆ.
"ಭಾರತದ ಹೆಮ್ಮೆ ಎ ಆರ್ ರೆಹಮಾನ್ ಹಾಗೂ ಗಲ್ಝಾರ್ ಸಾಹಬ್ ಜೊತೆ  ಸೇರಿ ಹಾಕಿ ವಿಶ್ವಕಪ್ 2018 ಉದ್ಘಾಟನಾ ಗೀತೆ ರಚನೆಗಾಗಿ ಸಹಯೋಗ ನಿಡಲಿದೆ.  ಉದ್ಘಾಟನಾ ಸಮಾರಂಭದಲ್ಲಿ ಒಡಿಶಾದಲ್ಲಿ ರೆಹಮಾನ್ ಇದೇ ಪ್ರಥಮ ಬಾರಿಗೆ ಲೈವ್ ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದಾರೆ." ಅವರು ಬರೆದುಕೊಂಡಿದ್ದಾರೆ.
ಹಾಕಿ ವಿಶ್ವಕಪ್ ನ 14 ನೆಯ ಆವೃತ್ತಿಯು ನವೆಂಬರ್ 28 ರಿಂದ ಡಿಸೆಂಬರ್ 16 ರವರೆಗೆ ಒಡಿಶಾದಲ್ಲಿ ನಡೆಯಲಿದೆ. ಕ್ರೀಡಾಕೂಟ ಆಯೋಜಕ ರಾಷ್ಟ್ರ ಭಾರತದೊಡನೆ ಜಗತ್ತಿನ ಹದಿನಾರು ರಾಷ್ಟ್ರೀಯ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT