ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್:ಮಂಗಳೂರಿನ ಋತ್ವಿಕ್ ಗೆ ಅವಳಿ ಚಿನ್ನ

Raghavendra Adiga

ಮಂಗಳೂರು: ಕೆನಡಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್​​ ಚಾಂಪಿಯನ್‌ಶಿಪ್ 83 ಕೆ.ಜಿ ಸಬ್ ಜೂನಿಯರ್ ಕ್ಲಾಸಿಕ್ ಮತ್ತು ಎಕ್ವಿಪ್ಡ್  ವಿಭಾಗದಲ್ಲಿ ಭಾರತದ ಋತ್ವಿಕ್ ಅಲೆವೂರಾಯ ಕೆ.ವಿ. ಇಂದು ಎರಡು ಚಿನ್ನದ ಪದಕ‌ ಮುಡಿಗೇರಿಸಿಕೊಂಡಿದ್ದಾರೆ. 

ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾರೆ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಋತ್ವಿಕ್ ಅವರು ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರ. 

ಋತ್ವಿಕ್ ಅವರ ತರಬೇತುದಾರ ಮಂಗಳೂರಿನ ಉರ್ವಾಸ್ಟೋರ್ ನವರಾದ  ಪ್ರದೀಪ್ ಕುಮಾರ್ ಆಚಾರ್ಯ ಅವರು ಕೂಡ ಇದೇ ಕೂಟದಲ್ಲಿ ಮಂಗಳವಾರ ನಡೆದ 83 ಕೆ.ಜಿ.ವಿಭಾಗದ ಹಿರಿಯರ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.  ಒಂದೇ ಕ್ರೀಡಾಕೂಟದಲ್ಲಿ ಗುರು ಶಿಷ್ಯರು ಚಿನ್ನದ ಪದಕ ಗೆದ್ದ ಅಪೂರ್ವ ಸಾಧನೆ ಇದಾಗಿದೆ.

SCROLL FOR NEXT