ಕ್ರೀಡೆ

ಭಾರತೀಯ ಸರ್ಫಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ಸರ್ಫಿಂಗ್ ಸ್ವಾಮಿ ನಿಧನ

Raghavendra Adiga

ಮಂಗಳೂರು: ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿಂಗ್‌(ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿಂಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ 76 ವಯಸ್ಸಾಗಿತ್ತು.

ಸ್ವಾಮಿ ಅವರು 2004 ರಲ್ಲಿ ಕರಾವಳಿಯ ಮುಲ್ಕಿಯಲ್ಲಿನ ಮಂತ್ರ ಸರ್ಫ್ ಕ್ಲಬ್‌ನ ಸ್ಥಾಪಕರಾಗಿದ್ದರು. ಈ ಕ್ಲಬ್‌ನ ಮೂಲಕ ಅವರು ಈ ಪ್ರದೇಶದ ಅನೇಕ ಯುವಕರಿಗೆ ಸರ್ಫಿಂಗ್‌ನಲ್ಲಿ ತರಬೇತಿ ನೀಡಿದರು.

ಸ್ವಾಮಿಯವರು ನಾಥ್‌ರ್ ಫ್ಲೋರಿಡಾದ ಮೊದಲ ಸರ್ಫ್‍ ಕ್ಲಬ್‍ನ ಸ್ಥಾಪಕ ಸದಸ್ಯರಾಗಿದ್ದರು. ಅಮೆರಿಕದ ಈಸ್ಟ್‍ ಕೋಸ್ಟ್ ನ  ಸರ್ಫಿಂಗ್ ನಲ್ಲಿ ಪರಿಣಿತರಲ್ಲಿ ಒಬ್ಬರಾಗಿದ್ದರು. ದೇಶದಲ್ಲಿ ಸರ್ಫಿಂಗ್ ಅನ್ನು ಮಾನ್ಯತೆ ಪಡೆದ ಕ್ರೀಡೆಯನ್ನಾಗಿಸುವ ಗುರಿಯೊಂದಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ಭಾರತದಲ್ಲಿ ಸರ್ಫಿಂಗ್ ಆಂದೋಲನದ ವಿವಿಧ ಆಯಾಮಗಳಲ್ಲಿ ಸ್ವಾಮಿ ಪರಿಣಿತಿ ಪಡೆದಿದ್ದರು.

ಅನೇಕರ ಬದುಕನ್ನು ಬೆಳಗಿಸಿದ ಸ್ವಾಮಿ ಅವರ ನಿಧನದಿಂದ ತುಂಬಾ ದು:ಖವಾಗಿದೆ ಎಂದು ಸ್ವಾಮಿ ಅವರಿಂದ ತರಬೇತಿ ಪಡೆದ ಮೊದಲ ತಲೆಮಾರಿನ ಸರ್ಫರ್‌ಗಳಲ್ಲಿ ಒಬ್ಬರಾದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಮಂತ್ರ ಸರ್ಫ್ ಕ್ಲಬ್‌ನ ಮುಖ್ಯ ಬೋಧಕ ಕಿಶೋರ್ ಕುಮಾರ್ ಕಂಬನಿ ಮಿಡಿದಿದ್ದಾರೆ.

SCROLL FOR NEXT