ಕ್ರೀಡೆ

ಇಂಡೋನೇಷ್ಯಾ ಮಾಸ್ಟರ್ಸ್: ಮೊದಲ ಸುತ್ತಿನಲ್ಲೇ ಹೊರ ನಡೆದ ಶ್ರೀಕಾಂತ್, ಸೌರಭ್ ವರ್ಮಾ

Raghavendra Adiga

ಜಕಾರ್ತ್: ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಸೌರಭ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಮಾಸ್ಟರ್ಸ್ 500ರ ಮೊದಲನೇ ಸುತ್ತಿನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಹಣಾಹಣಿಯಲ್ಲಿ ಕಿಡಂಬಿ ಶ್ರೀಕಾಂತ್ ಅವರು ಸ್ಥಳೀಯ ಆಟಗಾರ ಶೆಸಾರ್ ಹಿರೆನ್ ಅವರ ವಿರುದ್ಧ 21-18, 12-21, 14-21 ಅಂತರದಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಒಂದು ಗಂಟೆ ಮೂರು ನಿಮಿಷ ನಡೆದ ಸುದೀರ್ಘ ಕಾದಾಟದಲ್ಲಿ ಶ್ರೀಕಾಂತ್ ಸೋಲುಂಡರು. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲೂ ಕಿಡಂಬಿ ಶ್ರೀಕಾಂತ್ ಅವರು ಮೊದಲನೇ ಸುತ್ತಿನಲ್ಲಿ ಹೊರ ನಡೆದಿದ್ದರು.

ಪುರುಷರ ಮತ್ತೊಂದು ಸಿಂಗಲ್ಸ್‌ ಹಣಾಹಣಿಯಲ್ಲಿ ಭಾರತದ ಮತೊಬ್ಬ ಆಟಗಾರ ಸೌರಭ್ ವರ್ಮಾ ಅವರು ಚೀನಾದ ಲು ಗ್ವಾನ್ ಜ್ವು ಅವರ ವಿರುದ್ಧ ಮೊದಲ ಗೇಮ್‌ನಲ್ಲಿ 21-17 ಅಂತರದಲ್ಲಿ ಗೆಲುವಿನ ಹೊರತಾಗಿಯೂ ನಂತರ 15-21, 10-21 ಅಂತರದಲ್ಲಿ ಸೋಲು ಅನುಭವಿಸಿದರು. 

SCROLL FOR NEXT