ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರಿಗೆ 3.5 ಮಿಲಿಯನ್ ಡಾಲರ್ ಸಂಗ್ರಹಿಸಿದ ಟೆನಿಸ್ ತಾರೆಯರು! 
ಕ್ರೀಡೆ

ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥರಿಗೆ 3.5 ಮಿಲಿಯನ್ ಡಾಲರ್ ಸಂಗ್ರಹಿಸಿದ ಟೆನಿಸ್ ತಾರೆಯರು!

ರಾಡ್ ಲಾವರ್ ಅರೆನಾದಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಮೂಹದೆದುರು ರೋಜರ್ ಫೆಡರರ್ ನಿಕ್ ಕಿರ್ಗಿಯೊಸ್ ಅವರನ್ನು ಆಸ್ಟ್ರೇಲಿಯಾದ ಓಪನ್‌ನ ರ್ಯಾಲಿ ಫಾರ್ ರಿಲೀಫ್‌ ಒನ್ ಸೆಟ್ ಫಿನಾಲೆಯಲ್ಲಿ ಸೋಲಿಸಿದ್ದಾರೆ. ಇದರ ವಿಶೇಷವೆಂದರೆ ಈ ಪಂದ್ಯದ ಮೂಲಕ ಸಂಗ್ರಹವಾಗಿದ್ದ ದತ್ತಿ ಹಣವನ್ನು ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥ ವನ್ಯಜೀವಿಗಳ ಸಂರಕ್ಷಣೆಗೆ ವಿನಿಯೋಜನೆ ಮಾಡಲಾಗುತ್ತಿ

ಮೆಲ್ಬೋರ್ನ್: ರಾಡ್ ಲಾವರ್ ಅರೆನಾದಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಮೂಹದೆದುರು ರೋಜರ್ ಫೆಡರರ್ ನಿಕ್ ಕಿರ್ಗಿಯೊಸ್ ಅವರನ್ನು ಆಸ್ಟ್ರೇಲಿಯಾದ ಓಪನ್‌ನ ರ್ಯಾಲಿ ಫಾರ್ ರಿಲೀಫ್‌ ಒನ್ ಸೆಟ್ ಫಿನಾಲೆಯಲ್ಲಿ ಸೋಲಿಸಿದ್ದಾರೆ. ಇದರ ವಿಶೇಷವೆಂದರೆ ಈ ಪಂದ್ಯದ ಮೂಲಕ ಸಂಗ್ರಹವಾಗಿದ್ದ ದತ್ತಿ ಹಣವನ್ನು ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ಥ ವನ್ಯಜೀವಿಗಳ ಸಂರಕ್ಷಣೆಗೆ ವಿನಿಯೋಜನೆ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಬೆಂಕಿ ಕಾರಣ ಸಾವಿರಾರು ಕೋಟಿ ನಷ್ಟವಾಗಿದೆ. ಇದರ ಪರಿಹಾರಕ್ಕಾಗಿ  ಸುಮಾರು 5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್  ಸಂಗ್ರಹಿಸಲು ಒಂದು ರಾತ್ರಿಯ ಪಂದ್ಯ ಸಹಾಯ ಮಾಡಿದೆ.

ಆಸ್ಟ್ರೇಲಿಯಾ ಕಾಳ್ಗಿಚ್ಚು 28 ಜನರ ಸಾವು, ಹಲವಾರು ಸಾವಿರ ಮನೆಗಳ ನಾಶಕ್ಕೆ ಕಾರಣವಾಗಿದೆ.  ಅವುಗಳಲ್ಲಿ ಹೆಚ್ಚಿನವು ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾ ರಾಜ್ಯಗಳಲ್ಲಿವೆ.

ಪಂದ್ಯಾವಳಿಯಲ್ಲಿ ಪಾಲ್ಗೊಂಡ ಇತರೆ ಆಟಗಾರರೆಂದರೆ ರಾಫೆಲ್ ನಡಾಲ್, ಸೆರೆನಾ ವಿಲಿಯಮ್ಸ್, ಕ್ಯಾರೋಲಿನ್ ವೋಜ್ನಿಯಾಕಿ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಪ್ರಮುಖರು. ಹಲವಾರು ಸಂದರ್ಭಗಳಲ್ಲಿ, ಟೆನಿಸ್ ತಾರೆಗಳ ವಿರುದ್ಧ ಆಡಲು ಸ್ವಯಂಸೇವಕ ಅಗ್ನಿಶಾಮಕ ಸಿಬ್ಬಂದಿಗಳನ್ನು ಸಹ ಕೋರ್ಟ್ ಗೆ ಆಹ್ವಾನಿಸಲಾಗಿತ್ತು. ಪಂದ್ಯಾವಳಿಯಲ್ಲಿ ಸೇವೆ ಸಲ್ಲಿಸಿದ ಏಸ್‌ಗಳಿಗೆ ವಿವಿಧ ಮೊತ್ತ ಮತ್ತು ಆಟಗಾರರು ದಾನ ಮಾಡಿದ ಸರಕುಗಳ ಮಾರಾಟವನ್ನು ಒಳಗೊಂಡಿರುವ ನಿಧಿಸಂಗ್ರಹಣೆ ಪ್ರಯತ್ನಗಳು ಸೋಮವಾರ ಆಸ್ಟ್ರೇಲಿಯನ್ ಓಪನ್ ಪ್ರಾರಂಭವಾದಾಗ  ಸಹ ಮುಂದುವರಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT