ನಿಶಾದ್ ಕುಮಾರ್  
ಕ್ರೀಡೆ

Paralympics ಬೆಳ್ಳಿ ಪದಕ ವಿಜೇತ ನಿಶಾದ್ ಕುಮಾರ್: ಹೈ ಜಂಪ್ ಸ್ಟಾರ್ ತರಬೇತಿ ಪಡೆಯುತ್ತಿರುವುದು ಬೆಂಗಳೂರಿನಲ್ಲಿ

ಭಾರತಕ್ಕೆ ಬಂದು ಮೊದಲು ನಾನು ನನ್ನ ತಾಯಿಯನ್ನು ಭೇಟಿಯಾಗಬೇಕು. ಆದರೆ ಅದಕ್ಕೂ ಮುನ್ನ ಐಫೆಲ್ ಟವರ್ ಏರಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

ಬೆಂಗಳೂರು: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ47 ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿರುವ ನಿಶಾದ್ ಕುಮಾರ್, ಸ್ಪರ್ಧೆಗೆ ಮೊದಲು ಶಾಂತವಾಗಿ ಮತ್ತು ಸಂಯೋಜನೆಯಿಂದ ಆಡಿದ್ದು ನೆರವಿಗೆ ಬಂದಿತು ಎಂದು ಹೇಳಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆಯಿದ್ದ ಬಗ್ಗೆ ಅರಿವನ್ನು ಹೊಂದಿದ್ದ ನಿಶಾದ್, ಎಲ್ಲ ಅಡೆತಡೆಗಳು, ವಿಚಲಿತವಾಗುವ ವಿಷಯಗಳನ್ನು ಮರೆತು ಶಾಂತವಾಗಿ ಆಟದ ಮೇಲೆ ಗಮನ ಹರಿಸಲು ಪ್ರಯತ್ನಪಟ್ಟರಂತೆ. ಹೆಚ್ಚು ಯೋಚನೆ ಮಾಡುತ್ತಿರಲಿಲ್ಲ, ಶಾಂತವಾಗಿರಲು ಪ್ರಯತ್ನಪಟ್ಟೆ. ನಾವು ಯೋಜನೆ ಮಾಡಿಕೊಂಡದ್ದಕ್ಕೆ ತಕ್ಕಂತೆ ಪೂರಕವಾಗಿ ಹೋಗಲು ನೋಡಿದೆ, ಜಂಪಿಂಗ್ ಮೇಲೆ ಗಮನ ಹರಿಸಿದೆ. ಹೈ ಜಂಪ್ ಮಾಡುವಾಗ ನನ್ನ ಗಮನ ಸಂಪೂರ್ಣವಾಗಿ ಅದರ ಮೇಲೆಯೇ ಇತ್ತು, ಅದನ್ನು ನಾನು ತರಬೇತಿಯಿಂದ ಕಲಿತೆ ಎಂದು ಪ್ಯಾರಿಸ್ ನಿಂದ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದರು.

24 ವರ್ಷದ ನಿಶಾದ್ ಕುಮಾರ್ ತರಬೇತಿ ಪಡೆಯುತ್ತಿರುವುದು ಬೆಂಗಳೂರಿನಲ್ಲಿ. ಅತ್ಯುತ್ತಮ ಜಿಗಿತ 2.04 ಮೀಟರ್‌ಗಳಷ್ಟು ಸಾಧಿಸಿದ್ದಾರೆ. ಯುಎಸ್‌ಎಯ ರೋಡೆರಿಕ್ ಟೌನ್‌ಸೆಂಡ್‌ಗಿಂತ ಒಂದು ಸ್ಥಾನ ಹಿಂದುಳಿದರು.

ನನ್ನ ಸ್ಥಾನ ಎಲ್ಲಿದೆ ಎಂದು ಗೊತ್ತಿತ್ತು. ಬೆಳ್ಳಿ ಪದಕ ನಿರೀಕ್ಷೆಯಲ್ಲಿದ್ದೆ. ಅದಕ್ಕಿಂತ ಹೆಚ್ಚು ಚಿನ್ನ ಸಿಕ್ಕಿದ್ದರೆ ಅಚ್ಚರಿಯ ಸಂತೋಷವಾಗುತ್ತಿತ್ತು. ಆದರೂ ನನಗೆ ಈಗ ಸಂತೋಷವಿದೆ ಎಂದರು. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಮೊದಲು ತರಬೇತುದಾರ ಜೆರೆಮಿ ಫಿಶರ್, ಒಲಿಂಪಿಕ್ ಪದಕ ವಿಜೇತ ವಿಲ್ ಕ್ಲೇ ಅವರ ತರಬೇತುದಾರರ ಅಡಿಯಲ್ಲಿ ಯುಎಸ್‌ಎಯಲ್ಲಿ ತರಬೇತಿ ಪಡೆದಿದ್ದರು.

ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕುಮಾರ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಮೂಲತಃ ಹಿಮಾಚಲ ಪ್ರದೇಶದ ಅಂಬ್ ಬಳಿಯ ಬದೌನ್ ಗ್ರಾಮದ ಕುಮಾರ್, ಪದಕ ಗೆದ್ದ ನಂತರ ತನ್ನ ತಾಯಿಗೆ ಕರೆ ಮಾಡಿದ್ದಾರೆ.

6-ಅಡಿ-4-ಇಂಚು ಎತ್ತರ ಹೊಂದಿರುವ ನಿಶಾದ್ ಕುಮಾರ್, ತನ್ನ ಯಶಸ್ಸನ್ನು ತನ್ನ ತರಬೇತುದಾರರಿಗೆ ಮಾತ್ರವಲ್ಲದೆ ಅವನ ತಾಯಿಗೆ ಅರ್ಪಿಸುತ್ತಿದ್ದಾರೆ. 2007 ರಲ್ಲಿ ಪ್ರಾಣಿಗಳಿಗೆ ಮೇವು ಕೊಯ್ಲು ಕತ್ತರಿಸುವ ಯಂತ್ರದ ಅಪಘಾತದಲ್ಲಿ ತನ್ನ ಬಲಗೈಯನ್ನು ಕಳೆದುಕೊಂಡ ನಂತರ ಜೀವನ ಇಲ್ಲಿಗೇ ಮುಗಿದುಹೋಯಿತು ಎಂದು ಕುಗ್ಗದೆ ತನ್ನ ಛಲ, ಹಠ ಬಿಡದೆ ಸಾಧಿಸಲು ಮುಂದಾದರು. ಚಿಕ್ಕ ಮಗುವಾಗಿದ್ದಾಗ, ಕುಮಾರ್ ಯಾವಾಗಲೂ ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸಿ ಭಾರತ ಸೇನೆಗೆ ಸೇರಲು ನೋಡುತ್ತಿದ್ದರಂತೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಭವ್ಯ ಸ್ವಾಗತಕ್ಕಾಗಿ ಭಾರತಕ್ಕೆ ಹಿಂದಿರುಗುವ ಮೊದಲು ಸೆಪ್ಟೆಂಬರ್ 9 ರವರೆಗೆ ಪ್ಯಾರಿಸ್‌ನಲ್ಲಿ ಉಳಿಯಲು ಕುಮಾರ್ ಯೋಜಿಸಿದ್ದಾರೆ. ಭಾರತಕ್ಕೆ ಬಂದು ಮೊದಲು ನಾನು ನನ್ನ ತಾಯಿಯನ್ನು ಭೇಟಿಯಾಗಬೇಕು. ಆದರೆ ಅದಕ್ಕೂ ಮುನ್ನ ಐಫೆಲ್ ಟವರ್ ಏರಲು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT