ಕುಸ್ತಿಪಟು ಶಿವರಾಜ್ ರಕ್ಷೆ 
ಕ್ರೀಡೆ

ತಪ್ಪು ತೀರ್ಪು ಎಂದು ರೆಫರಿಗೆ ಕಾಲಿನಿಂದ ಒದ್ದ ಭಾರತೀಯ ಕುಸ್ತಿಪಟು ಶಿವರಾಜ್ ರಕ್ಷೆ, ವಿಡಿಯೋ ವೈರಲ್!

67ನೇ ಮಹಾರಾಷ್ಟ್ರ ಕೇಸರಿ ಕುಸ್ತಿ ಪಂದ್ಯಾವಳಿಯ ಸಮಯದಲ್ಲಿ, ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದರು. ಸೆಮಿಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ನಾಂದೇಡ್ ಕುಸ್ತಿಪಟು ಶಿವರಾಜ್ ರಕ್ಷೆ ತನಗೆ ವಿರುದ್ಧ ತೀರ್ಪು ನೀಡಿದ್ದಾರೆ.

ಮುಂಬೈ: ಕೆಲವೊಮ್ಮೆ ಕ್ರೀಡಾ ಮೈದಾನದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ. ಆದರೆ ಇಂತಹ ಘಟನೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅಹಲ್ಯಾನಗರದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. 67ನೇ ಮಹಾರಾಷ್ಟ್ರ ಕೇಸರಿ ಕುಸ್ತಿ ಪಂದ್ಯಾವಳಿಯ ಸಮಯದಲ್ಲಿ, ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದರು. ಸೆಮಿಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ನಾಂದೇಡ್ ಕುಸ್ತಿಪಟು ಶಿವರಾಜ್ ರಕ್ಷೆ ತನಗೆ ವಿರುದ್ಧ ತೀರ್ಪು ನೀಡಿದ್ದಾರೆ ಎಂದು ರೆಫರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದಾಗ ಭಾರಿ ಗಲಾಟೆ ನಡೆದ್ದು ವಾತಾವರಣವು ತೀವ್ರ ಉದ್ವಿಗ್ನಗೊಂಡಿತ್ತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ಶಾಂತಗೊಳಿಸಿದರು. ರಕ್ಷೆ ಮತ್ತು ಪೃಥ್ವಿರಾಜ್ ಮೊಹೋಲ್ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದರಲ್ಲಿ ಮೊಹೋಲ್ ಪರವಾಗಿ ತೀರ್ಪು ಬಂದಿತು. ಪೃಥ್ವಿರಾಜ್ ಮೊಹೋಲ್ ಪರವಾಗಿ ಫಲಿತಾಂಶ ಬಂದ ತಕ್ಷಣ, ಎರಡೂ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಾದ ನಂತರ, ಶಿವರಾಜ್ ರಕ್ಷೆ ರೆಫರಿಯ ಕಾಲರ್ ಹಿಡಿದು ಮಾಧ್ಯಮಗಳ ಮುಂದೆ ಒದ್ದಿದ್ದು ಈ ನಿರ್ಧಾರದಲ್ಲಿ ಅವರ ಅಪ್ರಾಮಾಣಿಕತೆಯ ಆರೋಪ ಮಾಡಿದರು.

ಅಂತಿಮ ಪಂದ್ಯದ ನಂತರ ಪೃಥ್ವಿರಾಜ್ ಮೊಹೋಲ್ ಅವರನ್ನು ವಿಜೇತರೆಂದು ಘೋಷಿಸಿದಾಗ ವಿವಾದ ಪ್ರಾರಂಭವಾಯಿತು. ನೀವು ನೀಡಿದ ನಿರ್ಧಾರ ತಪ್ಪಾಗಿದೆ ಎಂದು ರಕ್ಷಾ ರೆಫರಿಯ ಮುಂದೆ ಹೇಳಿಕೊಂಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆ ತೀರ್ಪನ್ನು ಪರಿಶೀಲಿಸುವಂತೆ ತೀರ್ಪುಗಾರರನ್ನು ವಿನಂತಿಸಿದರು. ಈ ಘಟನೆಯ ನಂತರ, ಶಿವರಾಜ್ ರಕ್ಷೆ ನನ್ನನ್ನು ತಪ್ಪಾಗಿ ಹೊರಗಿಡಲಾಗಿದೆ ಎಂದು ಹೇಳಿದರು. ಆ ನಿರ್ಧಾರದಲ್ಲಿ ಸ್ಪಷ್ಟವಾಗಿ ಪಕ್ಷಪಾತವಿತ್ತು. ನಾನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ದೂರು ನೀಡಿದ್ದೇನೆ. ನನಗೆ ವಿಮರ್ಶೆ ತೋರಿಸಬೇಕೆಂದು ನಾನು ಒತ್ತಾಯಿಸಿದ್ದೇನೆ. ಅಲ್ಲದೆ ಆ ನಿರ್ಧಾರ ಸರಿಯಾಗಿದ್ದರೆ ನಾನು ಆಟವನ್ನು ಬಿಡುತ್ತೇನೆ ಎಂದು ರಕ್ಷೆ ಸವಾಲು ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ

ವಿರೋಶ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ವಿಜಯ್ ದೇವರಕೊಂಡ, ಆಶಿಕಾ

ED ದಾಳಿ ಭೀತಿ, ಉದ್ಯಮಿ CJ Roy ರೀತಿಯಲ್ಲೇ BBMP ನಿವೃತ್ತ ಎಂಜಿನಿಯರ್ ಆತ್ಮಹತ್ಯೆಗೆ ಶರಣು!

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

SCROLL FOR NEXT